
ರಾಯಚೂರು: ಆಯುಧ ಪೂಜೆ ದಿನ ಪೂಜೆ ಸಲ್ಲಿಕೆ ಮಾಡಿ ನಿಲ್ಲಿಸಿದ ಜೆಸಿಬಿ ಕಳ್ಳತನ ಮಾಡಲಾಗಿತ್ತು. ಜೆಸಿಬಿ ಕಳ್ಳತನ ಮಾಡಿ ಮಾರಾಟಕ್ಕೆ ಇಟ್ಟ ಖರೀದಿಮರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಜೆಸಿಬಿ ಕಳ್ಳತನ ಮಾಡಿದ್ದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಶರಣಪ್ಪ ಎಂಬುವರ ಜೆಸಿಬಿ ಕಳ್ಳತನ ಆಗಿತ್ತು..

ಪೈಪ್ ಲೈನ್ ಕಾಮಗಾರಿಗಾಗಿ ಬಂದಿದ್ದ ಸುಮಾರು 38 ಲಕ್ಷ ರೂಪಾಯಿ ಮೌಲ್ಯದ ಜೆಸಿಬಿ ಕಳ್ಳತನ ಮಾಡಿದ್ದ ಬಗ್ಗೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೆಸಿಬಿ ಮಾಲೀಕರಿಂದ ಮಾಹಿತಿ ಪಡೆದು ಕಾರ್ಯಾಚರಣೆಗೆ ಇಳಿದ ಕವಿತಾಳ ಪೊಲೀಸರಿಗೆ ಶಾಕ್ ಎದುರಾಗಿತ್ತು. ಜೆಸಿಬಿಯಲ್ಲಿದ್ದ ಜಿಪಿಎಸ್ ಆಧರಿಸಿ ಮಹಾರಾಷ್ಟ್ರಕ್ಕೆ ಹೋದ ಕವಿತಾಳ ಪೊಲೀಸರು, ಬರೀ ಜಿಪಿಎಸ್ ತೆಗೆದುಕೊಂಡು ವಾಪಸ್ ಆಗಿದ್ದರು.

ಮಹಾರಾಷ್ಟ್ರದ ನಾಸಿಕ್, ನಾಗಪುರ ಕಡೆ ಜೆಸಿಬಿ ಗಾಗಿ ಹುಡುಕಾಟ ನಡೆಸಲಾಗಿತ್ತು. ಪೊಲೀಸರು ಎಷ್ಟೇ ಹುಡುಕಿದ್ರೂ ಜೆಸಿಬಿ ಸಿಕ್ಕಿರಲಿಲ್ಲ. ಜೆಸಿಬಿ ಬದಲಿಗೆ ನಾಗಪುರನಲ್ಲಿ ಜೆಸಿಬಿಯಲ್ಲಿದ್ದ ಜಿಪಿಎಸ್ ಮಾತ್ರ ಪತ್ತೆಯಾಗಿತ್ತು. ಉತ್ತರ ಪ್ರದೇಶ ಲಾರಿವೊಂದರಲ್ಲಿ ಜಿಪಿಎಸ್ ಪತ್ತೆ ಆಗಿತ್ತು. ಲಾರಿ ಚಾಲಕನನ್ನ ವಿಚಾರಣೆ ನಡೆಸಿದಾಗ, ಪಾಮನ ಕಲ್ಲೂರಿನಿಂದ ಪಪ್ಪಾಯಿ ತೆಗೆದುಕೊಂಡು ಬಂದಿದ್ದ ಬಗ್ಗೆ ಮಾಹಿತಿ ನೀಡಿದ್ದರು.

ಮಹಾರಾಷ್ಟ್ರದಿಂದ ಬರಿಗೈಲಿ ಬಂದ ಪೊಲೀಸರು ಬಸವರಾಜ್ ಮತ್ತು ಜಗದೀಶ್ ಎಂಬ ಆರೋಪಿಗಳು ವಾಟ್ಸಾಪ್ ಮೆಸೇಜ್ ಆಧಾರದಲ್ಲಿ ಆರೋಪಿಗಳ ಬಂಧನ ಮಾಡಿದ್ದಾರೆ. ಕನ್ನಡ ದೃಶ್ಯ ಸಿನಿಮಾ ಮಾದರಿಯಲ್ಲಿ ಜೆಸಿಬಿ ಕಳ್ಳತನ ಮಾಡಿ, ಜೆಸಿಬಿಯಲ್ಲಿದ್ದ ಜಿಪಿಎಸ್ ತೆಗೆದು ಉತ್ತರ ಪ್ರದೇಶದ ಲಾರಿ ಮೇಲೆ ಬಿಸಾಕಿದ್ದರು ಅನ್ನೋದು ಗೊತ್ತಾಗಿದೆ. ಜೆಸಿಬಿ ಮಾರಾಟಕ್ಕೆ ಇದೆ ಎಂದು ಖದೀಮರು ವಾಟ್ಸಾಪ್ ಮೆಸೇಜ್ ಆಧಾರದಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ.