• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಂಡ್ಯ ಬಂದ್​ ಬಗ್ಗೆಯೂ ಕೊಂಕು ಮಾತು.. ರೈತರ ಬಗ್ಗೆ ಯಾಕೀ ಕೋಪ..?

ಕೃಷ್ಣ ಮಣಿ by ಕೃಷ್ಣ ಮಣಿ
September 23, 2023
in Top Story, ಕರ್ನಾಟಕ, ದೇಶ, ರಾಜಕೀಯ
0
ಮಂಡ್ಯ ಬಂದ್​ ಬಗ್ಗೆಯೂ ಕೊಂಕು ಮಾತು.. ರೈತರ ಬಗ್ಗೆ ಯಾಕೀ ಕೋಪ..?
Share on WhatsAppShare on FacebookShare on Telegram

ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿದೆ. CWMA ಆದೇಶದ ಬಳಿಕ ಸುಪ್ರೀಂಕೋರ್ಟ್​ ಕೂಡ ಮಧ್ಯಪ್ರವೇಶ ಮಾಡಲು ನಿರಾಕರಿಸಿದ ಕಾರಣಕ್ಕೆ ಕರ್ನಾಟಕ ಅನಿವಾರ್ಯವಾಗಿ ನೀರನ್ನು ಹರಿಸುತ್ತಿದೆ. ನೀರನ್ನು ಹರಿಸದೆ ರೈತರ ಪರವಾಗಿ ನಿಲ್ಲುವ ನಿರ್ಧಾರ ಹೊರಬೀಳಬಹುದು ಎಂದೇ ಎಲ್ಲರೂ ಊಹಿಸಿದ್ದರು. ಆದರೆ ಶುಕ್ರವಾರ ತಡ ರಾತ್ರಿ ಸಚಿವ ಸಂಪುಟ ಮುಗಿಸಿ ಹೊರಬಂದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್​, ಕಾವೇರಿ ನೀರಿನ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಿದ್ದೇವೆ. ನಾವು ಹರಿಸದೆ ಇದ್ದರೂ ಮೂರೂವರೆ ಸಾವಿರ ನೀರು ನದಿಗೆ ಹೋಗುತ್ತದೆ. ನಾವು ರೈತರ ಹಿತವನ್ನು ಸದಾ ಕಾಲ ನಾವು ರೈತರ ಹಿತಕ್ಕಾಗಿಯೇ ಕೆಲಸ ಮಾಡುತ್ತೇವೆ. ಟೀಕೆ ಮಾಡುವವರು ಟೀಕೆ ಮಾಡಲಿ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

ADVERTISEMENT

ಮಂಡ್ಯದಲ್ಲಿ ಇಂದು ಬಂದ್​ ಆಚರಣೆ, ಸಂಘ ಸಂಸ್ಥೆಗಳ ಬೆಂಬಲ

ಕಾವೇರಿ ನೀರು ವಿಚಾರದಲ್ಲಿ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿ ಇಂದು ಮಂಡ್ಯ ಜಿಲ್ಲಾ ಬಂದ್​ಗೆ ರೈತ ಸಂಘಟನೆಗಳು ಕರೆ ನೀಡಿವೆ. ರೈತರ ಹೋರಾಟಕ್ಕೆ ಹತ್ತಾರು ಸಂಘ ಸಂಸ್ಥೆಗಳು ಸಾಥ್​ ನೀಡಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು, ವರ್ತಕರು ಸೇರಿದಂತೆ ಸ್ವಯಂಪ್ರೇರಿತ ಬಂದ್​ ಆಚರಣೆ ನಡೆಯಲಿದೆ. ಇತ್ತ ರೈತರ ಹೋರಾಟವನ್ನು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್​ ತೀರ ತುಚ್ಛವಾಗಿ ಕಂಡಿದ್ದು, ಪ್ರತಿಭಟನೆ ಬಂದ್​ನಿಂದ ಯಾವುದೇ ಪ್ರಯೋಜನ ಆಗಲ್ಲ ಎಂದಿದ್ದಾರೆ. ಆದರೆ ಮಂಡ್ಯ ಉಸ್ತುವಾರಿ ಸಚಿವರೂ ಆಗಿರುವ ಎನ್​. ಚಲುವರಾಯಸ್ವಾಮಿ ಹೋರಾಟ ಮಾಡುವುದು ರೈತರೂ ಸೇರಿದಂತೆ ಸಾರ್ವಜನಿಕರ ಹಕ್ಕು, ಪ್ರಜಾಪ್ರಭುತ್ವ ದಲ್ಲಿ ಬಂದ್ ಮಾಡಲು ಹಕ್ಕಿದೆ. ಇದು ತಪ್ಪು ಅಂತ ಹೇಳಲು ಆಗಲ್ಲ. ನಿಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತೆ, ಶಾಂತವಾಗಿ ಸಹಕರಿಸಿ ಎಂದು ರೈತರಲ್ಲಿ ವಿನಂತಿ ಮಾಡಿದ್ದಾರೆ

ಅಮಿತ್​ ಷಾ ಜೊತೆಗೆ ಕಾವೇರಿ ಸಂಕಷ್ಟದ ಬಗ್ಗೆ HDK ಚರ್ಚೆ..

ಬಿಜೆಪಿ ಜೆಡಿಎಸ್​ ಮೈತ್ರಿ ಮಾತುಕತೆಗೆ ಅಮಿತ್​ ಷಾ ಭೇಟಿ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಮಾತುಕತೆ ಬಳಿಕ ಮಾತನಾಡಿ, ಅಮಿತ್ ಷಾ ಅವರ ಬಳಿ ಕಾವೇರಿ ಬಗ್ಗೆ ಚರ್ಚಿಸಿದ್ದೇನೆ. ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರದ ಅಸಡ್ಡೆ ಮಾಡಿದೆ. ಕನ್ನಡ ನಾಡಿನ ರೈತರು, ಜನರ ವಿಷಯದಲ್ಲಿ ಚೆಲ್ಲಾಟವಾಡಿದ್ದಾರೆ. ಒಂದು ಕಡೆ ನೀರಿನಲ್ಲ ಎಂದು ಸರ್ಕಾರ ಹೇಳುತ್ತೆ. ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತಾರೆ. ಸುಪ್ರೀಂಕೋರ್ಟ್​​ ಮುಂದೆ ಅರ್ಜಿಯನ್ನು ಹಾಕಿದ್ದಾರೆ. ರೈತರ ಹಿತರಕ್ಷಣೆ ಮಾಡುವ ಕೆಲಸ ಮಾಡಬೇಕು. ತಮಿಳುನಾಡಿಗೆ ನೀರು ಬಿಡಬೇಡಿ ಎಂದಿದ್ದೆ, ಆದರೂ ನೀರು ಬಿಟ್ಟರು. ನಮ್ಮಲ್ಲಿ ನೀರಾವರಿ ಸಚಿವರಿದ್ದಾರೆ, ಅವರಿಗೆ ನೀರಾವರಿ ಬಗ್ಗೆ ಏನೂ ಗೊತ್ತಿಲ್ಲ. ಚದರ ಅಡಿಗೆ ರೇಟ್ ಫಿಕ್ಸ್ ಮಾಡಿಕೊಂಡು ಕೂತಿದ್ದಾರೆ ಎಂದು ಡಿ.ಕೆ ಶಿವಕುಮಾರ್​ ಹೆಸರು ಹೇಳದೆ ವ್ಯಂಗ್ಯ ಮಾಡಿದ್ದಾರೆ.

ಹೇಗಿರಲಿದೆ ಮಂಡ್ಯದಲ್ಲಿ ಬಂದ್​.. ಯಾರೆಲ್ಲಾ ಬರ್ತಾರೆ..?

ಕಾವೇರಿ ನೀರಿಗಾಗಿ ಇಂದು ಮಂಡ್ಯದಲ್ಲಿ ಉಗ್ರ ಹೋರಾಟ ನಡೆಯಲಿದ್ದು, ತಮಿಳುನಾಡಿಗೆ ನೀರು ಹರೀತಿರೋದನ್ನು ಖಂಡಿಸಿ ಮಂಡ್ಯ ಬಂದ್‌‌ಗೆ ಕರೆ ಕೊಡಲಾಗಿದೆ. ರೈತ ಹಿತರಕ್ಷಣಾ ಸಮಿತಿ ಸೇರಿ ಕನ್ನಡಪರ ಸಂಘಟನೆಗಳು ಬಂದ್ ಆಚರಣೆ ಮಾಡಲಿವೆ. ಬೆಳಿಗ್ಗೆ 8 ಗಂಟೆಯಿಂದ ಹೋರಾಟ ಆರಂಭ ಆಗಲಿದೆ. ಮಂಡ್ಯದ ಸಂಜಯ ವೃತ್ತದಲ್ಲಿ ವಿವಿಧ ಸಂಘಟನೆಗಳು ಉರುಳುಸೇವೆ ಮಾಡಲಿದ್ದು, ಮುಖ್ಯ ರಸ್ತೆಗಳಲ್ಲಿ ಬೈಕ್ ಱಲಿ ನಡೆಸಲಿದ್ದಾರೆ. ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಭಾಗಿಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ರೈತರ ಜೊತೆಗೂಡಿ ಪ್ರತಿಭಟನೆ ಮಾಡಲಿದ್ದಾರೆ. ರೈತರ ಹೋರಾಟಕ್ಕೆ ಬಿಜೆಪಿ ನಾಯಕರು ಕೂಡ ಸಾಥ್ ನೀಡಲು ನಿರ್ಧಾರ ಮಾಡಿದ್ದು, ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಬೆಳಗ್ಗೆ 10 ಗಂಟೆಗೆ ಭಾಗಿ ಆಗಲಿದ್ದಾರೆ. ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದ್ದು, ಡಿ.ಕೆ ಶಿವಕುಮಾರ್​ ಹೇಳಿಕೆ ರೈತರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

ಕೃಷ್ಣಮಣಿ

Tags: Cauvery waterKarnatakaMandyaprotestTamilnadu
Previous Post

ತಮಿಳುನಾಡಿನ ಮೇಲೆ ಹೆಚ್ಚಾಗ್ತಿದೆ ಕನ್ನಡಿಗರ ಆಕ್ರೋಶ: ಬಂದ್, ಪ್ರತಿಭಟನೆ ವೇಳೆ ಹೈಅಲರ್ಟ್​!

Next Post

“ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮಹಿಳಾ ಧ್ವನಿ” ಭಾರತದ ಬಾಹ್ಯಾಕಾಶ ವಿಜ್ಞಾನದ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಸಾಧನೆ ಹಿರಿದು

Related Posts

ವಿಜಯ್ ಗೆಲುವಿನ ಪ್ರಭಾವ ಉತ್ತರ ಪ್ರದೇಶಕ್ಕೂ? ‘ಸತ್ತಾ ಪರಿವರ್ತನ್ ಯಾತ್ರೆ’ಗೆ ಸಜ್ಜಾದ ಚಂದ್ರಶೇಖರ್ ಆಜಾದ್
Top Story

ವಿಜಯ್ ಗೆಲುವಿನ ಪ್ರಭಾವ ಉತ್ತರ ಪ್ರದೇಶಕ್ಕೂ? ‘ಸತ್ತಾ ಪರಿವರ್ತನ್ ಯಾತ್ರೆ’ಗೆ ಸಜ್ಜಾದ ಚಂದ್ರಶೇಖರ್ ಆಜಾದ್

by ಪ್ರತಿಧ್ವನಿ
May 16, 2026
0

ತಮಿಳುನಾಡಿನಲ್ಲಿ ಜೊಸೇಫ್ ವಿಜಯ್ ನೇತೃತ್ವದ Tamilaga Vettri Kazhagam ಪಕ್ಷದ ಭರ್ಜರಿ ಗೆಲುವು ದೇಶದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಗೆಲುವಿನಿಂದ ಪ್ರೇರಿತರಾಗಿರುವ ಭೀಮ್...

Read moreDetails
“ಕಾರಿಗೆ ಬ್ರೇಕ್, ಮೆಟ್ರೋಗೆ ಗ್ರೀನ್ ಸಿಗ್ನಲ್ ಕೊಟ್ಟ ವಿಜಯೇಂದ್ರ”

“ಕಾರಿಗೆ ಬ್ರೇಕ್, ಮೆಟ್ರೋಗೆ ಗ್ರೀನ್ ಸಿಗ್ನಲ್ ಕೊಟ್ಟ ವಿಜಯೇಂದ್ರ”

May 16, 2026
“ಯೌವನದ ನೆನಪುಗಳಿಗೆ ಮತ್ತೆ ಚಕ್ರ ಸಿಕ್ಕಿತು” : ಡಿಕೆಶಿಗೆ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್‌ !

“ಯೌವನದ ನೆನಪುಗಳಿಗೆ ಮತ್ತೆ ಚಕ್ರ ಸಿಕ್ಕಿತು” : ಡಿಕೆಶಿಗೆ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್‌ !

May 16, 2026
ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !

May 15, 2026
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

May 15, 2026
Next Post
“ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮಹಿಳಾ ಧ್ವನಿ” ಭಾರತದ ಬಾಹ್ಯಾಕಾಶ ವಿಜ್ಞಾನದ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಸಾಧನೆ ಹಿರಿದು

"ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮಹಿಳಾ ಧ್ವನಿ" ಭಾರತದ ಬಾಹ್ಯಾಕಾಶ ವಿಜ್ಞಾನದ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಸಾಧನೆ ಹಿರಿದು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada