ಮಣಿಪಾಲ: ನಾನೇನೂ ಸಿಎಂ ಆಗಲ್ಲ, ನನಗೆ ಡಿಸಿಎಂ ಸ್ಥಾನ ಸಂಘಟನೆ ಕಾರಣಕ್ಕೆ ಲಭಿಸಿತ್ತು. ಸಂಘಟನೆ ಏನು ಮಾಡಬೇಕೋ ಅದನ್ನ ಮಾಡುತ್ತೆ. ಮುರುಗೇಶ್ ನಿರಾಣಿ ಸಣ್ಣದಾಗಿ ಕಾರ್ಖಾನೆ ಆರಂಭಿಸಿ ಇದು ವಿಶ್ವದೆಲ್ಲೆಡೆ ಹೆಸರು ತೆಗೆದುಕೊಂಡಿದ್ದಾರೆ. ಸಕ್ಕರೆ ಉತ್ಪಾದನೆಯಲ್ಲಿ ಸಾಧನೆ ಮಾಡಿದ್ದಾರೆ. ನಮ್ಮ ದೇಶಕ್ಕೆ ಇಂತಹ ಪ್ರತಿಭಾವಂತ ಒಂದು ಆಸ್ತಿ. ಇಂಥವರು ಇಂದಲ್ಲ ನಾಳೆ ಸಿಎಂ ಆಗ್ತಾರೆ ಎಂದು ಹೇಳಿದ್ದೆ. ಈ ಹೇಳಿಕೆಯನ್ನ ಮಾಧ್ಯಮಗಳು ಬಸವರಾಜ್ ಬೊಮ್ಮಾಯಿಯನ್ನ ಬದಲಾಯಿಸಿಬಿಡುತ್ತಾರೆ ಎಂದು ಪ್ರಕಟಿಸಿವೆ. ಪತ್ರಕರ್ತರಿಗೆ ಉದ್ಯೋಗವಿಲ್ಲ. ನಾನು ಹೇಳಿಕೆ ನೀಡುವಾಗಲೂ ಹೀಗೆ ಆಗುತ್ತೆ ಎಂದು ಹೇಳಿದ್ದೆ. ನೀವು ಹಿಂಗೆ ಬರೀತ್ತೀರಿ, ದಯವಿಟ್ಟು ಹಾಗೆ ಬರೆಯಬೇಡ್ರಪ್ಪ ಎಂದು ಹೇಳಿದ್ದೆ, ಆದರೆ ಅವರ ಕೆಲಸ ಅವರು ಮಾಡೇ ಮಾಡ್ತಾರೆ, ಬರೆದ್ರು ಎಂದು ಈಶ್ವರಪ್ಪ ಹೇಳಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ
https://youtube.com/live/fyElTq201ZE
Read moreDetails