ಕೊರೊನಾ ಇಡೀ ವಿಶ್ವವನ್ನೆ ಕ್ವಾರಂಟೀನ್ ಮಾಡಿರುವ ಸಾಂಕ್ರಾಮಿಕ ರೋಗ. ಆದ್ರೆ ಇದಕ್ಕಿಂತಲು ಡೇಂಜರಸ್ ಖಾಯಿಲೆಗಳು, ಮಾನವಕುಲವನ್ನ ನೂರಾರು ವರ್ಷಗಳಿಂದಲೂ ಕಾಡುತ್ತಿವೆ. ಅದ್ರಲ್ಲಿ ಡಯಾಬಿಟಿಸ್ ಮೇನ್ ಸ್ಟ್ರೀಮ್ ರೋಗವಾಗಿ ಮಾರ್ಪಟ್ಟಿದೆ. ಭಾರತವಂತು ಡಯಾಬಿಟಿಸ್ ಕ್ಯಾಪಿಟಲ್ ಅಂತಾನೇ ಕರೆಸಿಕೊಳ್ತಿದೆ. ಈ ನಡುವೆ ರಾಜಧಾನಿಯು ಸಕ್ಕರೆ ಖಾಯಿಲೆಯ ತಾಣವಾಗಿ ಬದಲಾಗ್ತಿದೆ ಎಂದು ಪಾಲಿಕೆ ನಡೆಸಿದ ಸರ್ವೆಯಲ್ಲೆ ಬಯಲಾಗಿದೆ.
ನಗರ ಬೆಳೆಯುತ್ತಿದೆ, ಟೆಕ್ನಾಲಜಿ ಹೊಸ ಮಜಲನ್ನ ತಲುಪುತ್ತಿದೆ. ಆಹಾರ ಪದ್ಧತಿ ಬದಲಾಗಿದೆ ಈ ಎಲ್ಲಾ ಅಂಶಗಳು ಮನುಷ್ಯನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಕೊರೋನಾ, ಹೈ ಮತ್ತು ಲೋ ಬಿಪಿ, ಥೈರಾಯ್ಡ್, ಕ್ಯಾನ್ಸರ್, ಹೃದಯಸಂಬಂಧಿ ಖಾಯಿಲೆಗಳು ಹತ್ತು ಮಂದಿಯಲ್ಲಿ ಒಬ್ಬರಿಗಾದರು ಇರುತ್ತವೆ. ಮೊದಲೆಲ್ಲಾ ಶ್ರೀಮಂತರ ಖಾಯಿಲೆಯಾಗಿದ್ದ ಡಯಾಬಿಟಿಸ್ ಈಗ ಪುಟ್ಟ ಮಕ್ಕಳಲ್ಲು ಕಾಣಿಸಿಕೊಳ್ತಿದೆ, ಗುಡಿಸಲಲ್ಲಿರೊ ಬಡವನನ್ನು ಆವರಿಸಿದೆ. ಈ ಬಗ್ಗೆ ಒಂದು ಗಂಭೀರ ವಿಷಯ ಸ್ವತಃ ಪಾಲಿಕೆ ನಡೆಸಿರುವ ಸರ್ವೆಯಲ್ಲಿ ಬಯಲಾಗಿದೆ.
ಬೆಂಗಳೂರು ಸಕ್ಕರೆ ಖಾಯಿಲೆಯ ಕ್ಯಾಪಿಟಲ್ ಆಗ್ತಿದೆಯಾ.? ಬಿಬಿಎಂಪಿ ನಡೆಸಿದ ಸರ್ವೆಯಲ್ಲಿ ಈ ಖಾಯಿಲೆಯ ಕರಾಳತೆ ಬಯಲಾಗಿದೆ. ಸರ್ವೆ ಪ್ರಕಾರ ನಗರದ ಶೇ 40%ಕ್ಕೂ ಅಧಿಕ ಮಂದಿಯಲ್ಲಿ ಡಯಾಬಿಟಿಸ್ ರೋಗವಿರುವುದು ತಿಳಿದುಬಂದಿದೆ. ಇಪ್ಪತ್ತೈದು ದಿನಗಳ ಕಾಲ 2,48,280 ಮನೆ ಬಾಗಿಲಿಗೆ ಹೋಗಿ ಸರ್ವೆ ಮಾಡಿರುವ ಪಾಲಿಕೆ, ಬರೋಬ್ಬರಿ 7,11,648 ಜನರ ಆರೋಗ್ಯದ ಸ್ಥಿತಿ ಪರೀಕ್ಷಿಸಿದೆ. ಅದರಲ್ಲಿ 57,528 ಮಂದಿ ವಿವಿಧ ರೋಗಳಿಂದ ಬಳಲುತ್ತಿದ್ದು, ಇನ್ನುಳಿದ 35.82% ಮಂದಿಗೆ ಹೈ ಬಿಪಿ ಹಾಗೂ 2.99% ಜನರಿಗೆ ಥೈರಾಯ್ಡ್, 2.48% ಮಂದಿ ಹೃದಯ ಖಾಯಿಲೆಗಳಿರುವುದು ತಿಳಿದು ಬಂದಿದೆ.
ಸರ್ವೆಯಲ್ಲಿ ಭಾಗವಹಿಸಿದ್ದ ಒಟ್ಟು ಮಂದಿಯಲ್ಲಿ 22,313 ಜನರು ಕೋವಿಡ್ ಗೆ ತುತ್ತಾಗಿದ್ದವರು. ಇದೇ ವೇಳೆ ಡಯಾಬಿಟಿಕ್ ಪೇಷೆಂಟ್ಸ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇನ್ನು ವೈದ್ಯರ ಪ್ರಕಾರ ಈ ಇಡೀ ಪ್ಯಾಂಡೆಮಿಕ್ ನಲ್ಲಿ ಮಕ್ಕಳಲ್ಲಿ ಟೈಪ್ 1 ಡಯಾಬಿಟಿಸ್ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸರಿಯಾದ ಆಹಾರ ಕ್ರಮ ಬೆಳೆಸಿಕೊಳ್ಳದಿದ್ರೆ ಈ ಖಾಯಿಲೆ ಹೆಚ್ಚಾಗೊ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ವಿವಿಧ ಖಾಯಿಲೆಗಳಿರೊ ಮಂದಿಯನ್ನ ಕೊರೊನಾ ಆವರಿಸಿದರೆ ಅವರ ಚೇತರಿಕೆ ಪ್ರಮಾಣ ಇಳಿಮುಖವಾಗುತ್ತೆ. ಇಂತಾ ಸಂದರ್ಭದಲ್ಲಿ ಖಾಯಿಲೆಗಳ ಪ್ರಮಾಣ ಹೆಚ್ಚುತ್ತಾ ಹೋದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕಕಾರಿ ವಿಷಯಗಳು ಕೇಳಿಬರುತ್ತಿವೆ. ಆದರೆ ಇದರಿಂದ ಹೊರಬರುವುದೇನು ಕಷ್ಟ ಸಾಧ್ಯವಲ್ಲ. ಆಹಾರ ಪದ್ದತಿ ಹಾಗೂ ಸೂಕ್ತ ರೀತಿಯ ವ್ಯಾಯಾಮ ನಡೆಸಿದರೆ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಮಟ್ಟ ಹಾಕಬಹುದು.