ಪ್ರಜ್ವಲ್ ರೇವಣ್ಣ (prajwal revanna) ಪ್ರಕರಣದಲ್ಲಿ , ಸಂತ್ರಸ್ಥೆಯ ಹೇಳಿಕೆಯ ಭಾಗ ಗನ್ ಪಾಯಿಂಟ್ (Gün point) ಇಟ್ಟ ವಿಚಾರ ಹೇಗೆ ಹೊರಗೆ ಬಂತು ಅಂತ ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ (kalaburgi) ಮಾತನಾಡಿದ ಹೆಚ್ಡಿಕೆ, ಸಂತ್ರಸ್ತ ಹೆಣ್ಣು ಮಗಳು ಜಡ್ಜ್ ಮುಂದೆ ಹೇಳಿರುವ ರಹಸ್ಯ ವಿಷಯಗಳು ಮಾಧ್ಯಮಗಳಿಗೆ ಹೇಗೆ ಹೋಯಿತು?. ಸರ್ಕಾರವೇ ಈ ರೀತಿ ಮಾಹಿತಿ ಲೀಕ್ ಮಾಡಿದ್ರೆ, ತನಿಖೆ ಎಲ್ಲಿಗೆ ಹೋಗಬಹುದು. ಲೀಕ್ ಮಾಡುವ ಮುಖಾಂತರ ಸತ್ಯಾಂಶ ಹೊರಗೆ ಬರುತ್ತಾ? ಅಂತ ಪ್ರಶ್ನೆ ಮಾಡಿದ್ರು.
ಇದೇ ವೇಳೆ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ಉದ್ದೇಶ ಸರ್ಕಾರಕ್ಕಿಲ್ಲ, SIT ತನಿಖೆ ನೆಪದಲ್ಲಿ ಇವರಿಗರೆ ಪ್ರಚಾರ ಬೇಕಷ್ಟೆ ಅಂತ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು.
ನಿನ್ನೆ ಓರ್ವ ಸಂತ್ರಸ್ಥೆ ತಮಗೆ ಆದ ಲೈಂಗಿಕ ದೌರ್ಜನ್ಯದ (Sexual harassment) ಬಗ್ಗೆ ದೂರು ದಾಖಲಿಸಿದ್ದು, ಪ್ರಜ್ವಲ್ ರೇವಣ್ಣ ತಮಗೆ ಗನ್ (Gün) ತೋರಿಸಿ ಬೆದರಿಸಿ ಅತ್ಯಾಚಾರ (Rape) ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.