• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕ್ರೀಡೆ

ಆರ್ ಸಿಬಿ ಐಪಿಎಲ್ ಕ್ವಾಲಿಫೈಯರ್-2ಗೆ ಲಗ್ಗೆ: ಲಕ್ನೋಗೆ 14 ರನ್ ಆಘಾತ

ಪ್ರತಿಧ್ವನಿ by ಪ್ರತಿಧ್ವನಿ
May 26, 2022
in ಕ್ರೀಡೆ
0
ಆರ್ ಸಿಬಿ ಐಪಿಎಲ್ ಕ್ವಾಲಿಫೈಯರ್-2ಗೆ ಲಗ್ಗೆ: ಲಕ್ನೋಗೆ 14 ರನ್ ಆಘಾತ
Share on WhatsAppShare on FacebookShare on Telegram

ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದರ್ ಚೊಚ್ಚಲ ಶತಕ ಹಾಗೂ ಮಧ್ಯಮ ವೇಗಿ ಜೋಸ್ ಹ್ಯಾಜಲ್ ವುಡ್ ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್ ಗಳಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯ ಕ್ವಾಲಿಫೈಯರ್-2ಗೆ ಲಗ್ಗೆ ಹಾಕಿದೆ.

ADVERTISEMENT

ಕೋಲ್ಕತಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಒಡ್ಡಿದ 209 ರನ್ ಗಳ ಕಠಿಣ ಗುರಿ ಬೆಂಬತ್ತಿದ ಲಕ್ನೋ ಸೂಪರ್ ಗೈಂಟ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೇ ಶಕ್ತವಾಯಿತು.

ಲಕ್ನೋ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಕೆಎಲ್ ರಾಹುಲ್ 58 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 79 ರನ್ ಬಾರಿಸಿ ಔಟಾಗುವ ಮೂಲಕ ಲಕ್ನೋ ಹೋರಾಟ ಅಂತ್ಯಗೊಂಡಿತು.

ಇದಕ್ಕೂ ಮುನ್ನ ರಾಹುಲ್ ಮತ್ತು ದೀಪಕ್ ಹೂಡಾ ದೀಪಕ್ ಹೂಡಾ ಮೂರನೇ ವಿಕೆಟ್ ಗೆ 96 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು. ಹೂಡಾ 26 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 45 ರನ್ ಗಳಿಸಿದರು.

ಹ್ಯಾಜಲ್ ವುಡ್ ನಿರ್ಣಾಯಕವಾದ 19ನೇ ಓವರ್ ನಲ್ಲಿ 2 ಸೇರಿದಂತೆ ಒಟ್ಟಾರೆ 3 ವಿಕೆಟ್ ಪಡೆದು ಲಕ್ನೋ ಗೆಲುವಿನ ಆಸೆಗೆ ತಣ್ಣೀರೆರಚಿದರು.

ಆರ್ ಸಿಬಿಗೆ ರಜನ್ ಚೊಚ್ಚಲ ಶತಕದ ಬಲ

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ ತಂಡ ತಂಡಕ್ಕೆ ರಜನ್ ಪಟಿಡರ್ ಶತಕದ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.

ಆರಂಭದಲ್ಲೇ ನಾಯಕ ಫಾಫ್ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಫಾರ್ಮ್ ಗೆ ಮರಳಿದ್ದ ವಿರಾಟ್ ಕೊಹ್ಲಿ ಮತ್ತು ರಜತ್ ಪಟಿದರ್ 66 ರನ್ ಜೊತೆಯಾಟ ನಿಭಾಯಿಸಿದರು.

ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 2 ಬೌಂಡರಿ ಸೇರಿದ 25 ರನ್ ಬಾರಿಸಿ ಔಟಾದ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ ವೆಲ್ (9) ಮತ್ತು ಮಹಿಪಾಲ್ ಲೊಮ್ರೊರ್ (14) ಬೇಗನೆ ನಿರ್ಗಮಿಸಿದ್ದರಿಂದ ತಂಡ ಮತ್ತೊಮ್ಮೆ ಒತ್ತಡಕ್ಕೆ ಒಳಗಾಯಿತು.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ ರಜತ್ ಪಟಿದರ್ 49 ಎಸೆತಗಳಲ್ಲಿ 11 ಬೌಂಡರಿ 6 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದರು. ಅಲ್ಲದೇ ರವಿ ಬಿಶ್ನೋಯಿ ಅವರ ಒಂದೇ ಓವರ್ ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ 26 ರನ್ ಕೊಳ್ಳೆ ಹೊಡೆದರು.

ರಜತ್ ಅಂತಿಮವಾಗಿ 54 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 112 ರನ್ ಬಾರಿಸಿ ಔಟಾಗದೇ ಉಳಿದರೆ, ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್ ಗೆ 6.5 ಓವರ್ ಗಳಲ್ಲಿ 92 ರನ್ ಜೊತೆಯಾಟ ನಿಭಾಯಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

Tags: IPLkl rahulpratidvanipratidvniaRCB
Previous Post

ಪ್ರಧಾನಿ ಮೋದಿಗೆ ಪತ್ರ ಬರೆದ ನಟ ಅನಿರುದ್ದ್

Next Post

ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ, ಬಿಜೆಪಿಯೇತರ ಪಕ್ಷಗಳಿಂದ ತಯಾರಿ ಆರಂಭ

Related Posts

ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು
Top Story

ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು

by ಪ್ರತಿಧ್ವನಿ
November 3, 2025
0

ಭಾರತೀಯರಿಗೆ ಕ್ರಿಕೆಟ್‌ ಎನ್ನುವುದು ಕೇವಲ ಆಟವಲ್ಲ ಅದೊಂದು ಭಾವನಾತ್ಮಕ ಸಂಬಂಧ. ದೇಶದ ಕೋಟ್ಯಂತರ ಜನರ ನಾಡಿಮಿಡಿತದಲ್ಲಿ ಕ್ರಿಕೆಟ್‌ ಸೇರಿಕೊಂಡಿದ್ದು, ಯುದ್ಧ ಹೊರತು ಪಡಿಸಿದರೆ ಬಹುಶಃ ಭಾರತೀಯರೆಲ್ಲಾ ಒಗ್ಗೂಡುವುದು...

Read moreDetails

Lakshmi Hebbalkar: ಕಂಠೀರವ ಸ್ಟೇಡಿಯಂ ಪರಿಶೀಲನೆ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

October 7, 2025
ಬಲಿಷ್ಠ ಆಸ್ಟ್ರೇಲಿಯಾ ಎದುರಿಸಲು ಭಾರತ ತಂಡ ಆಯ್ಕೆ!

ಬಲಿಷ್ಠ ಆಸ್ಟ್ರೇಲಿಯಾ ಎದುರಿಸಲು ಭಾರತ ತಂಡ ಆಯ್ಕೆ!

October 5, 2025
Asia Cup : ಭಾರತ-ಪಾಕ್‌ ನಡುವೆ ಒಳ ಒಪ್ಪಂದವಿತ್ತೆ!?

Asia Cup : ಭಾರತ-ಪಾಕ್‌ ನಡುವೆ ಒಳ ಒಪ್ಪಂದವಿತ್ತೆ!?

September 30, 2025
ಭಾರತ v/s ಪಾಕ್ ಎರಡನೇ ಪಂದ್ಯಕ್ಕೆ ಕೌಂಟ್ ಡೌನ್ – ಸೇಡಿಗಾಗಿ ಕಾದು ಕುಳಿತ ಪಾಕ್ 

ಭಾರತ v/s ಪಾಕ್ ಎರಡನೇ ಪಂದ್ಯಕ್ಕೆ ಕೌಂಟ್ ಡೌನ್ – ಸೇಡಿಗಾಗಿ ಕಾದು ಕುಳಿತ ಪಾಕ್ 

September 21, 2025
Next Post
ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ, ಬಿಜೆಪಿಯೇತರ ಪಕ್ಷಗಳಿಂದ ತಯಾರಿ ಆರಂಭ

ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ, ಬಿಜೆಪಿಯೇತರ ಪಕ್ಷಗಳಿಂದ ತಯಾರಿ ಆರಂಭ

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada