ಸ್ಪಷ್ಟ ಕನ್ನಡದಲ್ಲಿ ಅತ್ಯುತ್ತಮ ನಿರೂಪಣೆಯ ಮೂಲಕ ಮನಗೆದ್ದಿದ್ದ ನಿರೂಪಕಿ ಅಪರ್ಣಾ ಅವರು ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಇತ್ತೀಚಿನವರೆಗೂ ಸಕ್ರಿಯವಾಗಿದ್ದ ನಟಿ ಹಾಗೂ ನಿರೂಪಕಿ ಅಪರ್ಣಾ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

ಮೂಲಗಳ ಮಾಹಿತಿಯ ಪ್ರಕಾರ ಅಪರ್ಣಾ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲೀಸಲಾಗಿತ್ತು. ಆದ್ರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಅಪರ್ಣ ಅವರ ಅಕಾಲಿಕ ನಿಧನ ಅವರ ಆಪ್ತ ಬಳಗದಲ್ಲಿ ತೀವ್ರ ಆಘಾತಕ್ ಮತ್ತು ನೋವನ್ನುಂಟು ಮಾಡಿದೆ. ಹಲವು ಧಾರಾವಾಹಿಗಳು, ಕಿರುತೆರೆಯ ಶೋಗಳಾದ ಬಿಗ್ ಬಾಸ್ , ಮಜಾ ಟಾಕೀಸ್ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅಪರ್ಣ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದರು.
ಸದ್ಯ ಮಾಹಿತಿ ತಿಳಿದು ಅವರ ನಿವಾಸದ ಸಮೀಪಕ್ ಆಪ್ತರು, ಸಂಬಂಧಿಕರು ಧಾವಿಸುತ್ತಿದ್ದು ಅವರ ಬನಶಂಕರಿ ನಿವಾಸದ ಸಮೀಪ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.