ರಾಜ್ಯ ಸರ್ಕಾರದ ಮೇಲೆ ರಾಜು ಕಾಗೆ (Raju kage) ಆರೋಪ ವಿಚಾರ ಮಾಡಿ, ತಮ್ಮ ಅಸಮಾಧಾನ ತೋಡಿಕೊಂಡ ವಿಚಾರಕ್ಕೆ ಸಂಬಂಧಪಟ್ಟಂತೆ, ಇಂದು ಬೆಂಗಳೂರಿನಲ್ಲಿ (Bengaluru) ಶಾಸಕ ರಾಜುಕಾಗೆ ಸ್ಪಷ್ಟನೆ ನೀಡಿದ್ದಾರೆ.

ನಾನು ಸಿಎಂ (Cm) ಮೇಲೆ ಅಥವಾ ಮಂತ್ರಿಗಳ ಆರೋಪ ಮಾಡಿಲ್ಲ.ನಾನು ವ್ಯವಸ್ಥೆ ಬಗ್ಗೆ ಆರೋಪ ಮಾಡಿದ್ದೇನೆ.ಈ ವ್ಯವಸ್ಥೆ ಬಗ್ಗೆ ನನಗೆ ಅಸಮಾಧಾನವಿದೆ.ನನ್ನ ಕ್ಷೇತ್ತದಲ್ಲಿ ಸಮುದಾಯದ ಭವನ, ಸಿಸಿ ರಸ್ತೆ ಮಾಡಲು ಅವಕಾಶ ಆಗ್ತಿಲ್ಲ, ನಮಗೆ ಅಧಿಕಾರಿಗಳು ಸ್ಪಂದನೆ ಕೊಡ್ತಿಲ್ಲ ಎಂದು ಹೇಳಿದ್ದಾರೆ.
ನನ್ನ ಮತ ಕ್ಷೇತ್ರದಲ್ಲಿ 8,9 ನೇ ತರಗತಿ ತೆಗೆದುಕೊಳ್ಳಲು ಆಗ್ತಿಲ್ಲ..ಇದು ನನ್ನ ಅಸಮಾಧಾನ.ಈಗ ನನ್ನ ಸಿಎಂ ಕರೆದರೆ ಹೋಗಿ ಮಾತಾಡ್ತೀನಿ.ನಾನು ಕೂಡ ಸಿನಿಯರ್ ಲೀಡರ್ ಇದ್ದೇನೆ.30 ವರ್ಷದಿಂದ ಶಾಸಕನಾಗಿದ್ದೇನೆ.ಸಿಎಂ ನಮ್ಮ ಸಮಸ್ಯೆ ಹೇಳೋಕೆ ಅವಕಾಶ ಕೊಟ್ಟರೆ ಹೇಳ್ತೀನಿ ಎಂದಿದ್ದಾರೆ.

ಇನ್ನು ಇದೇ ವೇಳೆ ಎಂ.ಎಲ್.ಎ ಗಳಿಗಿಂತ ಅಧಿಕಾರಿಗಳೇ ಹೆಚ್ಚಾಯ್ತಾ ಇವರಿಗೆ..? ಎಂದು ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹಕ್ಕುಚ್ಯುತಿ ಕೊಟ್ಟರು ಕ್ರಮ ಆಗಿಲ್ಲ ಅಂದರೆ ಏನು ಅರ್ಥ ಅಂತ ಸಿಡಿಮಿಡಿಗೊಂಡಿದ್ದಾರೆ.