Jharkhand ಸಿಎಂ ಹೇಮಂತ್ ಸುರೇನ್ (Hemanth soren) ಬಂಧನ ಆಗಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ವಿಚಾರಣೆ ಮಾಡಿದ ಬಳಿಕ ಸಿಎಂ ಹೇಮಂತ್ ಸುರೇನ್ ಅವರನ್ನು ಬಂಧನ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆಳವಣಿಗೆ ಬಳಿಕ ರಾಜಭವನಕ್ಕೆ ತೆರಳಿದ ಹೇಮಂತ್ ಸುರೇನ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಆ ಬಳಿಕ ಹೊಸದಾಗಿ ಸರ್ಕಾರ ರಚನೆಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ಅವಕಾಶ ಕೋರಿದ್ದು, ನೂತನ ಸಿಎಂ ಅಭ್ಯರ್ಥಿ ಯಾರು ಅನ್ನೋನ್ನು ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡ್ತೇವೆ ಎಂದು ತಿಳಿಸಿದೆ.
![](https://pratidhvani.com/wp-content/uploads/2024/01/1631380666_1630814043_2-2-1.jpg)
ಮನಿ ಲಾಂಡ್ರಿಂಗ್ ಕೇಸ್ನಲ್ಲಿ ಬೆಳಗ್ಗೆಯಿಂದ ರಾಂಚಿ ನಿವಾಸದಲ್ಲೇ ವಿಚಾರಣೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಹೀಗಾಗಿ ಜಾರ್ಖಂಡ್ನ ಸಾರಿಗೆ ಸಚಿವರಾಗಿದ್ದ ಚಂಪೈ ಸುರೇನ್ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ನಿರ್ಧಾರ ಹೊರಬಿದ್ದಿದೆ. ಜಾರ್ಖಂಡ್ ರಾಜ್ಯ ರಚನೆಯಲ್ಲಿ ಪ್ರಮುಖ ಹೋರಾಟಗಾರನಾಗಿದ್ದ ಚಂಪೈ ಸುರೇನ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಒಲಿದು ಬಂದಿದೆ. ಹೇಂಂತ್ ಸುರೇನ್ ಬಂಧನಕ್ಕೂ ಮುನ್ನ ಭಾರೀ ಹೈಡ್ರಾಮಾ ನಡೆದಿದ್ದು, ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿರುದ್ಧವೇ ಹೇಮಂತ್ ಸುರೇನ್ FIR ದಾಖಲಿಸಿದ್ದಾರೆ.
![](https://pratidhvani.com/wp-content/uploads/2024/01/ed8822f87aaf891abc2b000e89d3aa411706543307109556_original-jpg.webp)
#Jharkhand #cm #Hemanthsoren #Arrest