
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಬಗ್ಗೆ ಸುಹಾಸ್ ಶೆಟ್ಟಿ ಮಾವ ಚಂದ್ರಹಾಸ್ ಶೆಟ್ಟಿ ಮಾಹಿತಿ ನೀಡಿದ್ದು, ಸುಹಾಸ್ ಓರ್ವ ಒಳ್ಳೆಯ ಸಂಘಟಕ. ಮನೆಯವರನ್ನು ಅತ್ಯಂತ ಒಳ್ಳೆ ರೀತಿಯಲ್ಲಿ ನೋಡುತ್ತಿದ್ದ ಯುವಕ. ಮನೆಯಲ್ಲಿ ತಂದೆ-ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಮನೆಗೆ ಆಧಾರ ಸ್ತಂಭದಂತಿದ್ದ. ಜೈಲಿನಿಂದ ಹೊರಗೆ ಬಂದ ಬಳಿಕ ಸಣ್ಣಪುಟ್ಟ ವ್ಯವಹಾರ ಮಾಡುತ್ತಿದ್ದ. ಬಜಪೆ ಸಮೀಪದ ರೂಮ್ ಕೂಡ ಮಾಡಿಕೊಂಡಿದ್ದ. ಇನ್ನೂ ಸುಹಾಸ್ ತಾಯಿಗೆ ಕೊಲೆ ವಿಚಾರ ತಿಳಿಸಿಲ್ಲ. ಈಗಲೇ ತಿಳಿಸಿದ್ರೆ ಆಕೆಯ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಆತನಿಗೆ ನಿರಂತರ ಜೀವ ಬೆದರಿಕೆ ಕರೆಗಳು ಬರುತ್ತಿತ್ತು. ಹಲವು ಬಾರಿ ಆಟ್ಯಾಕ್ ಮಾಡಲು ಪ್ರಯತ್ನಗಳೂ ನಡೆದಿವೆ. ಆದರೆ ಸುಹಾಸ್ ತುಂಬಾ ಧೈರ್ಯವಂತನಾಗಿದ್ದ. ಕೊಲೆಗಾರರಿಗೆ ಸೂಕ್ತ ಶಿಕ್ಷೆ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಆಗಿದ್ದು, ಬೆಳಗ್ಗೆ ಆಸ್ಪತ್ರೆಯಿಂದ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. ಪಾರ್ಥಿವ ಶರೀರವನ್ನು ಡಿಸಿ ಆಫೀಸ್ನಿಂದ ಮೆರವಣಿಗೆ ಮಾಡಿಕೊಂಡು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುವುದು. ಸಾವಿರಾರು ಜನ ಕಾರ್ಯಕರ್ತರು ಬರ್ತಾರೆ. ಅಂತಿಮ ಯಾತ್ರೆಯಲ್ಲಿ ಕೂಡ ಭಾಗಿಯಾಗುತ್ತಾರೆ. ಸುಹಾಸ್ ಶೆಟ್ಟಿ ಮೇಲೆ ಅನೇಕ ದಿನಗಳಿಂದ ದ್ವೇಷ ಇತ್ತು. ಹತ್ಯೆ ಸಂಚು ಕೂಡ ಪ್ಲಾನ್ ಇತ್ತು. ಈ ಬಗ್ಗೆ ಪೊಲೀಸರು ಕೂಡ ಹೇಳಿದ್ದಾರೆ. ಕಳೆದ 1 ತಿಂಗಳಿನಿಂದ ಮಾರಕಾಸ್ತ್ರಗಳನ್ನು ಕಾರ್ಗಳಲ್ಲಿ ಚೆಕ್ ಮಾಡ್ತಿದ್ರು. ಸುಹಾಸ್ ಶೆಟ್ಟಿ ಕಾರಿನಲ್ಲಿ ಯಾವುದೇ ಅಸ್ತ್ರಗಳು ಇಲ್ಲ ಅಂತ ತಿಳಿದು ಅಟ್ಯಾಕ್ ಮಾಡಿದ್ದಾರೆ ಎಂದಿದ್ದಾರೆ ಶಾಸಕ ಹರೀಶ್ ಪೂಂಜಾ.

ಪೊಲೀಸ್ ಇಲಾಖೆ ವೈಫಲ್ಯದಿಂದ ಸುಹಾಸ್ ಹತ್ಯೆ ಆಗಿದೆ. 6 ಜನ ಏಕಾಏಕಿ ದಾಳಿ ಮಾಡಿದ್ದಾರೆ. ಯಾರು ಹಂತಕರಿಗೆ ಮಾಹಿತಿ ಕೊಟ್ಟವರು..? ಎಂದು ಹರೀಶ್ ಪೂಂಜಾ ಪ್ರಶ್ನಿಸಿದ್ದಾರೆ. ಆಯಕಟ್ಟಿನ ಜಾಗದಲ್ಲಿ ಕೆಲ ಮುಸ್ಲಿಮರು ಹತ್ಯೆಗೆ ಸಹಾಯ ಮಾಡಿದ್ದಾರೆ. ಸುಹಾಸ್ ವಾಹನದಲ್ಲಿ ಮಾರಕಾಸ್ತ್ರ ಇಡಬಾರದು ಅಂತ ಇಲಾಖೆ ಹೇಳಿತ್ತು. ಅದೇ ರೀತಿ ಸುಹಾಸ್ ಕಾರಿನಲ್ಲಿ ಏನು ಇರಲಿಲ್ಲ. ಪೊಲೀಸರು ರಕ್ಷಣೆ ಕೂಡ ಕೊಟ್ಟಿಲ್ಲ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಹೋಗಿದೆ. ಸುಹಾಸ್ ಶೆಟ್ಟಿ ಗಾಡಿಯಲ್ಲಿ ಯಾವುದೇ ಅಸ್ತ್ರ ಇಲ್ಲದ ರೀತಿಯಲ್ಲಿ ನೋಡಿಕೊಂಡವರು ಯಾರು..? ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗ್ಬೇಕು. ಸುಹಾಸ್ ಸಾವಿಗೆ ನ್ಯಾಯ ಸಿಗಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಡೆಯತ್ತೆ ಎಂದು ಪೊಲೀಸ್ ಇಲಾಖೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಶಾಸಕ ಹರೀಶ್ ಪೂಂಜಾ.