ಪ್ರಜ್ವಲ್ ರೇವಣ್ಣರ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂದಪಟ್ಟಹಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಹೆಚ್.ಡಿ.ಕುಮಾರಸ್ವಾಮಿ ಒತ್ತಡ ಹೇರಲು ಮುಂದಾಗಿದ್ದಾರೆ. ವಿಡಿಯೋ ಲೀಕ್ ಆಗಿದ್ದರ ಬಗ್ಗೆ ಮೊದಲು ಪ್ರೀತಂಗೌಡ ಹಾಗೂ ದೇವರಾಜೇಗೌಡರನ್ನು ಕರೆಸಿ ವಿಚಾರಣೆ ಮಾಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೆಚ್.ಡಿ.ಕೆ ಅನುಮಾನ ವ್ಯಕ್ತಪಡಿಸಿದ್ದಾರೆ.
![](https://pratidhvani.com/wp-content/uploads/2024/05/6uyjyyyyyyyyyyyyyyyyyyyy-1024x576.jpg)
ವಿಡಿಯೋ ವೈರಲ್ ಆಗಿದ್ಹೇಗೆ ಎಂಬುದನ್ನು ಮೊದಲು ಅರಿತು ನಂತರ ಈ ಪ್ರಕರಣದಲ್ಲಿ ಮುಂದುವರಿಯೋಣ ಎಂದು ಹೆಚ್.ಡಿ.ಕೆ ಮುಂದಾಗಿದ್ದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಹಾಗೂ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಮೇಲೆ ಪರೋಕ್ಷವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಹಲ್ಚಲ್ ಸೃಷ್ಠಿಸಿರುವ ಸಂಸದ ಪ್ರಜ್ವಲ್ ರೇವಣ್ಣರ ವಿಡಿಯೋ ಪ್ರಕರಣ , ಇಡೀ ರಾಜ್ಯಕ್ಕೆ ರಾಜ್ಯವೇ ವಿಡಿಯೋ ವಿಚಾರದಲ್ಲಿ ಚರ್ಚೆಯಲ್ಲಿ ತೊಡಗಿದೆ. ಕಾಂಗ್ರೆಸ್ನ ನಾಯಕರು ಈ ವಿಡಿಯೋವನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಹೀಗಾಗಿ ಮೊದಲು ಈ ವಿಡಿಯೋ ಬಿಡುಗಡೆಯಾಗಿದ್ದು ಹೇಗೆ ಅದನ್ನು ತಿಳಿಯಬೇಕು ಎಂಬುದು ಹೆಚ್.ಡಿ.ಕೆ ಇಂಗಿತವಾಗಿದೆ.
![](https://pratidhvani.com/wp-content/uploads/2024/05/IMG_7391.jpeg)
ಡಿಸೆಂಬರ್ ತಿಂಗಳಲ್ಲಿಯೇ ದೇವರಾಜೇಗೌಡ ಪಕ್ಷದ ಪ್ರಮುಖರಿಗೆ ಪತ್ರ ಬರೆದಿದ್ದು ನಿಜವೇ? ಪತ್ರ ಬಂದಿದ್ರೆ, ನಮ್ಮ ಗಮನಕ್ಕೆ ಅದನ್ನು ಏಕೆ ತಂದಿರಲಿಲ್ಲ ಎಂಬ ಸಾಕಷ್ಟು ಪ್ರಶ್ನೆ ಕುಮಾರಸ್ವಾಮಿಯನ್ನ ಕಾಡುತ್ತಿದೆ.
ಈಗಾಗಲೇ ಪತ್ರಗಳು ಮಾಧ್ಯಮಗಳ ಕೈ ಸೇರಿದೆ.ಪತ್ರದಲ್ಲಿರುವ ಇಂಚಿಂಚೂ ಮಾಹಿತಿಯೂ ಸತ್ಯಕ್ಕೆ ಹತ್ತಿರವಾಗಿದೆ. ಖುದ್ದು ಪತ್ರದಲ್ಲಿ ನನ್ನ ಬಳಿ ದಾಖಲಾತಿಗಳು ಇದೆ ಎಂದು ದೇವರಾಜೇಗೌಡ ತಿಳಿಸಿದ್ದಾರೆ. ಹೀಗಾದ್ದಗಲೂ ನೀವು ಅದನ್ನು ಪರಾಮರ್ಶೆ ಮಾಡಿಲ್ಲ ಏಕೆ ಎಂದು ಹೆಚ್.ಡಿ.ಕೆ ರಾಜ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
![](https://pratidhvani.com/wp-content/uploads/2024/05/IMG_7392.jpeg)
ಕಾರ್ತಿಕ್ ಎಂಬ ಚಾಲಕ ನಾನು ಪೆನ್ಡ್ರೈವ್ ಒಂದು ಕಾಪಿಯನ್ನ ದೇವರಾಜೇಗೌಡರಿಗೆ ನೀಡಿದ್ದೇನೆ ಅಂತಾನೆ.ಅವನ ಮಾಧ್ಯಮ ಹೇಳಿಕೆಯನ್ನು ಗಮನಿಸಿದ್ದೇನೆ. ಆತನನ್ನು ಬೇರೆಡೆಗೆ ಕಾಂಗ್ರೆಸ್ ನಾಯಕರೇ ಶಿಫ್ಟ್ ಮಾಡಿದ್ದಾರೆ.ಮೊದಲು ನೀವು ಪ್ರೀತಂಗೌಡ ಹಾಗೂ ದೇವರಾಜೇಗೌಡರನ್ನು ಕರೆಸಿ ವಿಚಾರಣೆ ಮಾಡಿ.ಬಳಿಕ ಈ ಪ್ರಕರಣದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ತಾಕೀತ ಮಾಡಿದ್ದಾರೆ ಎನ್ನಲಾಗ್ತಿದೆ.