ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ (Pahalgam terror attack) ಪಾಕಿಸ್ತಾನ ಪ್ರತಿ ಕ್ಷಣ ಭಯದಲ್ಲೇ ದಿನ ದೂಡುವಂತಾಗಿದೆ. ಯಾವ ಕ್ಷಣದಲ್ಲಿ ಭಾರತ (India) ಯಾವ ಸ್ವರೂಪದಲ್ಲಿ ತನ್ನ ಮೇಲೆ ದಾಳಿ ಮಾಡಲಿದ್ಯೋ ಎಂಬ ಆತಂಕ ಪಾಕಿಸ್ತಾನದಲ್ಲಿ (Pakistan) ಮನೆ ಮಾಡಿದೆ. ಹೀಗಾಗಿ ಪ್ರತಿ ನಿಮಿಷ ಕೂಡ ಪಾಕಿಸ್ತಾನದ ದಾಳಿಯ ನಿರೀಕ್ಷೆಯಲ್ಲಿ ದಿನ ದೂಡುತ್ತಿದೆ.

ಈ ಕುರಿತು ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಅಸೀಫ (Khwaja asif), ಭಾರತ ಯಾವುದೇ ಕ್ಷಣದಲ್ಲಾದರೂ ಪಾಕ್ ಮೇಲೆ ಮಿಲಿಟರಿ ದಾಳಿ ನಡೆಸಬಹುದು ಎಂದು ಹೇಳಿಕೆ ನೀಡಿದ್ದಾನೆ. ಎಲ್ ಓ ಸಿ ಉದ್ದಕ್ಕೂ ಭಾರತ ಯಾವುದೇ ಕ್ಷಣದಲ್ಲಾದರೂ ದಾಳಿ ನಡೆಸಬಹುದು ಎಂದ ಪಾಕ್ ರಕ್ಷಣಾ ಇಲಾಖೆಯ ಸಚಿವ ಖ್ವಾಜಾ ಅಸೀಫ್ ಆತಂಕ ವ್ಯಕ್ತಪಡಿಸಿದ್ದಾನೆ.
ಹೀಗಾಗಿ ಪಾಕಿಸ್ತಾನದಾದ್ಯಂತ ಆಂತಂಕ ಇನ್ನಷ್ಟು ಹೆಚ್ಚಾಗಿದ್ದು, ಪಾಕಿಸ್ತಾನ ಸೇನೆ ಮತ್ತು ಆಡಳಿತ ಥರ ಥರ ಅಂತ ನಡುಗುತ್ತಿದೆ.ಇಂದಲ್ಲ ನಾಳೆ ಪಾಕಿಸ್ತಾನಕ್ಕೆ ಭಾರತ ಪೆಟ್ಟು ಕೊಡೋದು ಶತಸಿದ್ಧ ಎಂದು ಅರಿತಿರುವ ಪಾಕ್, ಈಗ ಭಾರತದ ದಾಳಿಯ ಭೀತಿ ಹೆಚ್ಚಳವಾಗಿದೆ.