ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಆರಂಭವಾದ ವಿವಾದ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ರಾಜಕೀಯ ಚರ್ಚೆ ಬಿಸಿ ಬಿಸಿಯಾಗುತ್ತಿದೆ. ಬುಧವಾರ , ಸುದ್ದಿ ವಾಹಿನಿ “ಆಜ್ ತಕ್” ನಲ್ಲಿ ನಡೆದ ಚರ್ಚೆಯಲ್ಲಿ, AIMIM ನಾಯಕ ಅಸಾದುದ್ದೀನ್ ಓವೈಸಿ ಮಸೀದಿಯ ವಝು ಖಾನಾವನ್ನು (ನಮಾಜ್ ಮೊದಲು ಕೈ-ಕಾಲು ತೊಳೆಯುವ ಸ್ಥಳ) ಮೊಹರು ಮಾಡುವ ನ್ಯಾಯಾಲಯದ ನಿರ್ಧಾರವನ್ನು 1991 ರ ಕಾನೂನಿನ ಉಲ್ಲಂಘನೆ ಎಂದು ಕರೆದಿದ್ದಾರೆ.
ವಿವಾದಿತ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದಂತೆ ಈ ಕಾನೂನನ್ನು ಮಾಡಲಾಗಿದೆ. ಅದೇ ಸಮಯದಲ್ಲಿ, ಔರಂಗಜೇಬ್ ಬಗ್ಗೆ ನಿರೂಪಕ ಕೇಳಿದ ಪ್ರಶ್ನೆಗೆ ಕೋಪಗೊಂಡ ಓವೈಸಿ, ಔರಂಗಜೇಬ್ vs ಭಾರತ ಸರ್ಕಾರ ಎಂದು ಕೋರ್ಟಿಗೆ ಹೋಗಿ ಔರಂಗಜೇಬನನ್ನು ಕಕ್ಷಿದಾರನನ್ನು ಮಾಡಲು ಹೇಳಿದ್ದಾರೆ.
“1991ರ ಕಾನೂನು ಇರುವವರೆಗೆ ಅದನ್ನು ಉಲ್ಲಂಘಿಸುವಂತಿಲ್ಲ. 1991ರಲ್ಲಿ ಆ ವಝುಖಾನದ ಅಲ್ಲಿಯೇ ಪ್ರಾರ್ಥನೆ ನಡೆಯುತ್ತಿತ್ತು. ಕಮಾನಿನ ಹಿಂದೆ ವರ್ಷಕ್ಕೊಮ್ಮೆ ಪೂಜೆಗೆ ಅವಕಾಶ ನೀಡಲಾಗಿದ್ದು, 1991ರಲ್ಲಿ ಹೈಕೋರ್ಟ್ ಈ ಬೇಡಿಕೆಗೆ ನ್ಯಾಯಾಲಯದ ತಡೆಯಾಜ್ಞೆ ನೀಡಿತ್ತು.” ಎಂದು ಅವರು ಹೇಳಿದ್ದಾರೆ.
![](https://pratidhvani.com/wp-content/uploads/2022/05/asaduddin_owaisi_1652748720.jpg)
ಪೆಟ್ರೋಲ್ ಬೆಲೆ ಮತ್ತು ನಿರುದ್ಯೋಗಗಳಿಗೆ ಕೂಡಾ ಔರಂಗಜೇಬ್ ಹೊಣೆಯೇ- ಓವೈಸಿ
“ನಾನು ತುಂಬಾ ವಿಷಯಗಳನ್ನು ಹೇಳುತ್ತಿರುವಾಗ, ನೀವು ನನ್ನನ್ನು ಔರಂಗಜೇಬ್ ಮೇಲೆ ಕರೆದುಕೊಂಡು ಹೋಗುತ್ತಿದ್ದೀರಿ. ಪೆಟ್ರೋಲ್ ಬೆಲೆ ಮತ್ತು ನಿರುದ್ಯೋಗಗಳಿಗೆ ಔರಂಗಜೇಬ್ ಕಾರಣವೇ? ಮೊಘಲರ ರಾಜಕಾರಣ ಯಾಕೆ ಮಾಡುತ್ತೀರಿ, ಮೋದಿ ಅಧಿಕಾರದಲ್ಲಿದ್ದರೆ ಮೊಘಲರನ್ನು ಬಿಟ್ಟುಬಿಡಿ. ಸಂಸತ್ತು ಮತ್ತು ಕಾನೂನನ್ನು ಅನುಸರಿಸಿ. ಮೊಘಲರ ಮೇಲೆ ಯಾಕೆ ಅಷ್ಟೊಂದು ಮೋಹ, ಹೋಗಿ ಅವರ ಜೊತೆ ಜಗಳ ಮಾಡಿ. ನೀವು ಭಾರತದ ಮುಸ್ಲಿಮರನ್ನು, ಭಾರತದ ಸಂವಿಧಾನವನ್ನು ಮತ್ತು ಭಾರತದ ಸುಪ್ರೀಂ ಕೋರ್ಟ್ ಅನ್ನು ಏಕೆ ಕಿತ್ತು ಹಾಕುತ್ತಿದ್ದೀರಿ? ಎಂದು ಓವೈಸಿ ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ, ಭಾರತೀಯ ಜನತಾ ಪಕ್ಷವು ಗಲಭೆಗೆ ಕಾರಣವಾಯಿತು ಎಂದು ಓವೈಸಿ ಆರೋಪಿಸಿದ್ದಾರೆ. ಅವರು, “ಸುಪ್ರೀಂ ಕೋರ್ಟ್ ಆದೇಶದಲ್ಲಿ ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳನ್ನು ಮಾಡಲು ಅವಕಾಶವಿದೆ ಎಂದು ಹೇಳುತ್ತದೆ. ಅಂದರೆ ನಾವು ಅಲ್ಲಿ ವುಡು ಮಾಡಬಹುದು. ಇದೊಂದು ಕಾರಂಜಿ. ಹೀಗಾದರೆ ತಾಜ್ ಮಹಲ್ ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕು. ಬಿಜೆಪಿಯು ದೇಶವನ್ನು 1990ರ ದಶಕದಲ್ಲಿ ಗಲಭೆಗಳು ನಡೆದ ಸ್ಥಿತಿಗೆ ಕೊಂಡೊಯ್ಯಲು ಬಯಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.