ಬೀದರ್ : ಭಾರತ ದೇಶವು ಯುಗಾಂತರದ ಬದಲಾವಣೆಗೆ ಸಾಕ್ಷಿಯಾಗುತ್ತಿದೆ ಇಡೀ ವಿಶ್ವವೇ ಭಾರತದ ಶಕ್ತಿ ಮತ್ತು ಕೊಡುಗೆಯನ್ನು ಹಾಡಿ ಹೊಗಳುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸುರೇಶ ಚನ್ನಶೇಟ್ಟಿ ಅವರು ಹೇಳಿದರು.ನಗರದ ಚಿಕ್ಕಪೇಟ್ ಹತ್ತಿರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೇರವೆರಿಸಿ ಅವರು ಮಾತನಾಡಿದರು.
ನಾವು ಅದ್ಭುತ ಅಭಿವೃದ್ಧಿ, ಸಾಧನೆಗಳನ್ನು ನೋಡುತ್ತಿರುವ ಕಾಲದಲ್ಲಿ ಬದುಕುತ್ತಿದ್ದೇವೆ ಇದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹಾನ ವ್ಯಕ್ತಿಗಳನ್ನು ಮರೆಯೆಲೆಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾವಶೆಟ್ಟಿ ಪಾಟೀಲ,ಡಾ ಸುರೇಶ ಪಾಟೀಲ, ಶಿವಶಂಕರ ಟೋಕರೆ, ಗುರುನಾಥ ರಾಜಗೀರಾ, ಕೃಪಾಸಿಂಧು ಪಾಟೀಲ, ಅನೀಲ ಬಿರಾದಾರ, ನಿತಿನ ಕರ್ಪೂರ,ಅನೀಲ ಮಸೂದಿ, ಅಮರ ಡೊಳ್ಳಿ ಸಚ್ಚಿದಾನಂದ ಚಿದ್ರಿ, ಸಂಗಮೇಶ ಗಾದಗಿ ಸಿದ್ದು ಭಾಲ್ಕೆ ,ಸಂಗಮೇಶ ಜ್ಯಾಂತೆ, ವಿಜಯ ವಡ್ಡೆ ಸೇರಿದಂತೆ ಇತರರಿದ್ದರು.