ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ (Honey trap) ವಿಚಾರ ಸದನದಲ್ಲೇ ಪ್ರಸ್ತಾಪ ಆಗುವ ಮೂಲಕ ಭಾರೀ ಸಂಚಲ ಮೂಡಿಸಿದೆ. ಈ ಹನಿಟ್ರ್ಯಾಪ್ ಬಗ್ಗೆ ವಿಧಾನಸಭೆಯಲ್ಲಿ ಯತ್ನಾಳ್ (Yatnal) ಪ್ರಸ್ತಾಪಿಸಿದ ಹಿನ್ನಲೆ ಸಚಿವ ಕೆ.ಎನ್ ರಾಜಣ್ಣ (KN Rajanna) ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಹಾಸನದ ಹೆಚ್.ಡಿ ರೇವಣ್ಣ (HD Revanna), ಪ್ರಜ್ವಲ್ ರೇವಣ್ಣ (Prajwal revanna) ಪ್ರಕರಣ,ಇನ್ನು ಮಾಜಿ ಶಾಸಕರ ಪೆನ್ ಡ್ರೈವ್ ಸೇರಿದಂತೆ ಇನ್ನು ಸಾಕಷ್ಟು ಅಶ್ಲೀಲ ಪೆನ್ಡ್ರೈವ್ಗಳನ್ನ ತಯಾರು ಮಾಡಲಾಗಿದೆ. ಈ ಬ್ಲ್ಯಾಕ್ಮೇಲ್ ರಾಜಕಾರಣ ಸಂಪೂರ್ಣವಾಗಿ ಅಂತ್ಯವಾಗಬೇಕು ಎಂದಿದ್ದಾರೆ.

ಈ ರೀತಿಯ ಪ್ರಕರಣಗಳಲ್ಲಿ ಎಸ್ಐಟಿ ತನಿಖೆ ಸಾಲುವುದಿಲ್ಲ. ಹೀಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಈ ಹನಿ ಟ್ರ್ಯಾಪ್ ಕೇಸ್ ಗಳು ಆಗಬೇಕು ಅಂತ ಸಚಿವ ರಾಜಣ್ಣ ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ನೆರವಾಗಿ ಮಾತನಾಡಿದ ಸಚಿವ ರಾಜಣ್ಣ ನನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿರೋದು ನಿಜ. ಅದನ್ನು ಹೇಳಿಕೊಳ್ಳೋಕೆ ನನಗೆ ನಾಚಿಕೆ ಏನಿಲ್ಲ. ನಾನೇನು ಸತ್ಯ ಹರಿಶ್ಚಂದ್ರನೂ ಅಲ್ಲ, ಶ್ರೀರಾಮಚಂದ್ರನೂ ಅಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ.