• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಅತಿ ವಿರಳ ಕಪ್ಪು ರಂಧ್ರವನ್ನು ಪತ್ತೆ ಹಚ್ಚಿದ ಬಾಹ್ಯಾಕಾಶ ವಿಜ್ಞಾನಿಗಳು

ಫಾತಿಮಾ by ಫಾತಿಮಾ
August 30, 2021
in ದೇಶ
0
ಅತಿ ವಿರಳ ಕಪ್ಪು ರಂಧ್ರವನ್ನು ಪತ್ತೆ ಹಚ್ಚಿದ ಬಾಹ್ಯಾಕಾಶ ವಿಜ್ಞಾನಿಗಳು
Share on WhatsAppShare on FacebookShare on Telegram

ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ಸಂಶೋಧಕರು ಭಾರತದ ಏಕೈಕ ಖಗೋಳ ಬಾಹ್ಯಾಕಾಶ ಮಿಷನ್ ಆಸ್ಟ್ರೋಸ್ಯಾಟ್‌ನ ಡಾಟಾವನ್ನು ಬಳಸಿಕೊಂಡು ಮೂರು ಗ್ಯಾಲಕ್ಸಿಗಳ ಮೂರು ಅತಿದೊಡ್ಡ ಕಪ್ಪು ಕುಳಿಗಳು ವಿಲೀನಗೊಂಡು ತ್ರಿವಳಿ ಸಕ್ರಿಯ ಗ್ಯಾಲಕ್ಟಿಕ್ ನ್ಯೂಕ್ಲಿಯೈ ಉಂಟಾಗಿರುವದನ್ನು ಕಂಡುಹಿಡಿದಿದ್ದಾರೆ.

ADVERTISEMENT

“ನಮ್ಮ ಅಧ್ಯಯನವು ಮೂರು ಗೆಲಕ್ಸಿಗಳನ್ನು ಗುರುತಿಸಿದೆ ಮತ್ತು ಪ್ರತಿಯೊಂದು ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್ ‘ಟ್ರಿಪಲ್ ಎಜಿಎನ್’ ವ್ಯವಸ್ಥೆಯನ್ನು ರೂಪಿಸುತ್ತದೆ.  ಕಾಸ್ಮಾಲಾಜಿಕಲ್ ಮಾಡೆಲಿಂಗ್ ಪ್ರಕಾರ 16% ಟ್ರಿಪಲ್ ಎಜಿಎನ್ ಇರಬೇಕಿತ್ತು ಆದರೆ ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಮಾತ್ರ ಕಂಡು ಬಂದಿದೆ” ಎಂದು ಸಂಶೋಧಕರಾದ ಜ್ಯೋತಿ ಯಾದವ್ ಹೇಳಿದ್ದಾರೆ. 

ಅತಿ ದೊಡ್ಡ ಕಪ್ಪು ಕುಳಿಗಳು ಯಾವುದೇ ಬೆಳಕನ್ನು ಹೊರಸೂಸದ ಕಾರಣ ಅವುಗಳನ್ನು ಪತ್ತೆ ಮಾಡುವುದು ಕಷ್ಟ.  ಆದರೆ, ಕಪ್ಪು ಕುಳಿಗಳು ತಮ್ಮ ಸುತ್ತಮುತ್ತಲಿನೊಂದಿಗೆ ಸಂವಹನ ನಡೆಸಿದಾಗ, ಅವು ಧೂಳು ಮತ್ತು ಅನಿಲಗಳನ್ನು ನುಂಗಿ, ಅದನ್ನು ವಿದ್ಯುತ್ಕಾಂತೀಯ ವಿಕಿರಣವಾಗಿ ಪರಿವರ್ತಿಸಿ ಹೊಳೆಯುತ್ತವೆ.

ಕಪ್ಪು ರಂಧ್ರಗಳನ್ನು ಪತ್ತೆ ಹಚ್ಚಬೇಕಾದರೆ ಗ್ಯಾಲಕ್ಸಿಗಳು ವಿಲಿನಗೊಳ್ಳಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.  “ನಾವು ಸಾಮಾನ್ಯವಾಗಿ ಪ್ರತಿ ನಕ್ಷತ್ರಪುಂಜವು ಕಪ್ಪು ಕುಳಿ ಹೊಂದಿದೆ ಎಂದು ಅಂದಾಜಿಸುತ್ತೇವೆ ಆದರೆ ನಾವು ಅದನ್ನು ನೋಡಿರುವುದಿಲ್ಲ.  ಆದರೆ ಗ್ಯಾಲಕ್ಸಿಗಳ ಮಧ್ಯ ಭಾಗದ ಕಡೆಗೆ ಅನಿಲಗಳು ಚಲಿಸಿದಾಗ ಮತ್ತು AGN ಚಟುವಟಿಕೆಯನ್ನು ಪ್ರಚೋದಿಸಿದಾಗ ಗ್ಯಾಲಕ್ಸಿಗಳ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡುವುದರ ಮೂಲಕ ಇದನ್ನು ಪತ್ತೆಹಚ್ಚಬಹುದು” ಎಂದು ಯಾದವ್ ಹೇಳಿದ್ದಾರೆ.

NGC7733 ಮತ್ತು NGC7734  ಎಂಬ ಜೋಡಿ ಗ್ಯಾಲಕ್ಸಿಗಳನ್ನು ಸಂಶೋಧಕರು ಅಧ್ಯಯನ‌ ಮಾಡುತ್ತಿದ್ದಾಗ ಅವುಗಳಲ್ಲಿ ಒಂದರ ಮಧ್ಯದಲ್ಲಿ ಅಸಾಮಾನ್ಯ ಪ್ರಕಾಶಮಾನವಾದ ಕ್ಲಂಪ್ ಒಂದು ಕಂಡು‌ಬಂದಿತ್ತು.  ಆದರೆ ಆ ಕ್ಲಂಪ್ ವಿಭಿನ್ನ ವೇಗದಲ್ಲಿ ಚಲಿಸುತ್ತಿತ್ತು.  ಹಾಗಾಗಿ ಆ  ಕ್ಲಂಪ್ ಒಂದೇ ನಕ್ಷತ್ರಪುಂಜದ ಭಾಗವಲ್ಲ, ಬದಲಿಗೆ ಅವರು NGC7733N ಎಂದು ಹೆಸರಿಸಲಾದ ಪ್ರತ್ಯೇಕ ಗ್ಯಾಲಕ್ಸಿ ಎಂದು ವಿಜ್ಞಾನಿಗಳು ಅಭಿಪ್ರಾಯಕ್ಕೆ ಬಂದರು.

“ಕೆಲವೊಮ್ಮೆ ಎರಡು ಗೆಲಕ್ಸಿಗಳು ಪರಸ್ಪರ ಬಲವನ್ನು ಅನ್ವಯಿಸಿಕೊಂಡಾಗ ಕೆಲವು ವಸ್ತುಗಳು ಗೆಲಕ್ಸಿಯಿಂದ ಹೊರಬೀಳುತ್ತವೆ. ಕೆಲವೊಮ್ಮೆ ಅದು ತನ್ನದೇ ಗುರುತ್ವಾಕರ್ಷಣೆಯ ಅಡಿಯಲ್ಲಿ ಕುಸಿಯಬಹುದು ಮತ್ತು ಒಂದೇ ಸಣ್ಣ ನಕ್ಷತ್ರಪುಂಜವನ್ನು ರೂಪಿಸಬಹುದು” ಎಂದು ಯಾದವ್ ಹೇಳಿದರು.

IIA ಯಿಂದ ಮೌಸುಮಿ ದಾಸ್ ಮತ್ತು ಸುಧಾಂಶು ಬಾರ್ವೇ, ಕಾಲೇಜ್ ಡಿ ಫ್ರಾನ್ಸ್‌ನ ಚೈರ್ ಗ್ಯಾಲಕ್ಸಿ ಎಟ್ ಕಾಸ್ಮೊಲೊಜಿಪ್ಯಾರಿಸ್‌ನ  ಫ್ರಾಂಕೋಯಿಸ್ ಕಾಂಬ್ಸ್ ಸೇರಿದಂತೆ ಹಲವು ಸಂಶೋದಕರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. 2015 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆರಂಭಿಸಿದ ಆಸ್ಟ್ರೋಸಾಟ್‌ನಿಂದ ಡೇಟಾವನ್ನು ಬಳಸಲಾಗಿದೆ ಮತ್ತು ಚಿಲಿಯಲ್ಲಿನ MUSE (ಮಲ್ಟಿ ಯುನಿಟ್ ಸ್ಪೆಕ್ಟ್ರೋಸ್ಕೋಪಿಕ್ ಎಕ್ಸ್‌ಪ್ಲೋರರ್)ನಿಂದಲೂ ಡಾಟಾವನ್ನು ಬಳಸಿಕೊಳ್ಳಲಾಗಿದೆ.

ಬ್ರಹ್ಮಾಂಡದ ವಿಕಾಸವನ್ನು ಅರ್ಥಮಾಡಿಕೊಳ್ಳಲು ಗೆಲಕ್ಸಿಗಳ ವಿಕಾಸವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಹೇಳುವ ಯಾದವ್ “ಪ್ರಸ್ತುತ ಅನಿಲಗಳು ನಕ್ಷತ್ರಪುಂಜದ ಒಳಗಿನ ಪಾರ್ಸೆಕ್ ಅನ್ನು ಹೇಗೆ ತಲುಪುತ್ತವೆ ಎಂದು ನಮಗೆ ಅರ್ಥವಾಗುತ್ತಿಲ್ಲ (ಪಾರ್ಸೆಕ್ ಎನ್ನುವುದು ಸೌರಮಂಡಲದ ಹೊರಗಿನ ಖಗೋಳ ವಸ್ತುಗಳಿಗಿರುವ ದೊಡ್ಡ ಅಂತರವನ್ನು ಅಳೆಯುವ ಉದ್ದದ ಒಂದು ಘಟಕ).  AGN ಗಳು ಗೆಲಕ್ಸಿಗಳ ವಿಕಾಸದ ಮೇಲೂ ಪರಿಣಾಮ ಬೀರುತ್ತವೆ. ನಾವು ಬ್ರಹ್ಮಾಂಡದ ವಿಕಾಸವನ್ನು ಅಧ್ಯಯನ ಮಾಡಬಯಸಿದರೆ ಗೆಲಕ್ಸಿಗಳು ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನೂ  ತಿಳಿದುಕೊಳ್ಳಬೇಕಾಗುತ್ತದೆ.  ನಕ್ಷತ್ರಪುಂಜದ ಮಧ್ಯದಲ್ಲಿ ಕುಳಿತಿರುವ AGN ಅನಿಲವನ್ನು ತಳ್ಳುವ ಮೂಲಕ ನಕ್ಷತ್ರದ ರಚನೆಯನ್ನು ಪ್ರಾರಂಭಿಸಬಹುದು ಅಥವಾ ನಕ್ಷತ್ರಪುಂಜದಿಂದ ಅನಿಲವನ್ನು ತೆಗೆಯುವ ಮೂಲಕ ಅದನ್ನು ನಿಲ್ಲಿಸಬಹುದು”ಎಂದು ಅವರು ಹೇಳಿದ್ದಾರೆ

Tags: astronautsblack holesIndia
Previous Post

ಪಾಲಿಕೆ ಚುನಾವಣೆ ಬಿಸಿ: ಬಿಜೆಪಿ ಪ್ರಣಾಳಿಕೆ ಸುಳ್ಳಿನ ಸರಮಾಲೆ, ಅವರು ನುಡಿದಂತೆ ನಡೆಯಲ್ಲ – ಡಿಕೆಶಿ

Next Post

ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು ಹೇಗೆ ಗೊತ್ತೇ?

Related Posts

Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
0

16 ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ದೇವರಾಜ್ ಅರಸ್ ದಾಖಲೆ ಮುರಿದು ಸಿಎಂ ಆಗಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ಸಿಎಂ ಮೇಲಿರಲಿ. ನಿಮ್ಮ ಆಶೀರ್ವಾದ ಇರೋವರೆಗೂ ಸಿದ್ದರಾಮಯ್ಯ ಅವರಿಗೆ...

Read moreDetails

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

July 12, 2025

CM Siddaramaiah: ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸಿ.ಎಂ.ಸಿದ್ದರಾಮಯ್ಯ ಮೆಚ್ಚುಗೆ..!!

July 12, 2025

Santhosh Lad: ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ..

July 12, 2025
Next Post
ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು ಹೇಗೆ ಗೊತ್ತೇ?

ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು ಹೇಗೆ ಗೊತ್ತೇ?

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada