ಕೇರಳ ರಾಜ್ಯವನ್ನು ಇನ್ನು ಮುಂದೆ ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿಲುವಳಿಗೆ ರಾಜ್ಯ ವಿಧಾನಸಭೆ ಬುಧವಾರ (ಆಗಸ್ಟ್ 9) ಸರ್ವಾನುಮತದ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿಲುವಳಿ ಮಂಡಿಸಿದರು. ಸಂವಿಧಾನ ಎಂಟನೇ ಪರಿಚ್ಛೇದ ಸೇರಿ ಎಲ್ಲಾ ಭಾಷೆಗಳಲ್ಲಿ ರಾಜ್ಯವನ್ನು ʼಕೇರಳಂʼ ಎಂದ ಬದಲಾಯಿಸಬೇಕು ಎಂದು ನಿಲುವಳಿ ಹೇಳುತ್ತದೆ.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ ಯುಡಿಎಫ್ ಕೂಡ ಈ ನಿಲುವಳಿಗೆ ಯಾವುದೇ ಬದಲಾವಣೆ ಹಾಗೂ ತಿದ್ದುಪಡಿ ಇಲ್ಲದೆ ಒಪ್ಪಿಗೆ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ಸುಳ್ಳು ಸುದ್ದಿ ಆರೋಪ | 8 ಯೂಟ್ಯೂಬ್ ವಾಹಿನಿ ನಿಷೇಧಿಸಿದ ಕೇಂದ್ರ
ಕೇರಳಂ ಮರುನಾಮಕರಣ cಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ ಎಂದು ಸಭಾಧ್ಯಕ್ಷ ಎ.ಎಮ್ ಶಂಶೀ ಅವರು ಘೋಷಣೆ ಮಾಡಿದರು.
ನಿಲುವಳಿ ಮಂಡನೆ ವೇಳೆ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಮಲಯಾಳಂನಲ್ಲಿ ʼಕೇರಳಂʼ ಎಂದಿದೆ. ಆದರೆ ಇತರೆ ಭಾಷೆಗಳಲ್ಲಿ ಅದು ಕೇರಳ ಎಂದಿದೆ. ಸಂವಿಧಾನದ ಮೊದಲ ಪರಿಚ್ಛೇದದಲ್ಲೂ ಕೇರಳ ಎಂದಿದೆ. ಇದನ್ನು ಸಂವಿಧಾನದ ಮೂರನೇ ವಿಧಿಯಡಿ ಕೇರಳಂನ ಹೆಸರು ಮರುನಾಮಕರಣ ಮಾಡಬೇಕು. ಸಂವಿಧಾನದ ಎರಡನೇ ಪರಿಚ್ಛೇದದ ಅನ್ವಯ ಎಲ್ಲಾ ಭಾಷೆಗಳಲ್ಲೂ ಕೇರಳಂ ಎಂದು ಬದಲಾಯಿಸಲು ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು ಎಂದು ಈ ಸದನ ಆಗ್ರಹಿಸುತ್ತದೆ” ಎಂದು ತಿಳಿಸಿದರು.