ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ನಡೆದ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಮುಸ್ಲಿಮ್ ಸಮುದಾಯದವರು ಪೊಲೀಸರೊಂದಿಗೆ ಘರ್ಷಣೆಗೆ ನಡೆಸಿದ ಕಾರಣ ಅಧಿಕಾರಿ ಸೇರಿದಂತೆ ಆರು ಪೊಲೀಸರು ಎಂಟು ಮಂದಿ ಗಾಯಗೊಂಡಿದ್ದಾರೆ.
ಕಥುವಾ ಜಿಲ್ಲೆಯ ನಗ್ರಿ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮಸೀದಿಯನ್ನು ಕೆಡವಲು ಬುಲ್ಡೋಜರ್ಗಳನ್ನು ಬಳಸಲಾಗಿದೆ. ಪ್ರದೇಶದ ನಿವಾಸಿಗಳು, ಹೆಚ್ಚಾಗಿ ಗುಜ್ಜರ್-ಬಕರ್ವಾಲ್ ಅಲೆಮಾರಿ ಸಮುದಾಯದವರಾಗಿದ್ದು ಧ್ವಂಸವನ್ನು ವಿರೋಧಿಸಿದರು, ಪೊಲೀಸರೊಂದಿಗೆ ಘರ್ಷಣೆ ನಡೆಸಿ ಮತ್ತು ಕಲ್ಲು ತೂರಾಟ ನಡೆಸಿದರು. ನೂರಾರು ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಗುಜ್ಜರ್-ಬಕರ್ವಾಲ್ಗಳು ಹಿಂದಿನ ಘಟನೆಗಳನ್ನು ಉದಾಹರಿಸಿದ್ದು ಮತ್ತು ಜಿಲ್ಲಾಡಳಿತವು ತಮ್ಮ ಪೂಜಾ ಸ್ಥಳಗಳನ್ನು ಆಯ್ದು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದೆ ಆದರೆ ತೆರವು ಕಾರ್ಯಾಚರಣೆ ದಿನನಿತ್ಯದ ಡ್ರೈವ್ನ ಭಾಗವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅನಧಿಕೃತ ನಿರ್ಮಾಣವನ್ನು ತಡೆಯಲು ಸೂಚನೆಗಳನ್ನು ನೀಡಲಾಗಿದೆ. ಈ ಹಿಂದೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು, ಆದರೆ ಅಕ್ರಮವಾಗಿ ಮಸೀದಿ ನಿರ್ಮಾಣ ಕೆಲಸ ಮುಂದುವರೆದಿದೆ. ಅಕ್ರಮ ಅತಿಕ್ರಮಣದಾರರ ವಿರುದ್ಧ ನಮ್ಮ ಕ್ರಮವು ಮಾಮೂಲಿ ತೆರವು ಕಾರ್ಯಾಚರಣೆ ಆಗಿದೆ. ಈ ವಿಷಯವನ್ನು ತಪ್ಪಾಗಿ ಅರ್ಥೈಸಿಕೊಳ್ಳದಂತೆ ನಾವು ನಾಗರಿಕ ಸಮಾಜವನ್ನು ಒತ್ತಾಯಿಸುತ್ತೇವೆ. ಇದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಎಂದು ಪೋಲೀಸ್ ಅಧಿಕಾರಿಯ ಹೇಳಿಕೆಯನ್ನು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.
ಧ್ವಂಸವನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್, ಸುಪ್ರೀಂ ಕೋರ್ಟ್ ಆದೇಶದಂತೆ ಸೆಪ್ಟೆಂಬರ್ ಅಂತ್ಯದೊಳಗೆ ನಡೆಯಬೇಕಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಈ ಕಾರ್ಯಾಚರಣೆ ಧ್ರುವೀಕರಣದ ಗುರಿಯನ್ನು ಹೊಂದಿದೆ ಎಂದು ಹೇಳಿದೆ. ಜನರು ಶಾಂತವಾಗಿರುವಂತೆ ಒತ್ತಾಯಿಸಿ, ಘಟನೆಯ ಬಗ್ಗೆ ಸಮಗ್ರ ತನಿಖೆಯನ್ನು ಪ್ರಾರಂಭಿಸಲು ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಪಕ್ಷವು ಮನವಿ ಮಾಡಿದೆ.
![](https://pratidhvani.com/wp-content/uploads/2024/06/IMG-20240630-WA0000-1024x630.jpg)