
ಸಿಂಧೂ ನದಿ ಒಪ್ಪಂದ ಅಮಾನತು ಬೆನ್ನಲ್ಲೇ ಅಟ್ಟಾರಿ ಗಡಿಯನ್ನ ಬಂದ್ ಮಾಡಿಸಲಾಗಿದೆ. ಜೊತೆಗೆ ಭಾರತದಲ್ಲಿ ಇರುವ ಪಾಕಿಸ್ತಾನಿಗಳ ವೀಸಾ ರದ್ದು ಮಾಡಲಾಗಿದೆ. ಭಾರದಲ್ಲಿರುವ ಪಾಕ್ ಪ್ರಜೆಗಳು ದೇಶ ಬಿಟ್ಟು ತೊರೆಯುವಂತೆ 48 ಗಂಟೆಗಳ ಕಾಲಾವಕಾಶ ನೀಡಲಾಗಿದೆ.. ಕೇಂದ್ರ ಗೃಹಸಚಿವ ಅಮಿತ್ ಷಾ, ನಿಮ್ಮ ನಿಮ್ಮ ರಾಜ್ಯಗಳಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನ ಈ ಕೂಡಲೇ ವಾಪಸ್ ಕಳಿಸಿ ಅಂತಾ ಮುಖ್ಯಮಂತ್ರಿಗಳಿಗೆ ಸಂದೇಶ ರವಾನಿಸಿದ್ದಾರೆ.

ಎಲ್ಲಾ ಪಾಕಿಸ್ತಾನಿಗಳು ದೇಶ ಬಿಟ್ಟು ತೊಲಗಿ ಅಂತ ನರೇಂದ್ರ ಮೋದಿ ಸರ್ಕಾರ ಆದೇಶ ಕೊಟ್ಟಾಗಿದೆ. ಕೇಂದ್ರದ ಆದೇಶದಂತೆ ಭಾರತ ಪಾಕಿಸ್ತಾನ ಗಡಿಯ ಅಟ್ಟಾರಿ ಗಡಿಯ ಪಂಜಾಬ್ನಲ್ಲಿ ಪಾಕಿಸ್ತಾನಿ ಮೂಲದವರನ್ನ ಹುಡುಕಿ ಹುಡುಕಿ ವಾಪಸ್ ಕಳಿಸಲಾಗ್ತಿದೆ. ಕೆಲವರು ತಾವಾಗೇ ಗಂಟುಮೂಟೆ ಕಟ್ಕೊಂಡ್ ಹೋಗ್ತಿದ್ದಾರೆ.. ಇನ್ನೂ ಕೆಲವರನ್ನು ಪೊಲೀಸರೇ ದಾಖಲೆ ಚೆಕ್ ಮಾಡಿ ಪಾಕಿಸ್ತಾನದ ಗಡಿ ದಾಟಿಸಿ ಕಳುಹಿಸ್ತಿದ್ದಾರೆ. ಪಾಕಿಸ್ತಾನದ ಉಗ್ರರು ಮಾಡಿದ್ದು ತಪ್ಪು. ಹಿಂದೂಗಳನ್ನ ಕೊಂದಿದ್ದು ತಪ್ಪು. ಆದ್ರೆ ಸಾಮಾನ್ಯ ಜನರಾದ ನಾವೇನ್ ತಪ್ಪು ಮಾಡಿದ್ದೀವಿ ಅಂತ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳೆಲ್ಲಾ 48 ಗಂಟೆಗಳಲ್ಲಿ ದೇಶಬಿಡಿ ಅಂತಿದ್ದ ಹಾಗೆ ಕದ್ದುಮುಚ್ಚಿ ಭಾರತದಲ್ಲಿದ್ದ ಪಾಕಿಸ್ತಾನಿ ಪ್ರಜೆಗಳೆಲ್ಲಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತದ ಗಂಡಸರನ್ನ ಮದುವೆಯಾಗಿರುವ ಪಾಕಿಸ್ತಾನಿ ಮಹಿಳೆಯರು 5, 10, 20 ವರ್ಷಗಳಿಂದ ಭಾರತದಲ್ಲೇ ಠಿಕಾಣಿ ಹೂಡಿದ್ರು. 2 ವರ್ಷಕ್ಕೊಮ್ಮೆ ವೀಸಾ ವಿಸ್ತರಣೆ ಮಾಡ್ಕೊಂಡು ಭಾರತದ ಪೌರತ್ವ ಸಿಗುತ್ತೆ ಅಂತ ಕಾಯ್ತಿದ್ರು. ಪಹಲ್ಗಾಮ್ ದಾಳಿ ಬಳಿಕ ವೀಸಾ ರದ್ದಾಗ್ತಿದ್ದಂತೆ ಗಂಡ ಇಂಡಿಯಾ ಬಾರ್ಡರ್ ಒಳಗೆ ಇದ್ರೆ, ಹೆಂಡ್ತಿ, ಮಕ್ಕಳು ಪಾಕಿಸ್ತಾನಕ್ಕೆ ಹೋಗುವಂತಾಗಿದೆ.

ಕೇವಲ ಭಾರತ-ಪಾಕಿಸ್ತಾನ ಗಡಿಭಾಗದಲ್ಲಷ್ಟೇ ಅಲ್ಲ.. ದೇಶದ ಎಲ್ಲಾ ರಾಜ್ಯಗಳಲ್ಲೂ ಭಾರತೀಯರನ್ನ ಮದುವೆಯಾಗಿ ಪಾಕಿಸ್ತಾನಿ ಮಹಿಳೆಯರು ಇದ್ದಾರೆ. 2 ವರ್ಷಕ್ಕೊಮ್ಮೆ ವೀಸಾ ಅವಧಿ ವಿಸ್ತರಣೆ ಮಾಡಿಸ್ಕೊಂಡು ಇಲ್ಲೇ ಗಂಡ, ಮಕ್ಕಳು ಸಂಸಾರ ಮಾಡ್ಕೊಂಡು ಆರಾಮಾಗಿದ್ದಾರೆ. ಕರ್ನಾಟಕದಲ್ಲೂ 80ಕ್ಕೂ ಹೆಚ್ಚು ಪಾಕಿಸ್ತಾನಿ ಮಹಿಳೆಯರು ರಾಜ್ಯದವ್ರನ್ನ ಮದುವೆಯಾಗಿ ಇಲ್ಲಿನ ಸೊಸೆಯರಾಗಿ ಜೀವನ ಮಾಡ್ತಿದ್ದು, ಈಗ ಅವ್ರಿಗೂ ನಡುಕ ಶುರುವಾಗಿದೆ. ಪಾಕ್ ಪ್ರಜೆಗಳಿಗೆ ಗಡಿಪಾರಾಗೋ ಸಮಯ ಬಂದಂತೆ ಕಾಣ್ತಿದೆ..