ಮಂಡ್ಯ: ಲೋಕಸಭೆ ಚುನಾವಣೆ ಅಂದ್ರೆ ಮಂಡ್ಯ (Mandya)ಕಾವೇರುತ್ತದೆ, ಈಗ ಬಿಜೆಪಿ ಜೆಡಿಎಸ್ ಮೈತ್ರಿ ನಡುವೆ ಮಂಡ್ಯದಲ್ಲಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ, ಈ ನಡುವೆ ಜೆಡಿಎಸ್ ನಾಯಕರ ಹೇಳಿಕೆ ಹೊಸ ಟ್ವಿಸ್ಟ್ ನೀಡಿದೆ.
ಹೌದು, ಮಂಡ್ಯದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು (CS Puttaraju) ಈ ಹೇಳಿಕೆ ಈಗ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಪುಟ್ಟರಾಜು ಹೇಳಿದ್ದೇನೆಂದರೆ, ಇತ್ತಿಚೆಗೆ ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಿಂದ ನಿವೃತ್ತರಾದ ಡಾ.ಸಿ.ಎನ್.ಮಂಜುನಾಥ್ (Dr CN Manjunath) ಅವರಿಗೆ ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳು ಆಶಿರ್ವಾದ ಮಾಡಿದ್ರೆ, ಡಾ.ಮಂಜುನಾಥ್ ಅವರನ್ನೇ ಮಂಡ್ಯದಿAದ ಮೈತ್ರಿ ಅಭ್ಯರ್ಥಿ ಎಂದು ಪುಟ್ಟರಾಜು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು, ಡಾ. ಮಂಜುನಾಥ್ ಮೂಲತಃ ಹಾಸನ ಜಿಲ್ಲೆಯವರಾದ್ರೂ ಅವರ ವ್ಯವಹಾರ, ಭೂಮಿ ಇರೋದೆಲ್ಲಾ ಮಂಡ್ಯ ಜಿಲ್ಲೆಯಲ್ಲಿ, ರೈಸ್ ಮಿಲ್, ತೋಟ ಇರೋದು ಇಲ್ಲೇ ಹಾಗೂ ಅವರು ಓದಿದ್ದು ಅವರ ಸಂಬAಧಿಕರು ಇರೋದೆಲ್ಲಾ ಮಂಡ್ಯ ಜಿಲ್ಲೆಯಲ್ಲಿ ಹಾಗಾಗಿ ಮಂಡ್ಯದಿAದ ಸ್ಪರ್ಧಿಸಿದರೆ, ಲೋಕಸಭೆ ಚುನಾವಣೆ ಗೆದ್ದು ಆರೋಗ್ಯ ಮಂತ್ರಿಯಾದರೆ, ರಾಜ್ಯದಲ್ಲಿ ಮಾಡಿದಂತಹ ಆರೋಗ್ಯ ಸೇವೆ ದೇಶಕ್ಕೂ ಲಭ್ಯವಾಗಲಿದೆ ಎಂದು ಪುಟ್ಟರಾಜು ಹೇಳಿದ್ದಾರೆ.
ಕದನಕುತೂಹಲ ಸೃಷ್ಠಿಸಿರುವ ಮಂಡ್ಯದಲ್ಲಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಚರ್ಚೆಗಳು ಜೊರಾಗಿರುವ ಹೊತ್ತಲ್ಲಿ ಪುಟ್ಟರಾಜು ಹೇಳಿಕೆ ಜೆಡಿಎಸ್ ವಲಯದಲ್ಲಿ ಹಾಗೂ ಬಿಜೆಪಿ ಪಾಳಯದಲ್ಲೂ ಹೊಸ ಸಂಚಲನಕ್ಕೆ ಕಾರಣವಾಗಿದೆ, ಜೊತೆಗೆ ಈಗ ಅಭ್ಯರ್ಥಿ ಆಯ್ಕೆ ಕಸರತ್ತು ಆದಿಚುಂಚನಗಿರಿ ಮಠ ತಲುಪಿದೆ.
#Manyda #JDS #DrCNManjunath #CSPuttaraju #LokSabha #Election #BJP