ಭಾರತದ ಲೋಕಸಭಾ ಚುನಾವಣೆ (Parliment election) ಮುಕ್ತಾಯವಾಗಿದ್ದು, ಜೂನ್ 4 ಮಂಗಳವಾರ ಕೆಲವು ಪಕ್ಷಗಳಿಗೆ ಮಂಗಳಕರ ಆಗಿದ್ದರೆ ಇನ್ನೂ ಕೆಲವು ಪಕ್ಷಗಳಿಗೆ ಊಹಿಸಿದ್ದಷ್ಟು ಸ್ಥಾನ ಬಾರದೆ ಅಮಂಗಳಕರವಾಗಿ ಪರಿಣಮಿಸಿದೆ. ಅಂತಿಮವಾಗಿ ಲೋಕಸಭೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದೆ ಇರುವುದು ಸಾಕಷ್ಟು ಜನರ ಬೇಸರಕ್ಕೂ ಕಾರಣವಾಗಿದೆ. ಅದು ಬಿಜೆಪಿ (BJP) ಅಭಿಮಾನಿಗಳಲ್ಲೇ ಹೆಚ್ಚಾಗಿ ಈ ರೀತಿಯ ಭಾವನೆ ಹೆಚ್ಚಾಗಿದೆ. ಈ ಬಾರಿ ಚಾರ್ ಸೋ ಪಾರ್ ಎನ್ನುವ ಘೋಷಣೆಯೊಂದಿಗೆ ಈ ಬಾರಿಯ ಚುನಾವಣೆ ಎದುರಿಸಿದ್ದ ನರೇಂದ್ರ ಮೋದಿ (Narendra modi) ನೇತೃತ್ವದ ಎನ್ಡಿಎ (NDA) ಮೈತ್ರಿಕೂಟ 290 ಆಸುಪಾಸಿನಲ್ಲಿ ನಿಂತು ಹೋಗಿದೆ. NDA ಮೈತ್ರಿಕೂಟ ಬಹುಮತದ ಮಾರ್ಜಿನ್ ನಂಬರ್ (Magic number) ಗೆರೆ ದಾಟಿದೆ. ಆದರೂ ಬಿಜೆಪಿ ಏಕಾಂಗಿಯಾಗಿ ಸರಳ ಬಹುಮತ ಪಡೆಯಬೇಕಿತ್ತು ಅನ್ನೋದು ಬಿಜೆಪಿ ಬೆಂಬಲಿಗರ ಅಂಬೋಣ.
![](https://pratidhvani.com/wp-content/uploads/2024/06/IMG_8099.jpeg)
ಹೌದು, ಯಾವುದೇ ಒಂದು ದೇಶ ಅಭಿವೃದ್ಧಿ ಆಗಬೇಕು ಎಂದಾಗ ಒಂದು ಪಕ್ಷ ಅಧಿಕಾರದಲ್ಲಿ ಇರಬೇಕು. ಅಂತ್ರತ್ರ ಸರ್ಕಾರ ಜಾರಿಯಲ್ಲಿ ಇದ್ದರೆ ಯಾವುದೇ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಈಗ ಕಳೆದ ಸರ್ಕಾರದ ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ (Jammu & kashmir) ಕೊಟ್ಟಿದ್ದ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 (Article 370) ರದ್ದು ಮಾಡುವ ಮೂಲಕ ಗಟ್ಟಿ ನಿರ್ಧಾರ ಮಾಡಿದ್ದರು. ಇದಕ್ಕೆ ಕಾರಣ ಬಿಜೆಪಿ ಪಕ್ಷವೇ ಸರಳ ಬಹುಮತ ಪಡೆದಿತ್ತು. ಯಾವುದೇ ಪಕ್ಷ ಅಡ್ಡಗಾಲು ಹಾಕುತ್ತೆ ಅನ್ನೋ ಭಯ ಇರಲಿಲ್ಲ. ಒಂದು ವೇಳೆ ಮೈತ್ರಿ ಸರ್ಕಾರ ಇದ್ದಿದ್ದರೆ ಮಿತ್ರ ಪಕ್ಷವನ್ನು ಮನವೊಲಿಸಬೇಕಿತ್ತು. ಕೆಲವೊಂದು ಬದಲಾವಣೆಗೆ ಹೇಳಿದ್ದರೆ ಮಾಡಬೇಕಿತ್ತು. ಆದರೆ ಬಿಜೆಪಿಗೆ ಬಹುಮತ ಇದ್ದಿದ್ದರಿಂದ ತಮ್ಮಿಚ್ಚೆಯಂತೆ ಆರ್ಟಿಕಲ್ 370 ತೆಗೆದುಹಾಕಿದ್ರು.
![](https://pratidhvani.com/wp-content/uploads/2024/06/IMG_8098.jpeg)
ಯಾವುದೇ ಸರ್ಕಾರ ಸುಭದ್ರವಾಗಿ ಇಲ್ಲ ಎಂದರೆ ಆ ದೇಶದ ಆರ್ಥಿಕತೆ (Economy) ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಅಭಿವೃದ್ಧಿಉ ಕುಂಠಿತ ಆಗುತ್ತದೆ. ಸರ್ಕಾರವನ್ನು ಉಳಿಸಿಕೊಳ್ಳುವತ್ತ ಸರ್ಕಾರದ ಪ್ರಯತ್ನ ನಡೆಯುತ್ತಿರುತ್ತದೆ. ಹೀಗಿರುವಾಗ ಅಭಿವೃದ್ಧಿ ಕಡೆಗೆ ಗಮನ ಕೊಡುವುದು ಕಷ್ಟವಾಗುತ್ತದೆ. ಇಷ್ಟು ಮಾತ್ರವಲ್ಲದ ಮಿತ್ರ ಪಕ್ಷಗಳ ಕೋರಿಕೆಯನ್ನು ಈಡೇರಿಸುವುದು, ಅವರ ರಾಜ್ಯಗಳಿಗೆ ವಿಶೇಷ ಅನುದಾನ ನೀಡುವುದು ಸೇರಿದಂತೆ ಹಲವಾರು ಸ್ವಹಿತಾಸಕ್ತಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದು ದೇಶದ ಬೆಳವಣಿಗೆಗೆ ಪೂರಕವಲ್ಲ ಎನ್ನಬಹುದು. ಆದರೆ ಈ ಬಾರಿಯ ಫಲಿತಾಂಶ ಅದೇ ರೀತಿ ಆಗಿದೆ.
![](https://pratidhvani.com/wp-content/uploads/2024/06/IMG_8097.jpeg)
ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಭಾರತೀಯ ಜನತಾ ಪಾರ್ಟಿ ಕೇವಲ 240ರ ಆಸುಪಾಸಿನಲ್ಲಿ ನಿಂತು ಹೋಗಿದೆ. ಸ್ವತಃ ನರೇಂದ್ರ ಮೋದಿಯೇ (Narendra modi) ಪ್ರಧಾನಿ ಆದರೂ ಕಳೆದ ಎರಡು ಬಾರಿ ನಡೆಸಿದ ಸರ್ಕಾರದಂತೆ ಆಡಳಿತ ನಡೆಸುವುದು ಕಷ್ಟಸಾಧ್ಯ. ಅಧಿಕಾರದಲ್ಲಿ ಸಂಫೂರ್ಣ ಬಹುಮತ ಬಂದಿದ್ದರೆ ನಾನು ಮಾಡಿದ್ದೇ ಆಡಳಿತ ಎನ್ನುವಂತೆ ತಮ್ಮಿಷ್ಟದ ಎಲ್ಲಾ ಯೋಜನೆಗಳನ್ನು ಜಾರಿ ಮಾಡಬಹುದಿತ್ತು. ಆದರೆ ಇದೀಗ ಮಿತ್ರಪಕ್ಷಗಳ ಬೆಂಬಲ ಅಗತ್ಯವಾಗಿದ್ದು, ಎಲ್ಲವನ್ನೂ ಮಿತ್ರಪಕ್ಷಗಳ ಜೊತೆಗೆ ಚರ್ಚೆ ನಡೆಸಿಯೇ ನಿರ್ಧಾರ ಮಾಡಬೇಕಿದೆ. ಈಗಿರುವಾಗ ದೇಶದ ಅಭಿವೃದ್ಧಿ ಕುಂಠಿತ ಆಗುತ್ತದೆಯೇ ಎಂದರೆ ಖಂಡಿತ ಎನ್ನಬಹುದು. ಆದರೆ ಜನರ ಜೀವನಕ್ಕೆ ಸಾಕಷ್ಟು ಕೊಡುಗೆಗಳು ಸಿಗುವ ಸಾಧ್ಯತೆಯೂ ಹೆಚ್ಚಾಗಿದೆ.