
ಕೋವರ್ ಕೊಲ್ಲಿ ಇಂದ್ರೇಶ್
ಮಡಿಕೇರಿ ; ನಗರ ಪ್ರದೆಶದಲ್ಲಿ ವ್ಯಾಪಕವಾಗಿರುವ ಆನ್ಲೈನ್ ವಂಚಕರು ಈಗ ವೇಶ್ಯೆಯರನ್ನು ಒದಗಿಸುವ ಆಮಿಷವೊಡ್ಡಿ ಹಣ ಸಾರ್ವಜನಿಕರನ್ನು ವಂಚಿಸುತಿದ್ದಾರೆ. ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿ ನಿವಾಸಿ ಮಂಜು ಎಂಬುವವರು ದಿನಾಂಕ: 29-06-2024 ರಂದು ಮೊಬೈಲ್ ನಲ್ಲಿರುವ Locanto App ನಲ್ಲಿ Kushalnagar Top Model Sexy Aunties Service Available Kushalnagar – ಎಂಬ ಜಾಹೀರಾತಿನ ಸೈಟ್ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಒಬ್ಬ ವ್ಯಕ್ತಿ ಮಾತನಾಡಿ ನಾನು ಕುಶಾಲನಗರದ ಕಾಳೇಘಾಟ್ ಲಾಡ್ಜ್ ಮೇನೇಜರ್ ಎಂಬುದಾಗಿ ಪರಿಚಯಿಸಿಕೊಂಡು ಲಾಡ್ಜ್ನಲ್ಲಿ ಯುವತಿಯರಿಂದ ಸೆಕ್ಸ್/ಮಸಾಜ್ ಮಾಡಿಸಲಾಗುವುದು ಹಾಗೂ ಆನ್ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಯುವತಿಯರ ಸೇವೆಗೆ ಏರ್ಪಾಡು ಮಾಡಲಾಗುವುದು ಎಂದು ತಿಳಿಸಿದ.
ದೂರುದಾರರ Whatsapp ಗೆ ಕೆಲವು ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿ ಕೊಟ್ಟು ತಮ್ಮ ಸೇವೆಗೆ ಒಂದು ಗಂಟೆಗೆ ರೂ. 1500/- ಮತ್ತು ಒಂದು ರಾತ್ರಿಗೆ ರೂ. 4000/- ಗಳ ಹಣ ನೀಡಬೇಕಾಗುವುದು ಎಂದು ಹೇಳಿದ.

ದೂರುದಾರರೂ ಗೂಗಲ್ ಪೇ ಮುಖಾಂತರ ರೂ. 1500/- ಹಣವನ್ನು ಕಳುಹಿಸಿದ್ದು, ಅದೇ ವ್ಯಕ್ತಿ ಕರೆ ಮಾಡಿ ಕಾಳೇಘಾಟ್ ಲಾಡ್ಜ್ ಬಳಿ ಬಂದು ಲೋಕೇಷನ್ ಕಳುಹಿಸುವಂತೆ ಮತ್ತು ಯಾವ ಬಣ್ಣದ ಬಟ್ಟೆ ಹಾಕಿದ್ದೀರಾ ಎಂದು ತಿಳಿಸುವಂತೆ ಹೇಳಿದ.
ಆ ವ್ಯಕ್ತಿಯು ಹೇಳಿರುವಂತೆ ಕಾಳೇಘಾಟ್ ಲಾಡ್ಜ್ನ ಬಳಿ ಹೋಗಿ ಕರೆ ಮಾಡಿದಾಗ ಪುನಃ ಆನ್ಲೈನ್ನಲ್ಲಿ ಹಣ ಹಾಕಬೇಕು ಎಂದು ಹೇಳಿದ್ದರಿಂದ ಅನುಮಾನ ಬಂದು ಕಾಳೇಘಾಟ್ ಲಾಡ್ಜ್ ಗೆ ತೆರಳಿ ರಿಸೆಪ್ಶನ್ನಲ್ಲಿ ಈ ಮೇಲಿನ ವಿಚಾರ ಹೇಳಿದಾಗ ಆ ತರಹದ ಯಾವುದೇ ರೀತಿಯ ಅವ್ಯವಹಾರ ಇರುವುದಿಲ್ಲ ಹಾಗೂ ಇದೇ ವಿಚಾರ ಹೇಳಿಕೊಂಡು 3-4 ಜನ ಬಂದಿದ್ದರು ನಿಮಗೆ ಯಾರೋ ಮೋಸ ಮಾಡಿದ್ದಾರೆ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಅಲ್ಲಿ ತಿಳಿಸಿರುತ್ತಾರೆ.
ಅದರಂತೆ ಅಪರಿಚಿತ ವ್ಯಕ್ತಿಗಳು ಕಾಳೇಘಾಟ್ ಹೋಟೇಲ್ ಮತ್ತು ಲಾಡ್ಜ್ ಮೇನೇಜರ್ ಎಂದು ಹೆಸರು ಹೇಳಿಕೊಂಡು ಲಾಡ್ಜ್ನಲ್ಲಿ ಹೆಂಗಸರಿಂದ ಸೆಕ್ಸ್ ಮಸಾಜ್ ಮಾಡಿಸುವುದಾಗಿ ನಂಬಿಸಿ ಆನ್ಲೈನ್ನಲ್ಲಿ ಹಣ ಪಡೆದು ವಂಚನೆ ಮಾಡಿರುವವರನ್ನು ಪತ್ತೆಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದಿನಾಂಕ: 29-06-2024 ರಂದು ದೂರು ನೀಡಿದ್ದರು.

ಈ ಕುರಿತು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ 66(ಸಿ), 66 (ಡಿ) ಐಟಿ ಆಕ್ಟ್ & 419, 420, 468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೋಲೀಸರು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ & ಸಾಕ್ಷಾಧರಗಳನ್ನು ಕಲೆಹಾಕಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 06-07-2024 ರಂದು ಹಾಸನ ಜಿಲ್ಲೆ ಮೂಲದ 08 ಜನ ಆರೋಪಿಗಳನ್ನು ಬೆಂಗಳೂರುನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳನ್ನು ಮಂಜನಾಥ, 29 ವರ್ಷ, ಸುಳ್ಳಕ್ಕಿ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ,ಸಂದೀಪ್ ಕುಮಾರ್.ಸಿ.ಎಸ್, 25 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ.,ರಾಕೇಶ್.ಸಿ.ಬಿ, 24 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ, ಜಯಲಕ್ಷ್ಮೀ.ಕೆ, 29 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ., ಸಹನ.ಎಸ್, 19 ವರ್ಷ, ರಾಮನಗರ ಗ್ರಾಮ ಬೇಲೂರು ತಾ||, ಹಾಸನ ಜಿಲ್ಲೆ, ಪಲ್ಲವಿ, 30 ವರ್ಷ, ರಾಮನಗರ ಗ್ರಾಮ, ಬೇಲೂರು ತಾ||, ಹಾಸನ, ಅಭಿಷೇಕ್, 24 ವರ್ಷ, ಇರಗಲ್ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ, ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕಿ ಯೊಬ್ಬಳ ಹೆಡೆಮುರಿ ಕಟ್ಟಿದ್ದಾರೆ.

ಆರೋಪಿಗಳು ಒಟ್ಟಾಗಿ ಆನ್ಲೈನ್ ಜಾಲತಾಣಗಳ ಮೂಲಕ ಯುವತಿಯರನ್ನು ಒದಗಿಸುವುದಾಗಿ ಆಮಿಷವೊಡ್ಡುತಿದ್ದರು. ರಾಜ್ಯದ ಯಾವುದೇ ಊರಿನಲ್ಲೂ ಇವರು ಯುವತಿಯರು ಸಿಗುತ್ತಾರೆ ಎಂದು ಜಾಹೀರಾತು ಪ್ರಕಟಿಸುತಿದ್ದರು. ಈ ದಂಧೆಯ ಮೂಲಕವೇ ಇವರು ಲಕ್ಷಾಂತರ ರೂಪಾಯಿ ಗಳಿಸಿದ್ದು ಮೋಜಿನ ಜೀವನ ನಡೆಸುತಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ.
ಗ್ರಾಹಕರನ್ನು ಹೋಟೆಲ್ ವರೆಗೆ ಬರಲು ಹೇಳಿ ಅಲ್ಲಿಯೂ ಪುನಃ ಹಣ ಹಾಕಿಸಿಕೊಳ್ಳುತಿದ್ದರು. ನಂತರ ಇವತ್ತು ಸೇವೆ ರದ್ದಾಗಿದೆ ಎಂದು ಸುಳ್ಳು ನೆಪ ಒಡ್ಡುತಿದ್ದರು. ಹಣ ಕಳೆದುಕೊಂಡವರು 2-5 ಸಾವಿರ ಆಗಿರುವುದರಿಂದ ಪೋಲೀಸರಿಗೆ ದೂರು ನೀಡಲು ಮುಜುಗರವಾಗಿ ದೂರು ನೀಡುತ್ತಿರಲಿಲ್ಲ ಇದೇ ಇವರಿಗೆ ವರದಾನ ಆಗಿತ್ತು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿಕೊಳ್ಳಲಾಗುತಿದ್ದ ಎರಡು ಕಾರು, 17 ಮೊಬೈಲ್ , ಒಂದು ಲ್ಯಾಪ್ ಟಾಪ್ , 25 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಆರೋಪಿಗಳು ಕರೆ ಮಾಡಿದ ವ್ಯಕ್ತಿಗಳ ಊರಿನಲ್ಲಿರುವ ಲಾಡ್ಜ್ನ ಹೆಸರು ಹೇಳಿಕೊಂಡು ಹಲವು ಜನರಿಗೆ ವಂಚಿಸಿ ರೂ. 3 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಹಾಲಿ ಕಾನೂನಿನ ಪ್ರಕಾರ ವೇಶ್ಯಾವೃತ್ತಿ ನಡೆಸಲು ಸುಪ್ರೀಂ ಕೋರ್ಟು ಅನುಮತಿ ನೀಡಿದ್ದರೂ ಅವರನ್ನು ಬಳಸಿಕೊಂಡು ಮೂರನೇ ವ್ಯಕ್ತಿಗಳು ವೇಶ್ವಾವಾಟಿಕೆ ನಡೆಸಲು ಅವಕಾಶ ಇಲ್ಲ. ಮತ್ತು ವೇಶ್ಯಾ ವೃತ್ತಿಯನ್ನೂ ವೃತ್ತಿ ಎಂದು ಕೋರ್ಟು ಪರಿಗಣಿಸಿರುವುದರಿಂದ ಆಕೆಯ ಗ್ರಾಹಕರ ಮೇಲೆ ಕ್ರಮ ಕೈಗೊಳ್ಳಲೂ ಅವಕಾಶ ಇರುವುದಿಲ್ಲ. ಆದರೆ ವೇಶ್ಯೆಯು ತನ್ನದೇ ಸ್ಥಳದಲ್ಲಿ ಸೇವೆ ಒದಗಿಸುವ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯಬಹುದಾಗಿದೆ.
ಅಂತರ್ಜಾಲದಲ್ಲಿ ಮಹಿಳೆಯರಿಂದ ಸೆಕ್ಸ್/ಮಸಾಜ್ /ವೇಶ್ಯಾವಾಟಿಕೆ ಸೇವೆಗ…