ಸುಪ್ರೀಂಕೋರ್ಟ್ ಆದೇಶಕ್ಕೆ ಕರ್ನಾಟಕ ಸರ್ಕಾರ (karnataka government) ಕಿಂಚಿತ್ತು ಬೆಲೆ ಕೊಡಲ್ವಾ..? ಹೀಗೊಂದು ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಸಾರ್ವಜನಿಕರಿಂದ ಸಂಗ್ರಹ ಮಾಡಿರುವ 46,100 ಕೋಟಿ ಹಣವನ್ನು ಜಪ್ತಿ ಮಾಡಿ ಜನರಿಗೆ ವಾಪಸ್ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದ್ದರೂ ಸರ್ಕಾರ ಬಡ ಜನರ ಬಗ್ಗೆ ಕಿಂಚಿತ್ತು ತಲೆಕೆಡಿಸಿಕೊಂಡಿಲ್ಲ.
![](https://pratidhvani.com/wp-content/uploads/2024/02/IMG-20240221-WA0041-732x1024.webp)
![](https://pratidhvani.com/wp-content/uploads/2024/02/IMG-20240221-WA0043-704x1024.webp)
![](https://pratidhvani.com/wp-content/uploads/2024/02/IMG-20240221-WA0042-717x1024.webp)
ಪಿಎಸಿಎಲ್ ಸಂಸ್ಥೆ 5 ಲಕ್ಷಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹ ಮಾಡಿತ್ತು. 46,100 ಕೋಟಿ ಹಣ ಸಂಗ್ರಹ ಮಾಡಿದ ಬಳಿಕ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಿವೃತ್ತ ನ್ಯಾಯಮೂರ್ತಿ ಲೋಧ ಸಮಿತಿಯನ್ನು ನೇಮಕ ಮಾಡಿತ್ತು. ಆ ಸಮಿತಿ PACL ಆಸ್ತಿಗಳ ವಿವರವನ್ನು ಪಟ್ಟಿ ಮಾಡಿ ಕೊಟ್ಟಿದ್ದು, ಪಟ್ಟಿಯಲ್ಲಿರುವ ಆಸ್ತಿಗಳ ಮಾರಾಟ ಅಥವಾ ನೋಂದಣಿ ಏನನ್ನೂ ಮಾಡಕೂಡದು ಎಂದು ಸರ್ಕಾರಕ್ಕೆ (government)ನೋಟಿಸ್ ಕೊಟ್ಟಿತ್ತು.
ಪಿಎಸಿಎಲ್ ಸಂಸ್ಥೆ ಆಸ್ತಿಯನ್ನು ಲೋಧ ಸಮಿತಿ ಪತ್ತೆ ಮಾಡಿ ವರದಿ ಕೊಟ್ಟ ಬಳಿಕ ಹರಾಜು ಹಾಕಿ ಬಡ ಜನರಿಗೆ ಹಣ ಹಂಚಬೇಕಿದ್ದ ಸರ್ಕಾರ, ನೋಂದಣಿ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದರೂ ರಿಯಲ್ ಎಸ್ಟೇಟ್ ದಂಧೆಕೋರರ ಜೊತೆಗೆ ಸೇರಿಕೊಂಡು ಆಸ್ತಿ ನೋಂದಣಿ ಮಾಡಿಕೊಟ್ಟಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳ ಕೈವಾಡ ಇದೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
![](https://pratidhvani.com/wp-content/uploads/2024/02/IMG-20240221-WA0031-696x1024.webp)
![](https://pratidhvani.com/wp-content/uploads/2024/02/IMG-20240221-WA0030-687x1024.webp)
![](https://pratidhvani.com/wp-content/uploads/2024/02/IMG-20240221-WA0032-690x1024.webp)
![](https://pratidhvani.com/wp-content/uploads/2024/02/IMG-20240221-WA0035-697x1024.webp)
A1 ಆರೋಪಿ ಆಗಿರುವ ಮಂಜುನಾಥ್ ಬಿ.ಎಸ್ ಬಿನ್ ಸೊಣ್ಣಳ್ಳಿಯಪ್ಪ ಆನೇಕಲ್ ತಾಲ್ಲೂಕಿನ ಎಂ ಮೆಡಹಳ್ಳಿ ಗ್ರಾಮದಲ್ಲಿದ್ದ ಆಸ್ತಿಯನ್ನು ಸುಪ್ರೀಂಕೋರ್ಟ್ ಆದೇಶ ಮೀರಿ ಮಾರಾಟ ಮಾಡಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಕಾನೂನು ಮೀರಿ ನೋಂದಣಿಗೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ KCOC ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ಶಿಫಾರಸು ಮಾಡಿದ್ದರೂ ಸರ್ಕಾರ ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ.
ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ವಿರುದ್ಧದ ಚಾರ್ಜ್ಶೀಟ್ ರದ್ದು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಹೋಗ್ಬೇಕು ಎಂದು ಡಿಜಿಪಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಸರ್ಕಾರ ಮೌನಕ್ಕೆ ಶರಣಾಗುವ ಮೂಲಕ ಅಕ್ರಮಕ್ಕೆ ಸಾಥ್ ಕೊಡುವಂತಿದೆ. 3 ತಿಂಗಳು ಕಳೆದರೂ ಸರ್ಕಾರ ಮಾತ್ರ ಮೇಲ್ಮನವಿ ಹೋಗುವ ಯಾವುದೇ ನಿರ್ಧಾರ ಮಾಡಿಲ್ಲ.
![](https://pratidhvani.com/wp-content/uploads/2024/02/IMG_20240221_045544-683x1024.webp)
![](https://pratidhvani.com/wp-content/uploads/2024/02/IMG_20240221_045117-2-742x1024.webp)
![](https://pratidhvani.com/wp-content/uploads/2024/02/IMG_20240221_045117-1-742x1024.webp)
![](https://pratidhvani.com/wp-content/uploads/2024/02/IMG_20240221_045158-711x1024.webp)
![](https://pratidhvani.com/wp-content/uploads/2024/02/IMG_20240221_045117-742x1024.webp)
ಪೊಲೀಸ್ ಅಧಿಕಾರಿಗಳೂ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಆಂತರಿಕ ತನಿಖೆ ಮಾಡಲು ಆನೇಕಲ್ ಸಬ್ ಡಿವಿಸನ್ DySP A.V ಲಕ್ಷ್ಮೀನಾರಾಯಣ್ ಅವರನ್ನು ನೇಮಿಸಲಾಗಿತ್ತು. ವರದಿಯಲ್ಲಿ ತಪ್ಪಿತಸ್ಥರು ಎಂದು ಹೇಳಲಾಗಿತ್ತು. ವರದಿ ಆಧಾರದಲ್ಲಿ ಕೇಂದ್ರ ವಲಯ ಮಹಾ ನಿರೀಕ್ಷರು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಪ್ರಕರಣದಲ್ಲಿ ಶಾಮೀಲಾಗಿರುವ ಸರ್ಕಾರಿ ಅಧಿಕಾರಿಗಳು ಹಾಗು ಸಿಬ್ಬಂದಿ ವಿರುದ್ಧ ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಕ್ರಮಕ್ಕೆ ಅನುಮತಿ ಕೋರಿದ್ದರು. ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎ.ಜಿ ವೀಣಾ ನೋಂದಣಿ ಮಹಾಪರೀಕ್ಷಕರಿಗೆ ಪತ್ರ ಬರೆದು ಮುಂದಿನ ಕ್ರಮಕ್ಕೆ ಸೂಚನೆ ಕೊಟ್ಟಿದ್ದರು. ಆದರೆ ಕ್ರಮಕ್ಕೆ ಅನುಮತಿ ಸಿಕ್ಕ ಬಳಿಕವೂ ಎಲ್ಲವೂ ಗಪ್ಚುಪ್ ಎನ್ನುವಂತಾಗಿದೆ.
ಪಿಯರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್ (Pearls Agrotech Corporation Limited) ಕಂಪನಿಗೆ ಸೇರಿದ 405 ಕೋಟಿ ಮೌಲ್ಯದ ಆಸ್ತಿಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಲೋಧ ಸಮಿತಿ ಪತ್ತೆ ಹಚ್ಚಿದೆ. ಇದೀಗ ಅಷ್ಟೂ ಆಸ್ತಿ ನುಂಗಣ್ಣರ ಪಾಲಾಗುವ ಸಾಧ್ಯತೆ ಇದೆ. ಪೊಲೀಸ್ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ಕೈವಾಡ ಇರುವುದು ತನಿಖೆಯಲ್ಲಿ ಬಯಲಾಗಿದೆ. ಆದರೂ ಸರ್ಕಾರ ಮಾತ್ರ ಅಕ್ರಮ ಕೂಟಕ್ಕೆ ಸಾಥ್ ಕೊಡುತ್ತ, ಕಣ್ಮುಚ್ಚಿ ಕುಳಿತಿರುವುದು ಅಚ್ಚರಿಗೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಹಾಗು ಕಂದಾಯ ಮಂತ್ರಿ ಕೃಷ್ಣಬೈರೇಗೌಡ ಈ ಬಗ್ಗೆ ಗಮನ ಹರಿಸಬೇಕಿದೆ.