PSI ಅಕ್ರಮ ನೇಮಕಾತಿ ಹಗರಣದ ಹೊಣೆಹೊತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ವಯನಾಡ್ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತನಿಖೆ ಕಟ್ಟುನಿಟ್ಟಾಗಿ ನಡೆಯಬೇಕು. ಮುಖ್ಯಮಂತ್ರಿ ಸ್ಥಾನದಲ್ಲಿರುವ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯ ಎಂದು ಹೇಳಿದ್ದಾರೆ.

ಬಿಜೆಪಿಯ ಲಜ್ಜೆಗೇಡಿ ಭ್ರಷ್ಟಾಚಾರ ಮತ್ತು “ಉದ್ಯೋಗಗಳ ಮಾರಾಟ” ಕರ್ನಾಟಕದ ಸಾವಿರಾರು ಯುವಕರ ಕನಸುಗಳನ್ನು ಮಣ್ಣಾಗಿಸಿದೆ. ಈ ಹಗರಣ ನಡೆದಾಗ ಇಂದು ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಸಮರ್ಪಕ ತನಿಖೆ ನಡೆಯಬೇಕೆಂದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
BJP's brazen corruption & “Sale of Jobs” destroyed the dreams of thousands of youth in Karnataka.
— Rahul Gandhi (@RahulGandhi) July 4, 2022
The CM, who was then HM, must be sacked for any fair investigation.
Why hasn't the PM taken ANY ACTION?
Is this the BJP govt’s “Sab Khaenge, Sabko Khilaenge” moment? pic.twitter.com/h8zrwt0ZZj