
ಬೆಂಗಳೂರು : ಕಳೆದ 17 ವರ್ಷಗಳ ಹಿಂದೆ ಬಿಬಿಎಂಪಿ (BBMP)ವ್ಯಾಪ್ತಿಗೆ ಸೇರಿದ್ದ 110 ಹಳ್ಳಿಗಳ ಜನರಿಗೆ ( village people))ಕಾವೇರಿ ಕುಡಿಯುವ ನೀರಿನ ಪೂರೈಕೆಯ ಕಾಮಗಾರಿ ತ್ವರಿತವಾಗಿ ಕೈಗೊಂಡರು ಗುಣಮಟ್ಟವನ್ನು ಕಾಪಾಡಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Sivakumar)ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕೆಂಗೇರಿ- ಉತ್ತರಹಳ್ಳಿ( Kengeri- Uttarahalli)ರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಹತ್ತಿರ ಕಾಮಗಾರಿ ವೀಕ್ಷಣೆ ಮಾಡಿದ ಅವರು, ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 3 ದಿನಗಳಲ್ಲಿ ಕಾವೇರಿ ಕುಡಿಯುವ ನೀರು ಪೂರೈಸುವ ಪೈಪ್ ಅಳವಡಿಕೆ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದಾಗ, ಕಾಮಗಾರಿ ಬೇಗ ಮುಗಿಸಿ. ಆದರೆ ಅವಸರದಲ್ಲಿ ಕಾಮಗಾರಿಯ ಗುಣಮಟ್ಟ ಮರೆಯದಿರಿ ಎಂದು ಸಲಹೆ ನೀಡಿದರು.

ಬೆಂಗಳೂರು ನಗರದ, ಕೆಂಗೇರಿ- ಉತ್ತರಹಳ್ಳಿ ರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಹತ್ತಿರ ಕ್ರಮವಾಗಿ ಮೂರು ಕಡೆ 30 ಮೀ, 20 ಮೀ, 70 ಮೀ ಒಟ್ಟು 120 ಮೀ. ಬಾಕಿ ಕಾಮಗಾರಿ ಬಗ್ಗೆ ಡಿಸಿಎಂ ಮಾಹಿತಿ ಪಡೆದುಕೊಂಡರು ಬಳಿಕ ಬೆಂಗಳೂರಿನ ತಾತಗುಣಿವರೆಗೆ ಕಾವೇರಿ ಕುಡಿಯುವ ನೀರನ್ನು ಪಂಪ್ ಮಾಡುವ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ 5ನೇ ಹಂತದ ಪಂಪ್ ಸ್ಟೇಷನ್ ಅನ್ನು ಪರಿವೀಕ್ಷಣೆ ಮಾಡಿದರು.
ನಂತರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆ ಕಾಡನ ಹಳ್ಳಿಯ ಬೂಸ್ಟರ್ ಪಂಪಿಂಗ್ ಹಾಗೂ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಅವರು ಇಲಾಖೆಯ ಇಂಜಿನಿಯರ್ ಗಳು ಮತ್ತು ಅಧಿಕಾರಿಗಳಿಂದ ತಾಂತ್ರಿಕ ವಿವರಗಳನ್ನು ಪಡೆದುಕೊಂಡರು.





