ಕಿಚ್ಚ ಸುದೀಪ್ ಸದ್ಯ ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ‘ಬಿಲ್ಲ ರಂಗ ಬಾಷಾ’.ಮೊದಲ ಹಂತದ ಚಿತ್ರೀಕರಣವನ್ನು ಈಗಾಗಲೇ ಪೂರ್ಣಗೊಳಿಸಿದೆ. ಈ ಸಿನಿಮಾ ಕಳೆದ ವರ್ಷವೇ ಸೆಟ್ಟೇರಿದ್ದು ಇನ್ನು ರಿಲೀಸ್ ಆಗಲು ತಡವಾಗುತ್ತಿದೆ.ಈ ಕುರಿತು ಸುದೀಪ್ ಕಾರಣವನ್ನು ಹೇಳಿದ್ದಾರೆ.

ನಾನು ಮಾರ್ಕ್ ಸಿನಿಮಾಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದೆ. ಬಳಿಕ ಸಿಸಿಎಲ್ ನನಗೆ ಸ್ವಲ್ಪ ರಿಲೀಫ್ ನೀಡಿತು. ಸಿನಿಮಾ ಮಾಡಬೇಕು.ಆದರೆ ಯಾಂತ್ರಿಕವಾಗಿ ಸಿನಿಮಾ ಮಾಡೋಕೆ ನನ್ನಿಂದ ಆಗಲ್ಲ. ನಾನು ಕೂಡ ಮನುಷ್ಯ.ನನಗೆ ಒಂದು ಸಣ್ಣ ಬ್ರೇಕ್ ಬೇಕು. ಯಾವುದನ್ನಾದರೂ ನಾವು ತುಂಬಾ ಪ್ರೀತಿಸಿದರೆ ಅದರಿಂದ ನಾವು ಸ್ವಲ್ಪ ದೂರ ಇರಬೇಕು. ಆಗ ಮತ್ತೆ ಪ್ರೀತಿ ಬೆಳೆಯುತ್ತದೆ. ಒಮ್ಮೆ ಬಿಲ್ಲ ರಂಗ ಬಾಷ ಶುರುವಾದರೆ ಮತ್ತೆ ಈ ಕಡೆ ತಿರುಗಿ ನೋಡಲ್ಲ. 8-9 ತಿಂಗಳು ಅದರಲ್ಲೇ ಕಳೆಯುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

ಬಿಲ್ಲ ರಂಗ ಬಾಷಾ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಬಿಲ್ಲ ರಂಗ ಬಾಷಾ ಚಿತ್ರ ಕನ್ನಡದ ಬಿಗ್ ಬಜೆಟ್ನ ಸಿನಿಮಾ ಆಗಿದೆ.ಈ ಸಿನಿಮಾ 40-50ರ ದಶಕದ ಕತೆ ಇರಬಹುದೆಂಬ ಅನುಮಾನ ಇದೆ.ಅನೂಪ್ ಭಂಡಾರಿ’ ಜೊತೆಗೆ ಸುದೀಪ್ ಅವರಿಗೆ ಇದು ಎರಡನೇ ಸಿನಿಮಾ. ಸಿನಿಮಾದ ಬಹುತೇಕ ಭಾಗ, ಸೆಟ್ಗಳಲ್ಲಿಯೇ ಚಿತ್ರೀಕರಣ ಆಗುತ್ತಿದೆ.






