ದೆಹಲಿ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮುಸ್ಲಿಮರ ಮೀಸಲಾತಿ ಹೆಚ್ಚಿಸುತ್ತೇನೆ ಎಂದು ಹೇಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಬಹಳ ಯೋಚನೆ ಮಾಡಿ ಈ ಮೀಸಲಾತಿ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ ಎಂದು ಹೇಳಿದೆ .
ಮೀಸಲಾತಿಯನ್ನು ಜಾರಿಗೆ ತರುವ ಮುನ್ನ ಸಮಿತಿಯನ್ನು ರಚಿಸಿ ಹಲವರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸುಪ್ರೀಂಕೋರ್ಟ್ನಲ್ಲಿಯೂ ಯಾವುದೇ ವಿರೋಧ ಬರಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ಸರ್ಕಾರವು ನೀಡಿರುವ ಮೀಸಲಾತಿ ಇದೇ ರೀತಿ ಮುಂದುವರಿಯುತ್ತದೆ ಎಂದು ಹೇಳಿದರು.
#WATCH | Reservation within reservation done with a lot of thought…Before the end of campaigning for Karnataka elections, Siddaramaiah must clarify that if Congress increases the reservation for Muslims from 4% to 6%, then whose reservation will they cut-down,says HM Amit Shah. pic.twitter.com/JLsCF1Q3RS
— ANI (@ANI) May 8, 2023
ಸಿದ್ದರಾಮಯ್ಯ ಮುಸ್ಲಿಮರ ಮೀಸಲಾತಿಯನ್ನು 4 ಪ್ರತಿಶತದಿಂದ 6 ಪ್ರತಿಶತಕ್ಕೆ ಹೆಚ್ಚಿಸುತ್ತೇನೆಂದು ಹೇಳುತ್ತಾರೆ. ಹೀಗೆ ಮಾಡುವ ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಯಾರ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರ ಮೀಸಲಾತಿಯನ್ನು ಹೆಚ್ಚಿಸುತ್ತಾರೆಂಬುದನ್ನು ಸ್ಪಷ್ಟಪಡಿಸಲಿ. ಒಬಿಸಿ , ಲಿಂಗಾಯತ, ಎಸ್ಸಿ, ಎಸ್ಟಿ ಇವರಲ್ಲಿ ಯಾರ ಮೀಸಲಾತಿಗೆ ಕತ್ತರಿ ಹಾಕುವ ಉದ್ದೇಶವನ್ನು ಸಿದ್ದರಾಮಯ್ಯ ಹೊಂದಿದ್ದಾರೆ ಅನ್ನೋದು ಚುನಾವಣೆಗೂ ಮೊದಲೇ ಜನತೆಗೆ ತಿಳಿಯಲಿ ಎಂದು ಹೇಳಿದ್ದಾರೆ.