
ವಿಜಯಪುರ: ಮುಂದಿನ ಸಿಎಂ ಡಿ.ಕೆ ಶಿವಕುಮಾರ್ ಎಂದು ಅಲ್ಲಲ್ಲೇ ಘೋಷಣೆಗಳು, ಸ್ವಾಮೀಜಿ, ಅವಧೂತರ ಮಾತುಗಳು ಬರುತ್ತಿರುವ ಬೆನ್ನಲ್ಲೇ ಇಂಧನ ಸಚಿವ ಕೆ.ಜೆ ಜಾರ್ಜ್ ಗರಂ ಆಗಿದ್ದಾರೆ. ವಿಜಯಪುರದಲ್ಲಿ ಮಾತನಾಡಿ, ಯಾರೋ ಕೂಗಿದ ಕೂಡಲೇ ರಾಜಕಾರಣದಲ್ಲಿ ಬದಲಾವಣೆ ಆಗಿಬಿಡುತ್ತಾ..!?.. ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಸಿಟಿ ರವಿ ಹೇಳಿಕೆಗೆ ಸಚಿವ ಕೆ ಜೆ ಜಾರ್ಜ್ ಟಾಂಗ್ ಕೊಟ್ಟಿದ್ದು, ಅಲ್ಲಿ ಒಂದೂವರೆ ಲಕ್ಷ ಜನ ಸೇರಿದ್ರು. ಯಾರೋ ಕೂಗಿಬಿಡುತ್ತಾರೆ. ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಡಿಸಿಎಂ ಇದ್ದಾರೆ.. ಕಾಂಗ್ರೆಸ್ ಪಕ್ಷದಲ್ಲಿ ಒಂದು ರೀತಿ ನೀತಿ ಇದೆ.. ಸಿಎಂ, ಡಿಸಿಎಂ , ಸಚಿವರಾಗಿ ಯಾರನ್ನು ಮಾಡಬೇಕು.. ಯಾರನ್ನ ಬದಲಾವಣೆ ಮಾಡಬೇಕು ಅಂತ ತೀರ್ಮಾನಿಸೋದು ಹೈಕಮಾಂಡ್ ಎಂದಿದ್ದಾರೆ..
ಯಾರೋ ನಾಲ್ಕು ಜನ ಕಾರ್ಯಕ್ರಮದಲ್ಲಿ ಕೂಗಿದ್ರೆ ಸಾಧ್ಯವಿಲ್ಲ. ಆ ಕೂಗು ಅವರವರ ಅಭಿಮಾನಕ್ಕೆ ಕೂಗುತ್ತಾರೆ ಎಂದಿದ್ದಾರೆ.. ಇನ್ನು ರಾಜ್ಯದಲ್ಲಿ ಪವರ್ ಶೇರಿಂಗ್ ಇದ್ಯಾ..? ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನನಗೆ ಗೊತ್ತಿಲ್ಲ, ಹೈಕಮಾಂಡ್ ಕೇಳಿ.. ಹೈಕಮಾಂಡ್ ಏನಾದರೂ ಪವರ್ ಶೇರಿಂಗ್ ಬಗ್ಗೆ ಹೇಳಿದ್ಯಾ..!? ಎಂದು ಮರು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸಿಎಂ ಆಗಿ ಸಿದ್ದರಾಮಯ್ಯನೇ ಮುಂದುವರಿಯುತ್ತಾರೆ ಅನ್ನೋ ಸುಳಿವು ನೀಡಿದ್ದಾರೆ.
ಸಿಎಂ ಬದಲಾಗ್ತಾರೆ ಅನ್ನೋದು ಆಗಾಗ ಬರುತ್ತಿರುತ್ತದೆ. ಸುರ್ಜೇವಾಲಾ, ವೇಣುಗೋಪಾಲ್, ಖರ್ಗೆ ಅವರು ನಿನ್ನೆ ಬಂದಿದ್ದರು. ನೀವು ಅವರನ್ನೇ ಕೇಳಬೇಕು ಎಂದಿದ್ದಾರೆ. ಇನ್ನು ಮಲ್ಲಿಕಾರ್ಜುನ ಖರ್ಗೆ ತ್ಯಾಗದ ಮಾತು ವಿಚಾರಕ್ಕೆ ಪ್ರತಿಕ್ರಿಯಿಸಿ, ತ್ಯಾಗದ ಮನೋಭಾವ ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ಇದೆ.. ಕಾಂಗ್ರೆಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಅಧಿಕಾರ ಬರುತ್ತೆ ಅಂತ ಹೋರಾಟ ಮಾಡ್ಲಿಲ್ಲ.. ತ್ಯಾಗ ಬಲಿದಾನ ಮಾಡಿದ್ದಾರೆ, ಇಂದಿರಾಗಾಂಧಿ ತ್ಯಾಗ ಮಾಡಲಿಲ್ವಾ..? ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಪ್ರಧಾನಿ ಮಂತ್ರಿ ಹುದ್ದೆ ಬಿಟ್ಟು ಕೊಡಲಿಲ್ವಾ..? ಎಂದಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ತ್ಯಾಗದ ಮಾತು ಅನ್ನೋ ವಿಚಾರವಾಗಿ ಪ್ರಶ್ನಿಸಿದಾಗ, ನಾನು ಎಷ್ಟೇ ಮಾತಾಡಿದ್ರು, ಕಾಂಟ್ರುವರ್ಸಿ ನಿಮಗೆ ಬೇಕು.. ನಾಳೆ, ಈಗಿನಿಂದಲೇ ಬ್ರೇಕಿಂಗ್ ನ್ಯೂಸ್ ಬೇಕು.. ಮಾಧ್ಯಮಗಳದ್ದು ತಪ್ಪಲ್ಲ, ನ್ಯೂಸ್ ಬೇಕಲ್ವಾ ಎಂದು ನಕ್ಕ ಮುಂದೆ ತೆರಳಿದ್ದಾರೆ ಪವರ್ ಮಿನಿಸ್ಟರ್ ಕೆ.ಜೆ ಜಾರ್ಜ್.







