ಹುಬ್ಬಳ್ಳಿಯಲ್ಲಿ ಬಾಲಕಿ ಕೊಂದವನ ಎನ್ಕೌಂಟರ್ ವಿಚಾರವಾಗಿ ಕಮಿಷನರ್ ಶಶಿಕುಮಾರ್ ಮಾತನಾಡಿದ್ದು, ಸುಪ್ರೀಕೋರ್ಟ್ ಮಾರ್ಗಸೂಚಿಯಂತೆ ಎನ್ಕೌಂಟರ್ ನಂತರದ ಪ್ರಕ್ರಿಯೆ ನಡೆಯುತ್ತಿವೆ. ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಮಗುವಿನ ಹತ್ಯೆ ಆಗಿತ್ತು. ಆರೋಪಿ ತಪ್ಪಿಸಿಕೊಳ್ಳುವ ವೇಳೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಸಾವಾಗಿತ್ತು. ಇಂತಹ ಪ್ರಕರಣದಲ್ಲಿ ಕೆಲ ಕ್ರಮ ಕೈಗೊಳ್ಳಬೇಕು ಅಂತ ಸುಪ್ರೀಂ ಕೋರ್ಟ್ ಸೂಚನೆ ಇದೆ. ಅದರಂತೆ ತನಿಖಾ ಪ್ರಕ್ರಿಯೆ ನಡೆದಿದೆ . ಈಗ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಮತ್ತೊಂದು ಕಡೆ ಸಿಐಡಿ ತಂಡವೂ ತನಿಖೆ ಆರಂಭಿಸಿದೆ. ಬೆಂಗಳೂರಿನಿಂದ ಸಿಐಡಿ ತಂಡ ಹುಬ್ಬಳ್ಳಿಗೆ ಬಂದು ತನಿಖೆ ನಡೆಸ್ತಿದೆ. ಜೊತೆಗೆ ನ್ಯಾಯಾಂಗ ತನಿಖೆ ಮಾಡಬೇಕು ಅಂತ ಇದ್ದು, ಅದು ಕೂಡ ಆಗುತ್ತಿದೆ ಎಂದಿದ್ದಾರೆ.

ಎನ್ಕೌಂಟರ್ಗೆ ಬಲಿಯಾದ ಆರೋಪಿಯ ಮಾಹಿತಿ ಪರಿಶೀಲನೆ ಮಾಡಲಾಗುತ್ತಿದೆ. ಆತ ಇದ್ದಲ್ಲಿ ಹಾಗೂ ಆತ ಸಂಚರಿಸಿದ ಎಲ್ಲಾ ಕಡೆ ಮಾಹಿತಿ ಕಲೆ ಹಾಕಲಾಗ್ತಿದೆ. ಅವರಿಗೆ ಸಂಬಂಧ ಪಟ್ಟವರನ್ನ ಹುಡುಕುವ ಕೆಲಸ ಮಾಡ್ತಿದ್ದೇವೆ. ಎಲ್ಲಾ ಭಾಷೆಗಳಲ್ಲಿ ಆರೋಪಿಯ ವಿವರಗಳನ್ನು ಬೇರೆ ಬೇರೆ ಕಡೆ ಕಳಿಸಲಾಗಿದೆ. ಆತ ಬಿಹಾರದ ಪಟ್ನಾದವನು ಎಂಬ ಮಾಹಿತಿ ಇದೆ. ಆತನ ಗುರುತು ಪತ್ತೆ ಆಗದೆ ಹೋದ್ರೆ ಇಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುತ್ತದೆ. ಹಂತಕನ ಶವವನ್ನು ಭೂಮಿಯಲ್ಲಿ ಹೂಳಲಾಗುತ್ತದೆ. ಸುಪ್ರೀಂ ಕೋರ್ಟ್ ಗೈಡ್ಲೈನ್ಸ್ ಪ್ರಕಾರ ಚಾಚು ತಪ್ಪದೇ ಪಾಲನೆ ಮಾಡಾಲಾಗುತ್ತಿದೆ. ಆದರೆ ಅದಕ್ಕೂ ಮೊದಲು ಆತನ ಕುಟುಂಬಸ್ಥರು ಬರುವಿಕೆಗಾಗಿ ಕಾಯಲಾಗುತ್ತದೆ ಎಂದಿದ್ದಾರೆ ಕಮಿಷನರ್.
ಕೋಲ್ಡ್ ಸ್ಟೋರೇಜ್ನಲ್ಲಿ ಕೆಲವು ದಿನಗಳ ಕಾಲ ಶವವನ್ನು ಇರಿಸಲಾಗುತ್ತದೆ. ಇಷ್ಟಾದರೂ ಆತನ ಹಿನ್ನೆಲೆ ಪತ್ತೆ ಆಗದಿದ್ದರೆ ಮಣ್ಣು ಮಾಡುವ ಪ್ರಕ್ರಿಯೆಯನ್ನ ನಾವೇ ಮಾಡ್ತೇವೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕಾರ್ಯ ಮಾಡುತ್ತೇವೆ. ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯ ಆಗಿಲ್ಲ. ತನಿಖೆಯಲ್ಲಿ ಏನೇ ಕೇಳಿದ್ರು ಉತ್ತರ ನೀಡಲು ನಾವು ಸಿದ್ದವಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಕ್ರೌರ್ಯ ಮೆರೆಯಿದ್ದ ಉತ್ತರ ಭಾರತ ಮೂಲಕ ಆರೋಪಿಯನ್ನು ಪಿಎಸ್ಐ ಅನ್ನಪೂರ್ಣ ಎನ್ಕೌಂಟರ್ರ್ ಮಾಡಿದ್ದರು. ಜನರು ಅನ್ನಪೂರ್ಣ ಅವರನ್ನು ಲೇಡಿ ಟೈಗರ್ ಎಂದು ಕೊಂಡಾಡಿದ್ದರು. ಎನ್ಕೌಂಟರ್ಗೆ ಬಲಿಯಾದ ರಿತೇಶ್ಗೆ ಸರಿಯಾದ ಶಿಕ್ಷೆಯನ್ನೇ ನೀಡಿದ್ದೀರಿ ಎಂದು ಶಹಬ್ಬಾಸ್ಗಿರಿ ನೀಡಿದ್ದರು. ಆದರೆ ಇದೀಗ ಕಾನೂನು ಪ್ರಕಾರ ಅನ್ನಪೂರ್ಣ ತನಿಖೆಯನ್ನು ಎದುರಿಸಬೇಕಿದೆ. ಕೆಲವು ದಿನಗಳ ಕಾಲ ಅನ್ನಪೂರ್ಣ ಅವರನ್ನು ರಜೆ ಮೇಲೆ ಕಳುಹಿಸಿದರೂ ಅಚ್ಚರಿಯೇನಲ್ಲ..