Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

IBM ಮುಖ್ಯಸ್ಥರಾಗಿ ಭಾರತೀಯನ ನೇಮಕ: ಒಂದಷ್ಟು ಖುಷಿ, ಒಂದಷ್ಟು ಹೆಮ್ಮೆ… 

IBM ಮುಖ್ಯಸ್ಥರಾಗಿ ಭಾರತೀಯನ ನೇಮಕ: ಒಂದಷ್ಟು ಖುಷಿ, ಒಂದಷ್ಟು ಹೆಮ್ಮೆ...
IBM ಮುಖ್ಯಸ್ಥರಾಗಿ ಭಾರತೀಯನ ನೇಮಕ: ಒಂದಷ್ಟು ಖುಷಿ

February 2, 2020
Share on FacebookShare on Twitter

ಜಗತ್ತಿನ ಅತ್ಯಗ್ರ tech giantಗಳಲ್ಲಿ ಒಂದಾಗಿರುವ ಆಗಿರುವ IBMನ ಮುಖ್ಯಸ್ಥರಾಗಿ ಭಾರತೀಯ ಅರವಿಂದ್‌ ಕೃಷ್ಣ ಆಯ್ಕೆಯಾಗಿರುವ ಸುದ್ದಿ ಅದಾಗಲೇ ವೈರಲ್ ಆಗಿದೆ. Data centric ಜಗತ್ತಿನ ಕೇಂದ್ರ ಬಿಂದುಗಳಾದ ಈ ಐಟಿ ಕಂಪನಿಗಳಲ್ಲಿ ಭಾರತೀಯರ ಸಾಧನೆಗಳ ಬಗ್ಗೆ ದೇಶದ ಒಂದು ವರ್ಗ ಹೆಮ್ಮೆ ಪಡುತ್ತಿದ್ದರೆ, ಮತ್ತೊಂದೆಡೆ ಎಂತೆಂಥಾ ಟಾಪ್ ತಲೆಗಳನ್ನೆಲ್ಲಾ ಉಳಿಸಿಕೊಳ್ಳಲು ಒಂದು ವ್ಯವಸ್ಥೆಯಾಗಿ ನಾವೆಲ್ಲಾ ಯಾವ ಮಟ್ಟಿಗೆ ವಿಫಲರಾಗಿಬಿಟ್ಟಿದ್ದೇವೆ ಎಂಬ ನೋವೂ ಸಹ ನಮ್ಮನ್ನು ಒಳಗೊಳಗೇ ಕಾಡುತ್ತಿದೆ ಎನ್ನುವುದಂತೂ ಅಷ್ಟೇ ಸತ್ಯ.

ಹೆಚ್ಚು ಓದಿದ ಸ್ಟೋರಿಗಳು

ಪ್ರಧಾನಿ MODI ಮತ್ತು ಅದಾನಿ ನಡುವಿನ ಸಂಬಂಧ ಏನು? ಪ್ರಶ್ನಿಸುವುದನ್ನು ನಾನು ನಿಲ್ಲಿಸಲ್ಲ: Rahul Gandhi

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ಕಂಪ್ಯೂಟಿಂಗ್‌ ಕ್ಷೇತ್ರದ ಮೊದಲಿಗರಲ್ಲಿ ಒಂದು ಎಂಬ ಹೆಗ್ಗಳಿಕೆ ಇರುವ ಕಂಪನಿಯಾದ IBMನ ಮುಖ್ಯಸ್ಥರಾಗಿ ನೇಮಕಾವಾಗಿರುವ ಅರವಿಂದ್‌, ಸಂಸ್ಥೆಯ ಸದ್ಯದ ನಿಇಓ ವರ್ಜಿನಿಯಾ ರೊಮೆಟ್ಟಿ ಏಪ್ರಿಲ್ 6ರಂದ ಹುದ್ದೆ ತ್ಯಜಿಸಲಿದ್ದು, ತೆರವಾದ ಸ್ಥಾನವನ್ನು ಭರಿಸಲಿದ್ದಾರೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಗೆ ಸೇರಿದವರಾದ ನಿವೃತ್ತ ಸೇನಾಧಿಕಾರಿ ವಿನೋದ್ ಕೃಷ್ಣ ಪುತ್ರರಾದ ಅರವಿಂದ್‌ ಕೃಷ್ಣ, ಕಾನ್ಪುರ ಐಐಟಿಯಲ್ಲಿ ಇಂಜಿನಿಯರಿಂಗ್‌ ಪದವಿ ಮುಗಿಸಿರುವ ಅರವಿಂದ್‌ ಅಮೆರಿಕದ ಇಲೆನೋಯ್ ವಿವಿಯಲ್ಲಿ ಪಿಎಚ್‌ಡಿ ಮಾಡಿದ್ದಾರೆ. 1990ರಿಂದಲೂ IBMನಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ಸದ್ಯ ಸಂಸ್ಥೆಯ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಸಾಫ್ಟ್‌ವೇರ್‌ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಸಶೋಧನೆ & ಅಭಿವೃದ್ಧಿಯಲ್ಲಿ ಅಪಾರವಾದ ಅನುಭವ ಹೊಂದಿರುವ ಅರವಿಂದ್‌ ಕೃಷ್ಣ ಅನೇಕ ಹೊಸತುಗಳನ್ನು ತಂತ್ರಜ್ಞಾನ ಜಗತ್ತಿಗೆ ಪರಿಚಯಿಸಿದ್ದು, ಅವರ ಹೆಸರಿನಲ್ಲಿ 15 ಪೇಟೆಂಟ್‌ಗಳಿವೆ!

ಮೈಕ್ರೋಸಾಫ್ಟ್‌ನ ಸತ್ಯ ನಡೆಲ್ಲ, ಆಲ್ಫಬೆಟ್‌/ಗೂಗಲ್‌ನ ಸುಂದರ್‌ ಪಿಚ್ಚಾಯ್‌, ಅಡೋಬ್‌ನ ಶಂತನು ನಾರಾಯಣ್, ಮೈಕ್ರಾನ್‌ ಟೆಕ್ನಾಲಜಿಯ ಸಂಜಯ್‌ ಮೆಹ್ರೋತ್ರಾ, ಪಾಲಾ ಆಲ್ಟೋದ ನಿಕೇಶ್ ಅರೋರಾ ಹಾಗೂ NetAppನ ಜಾರ್ಜ್ ಕುರಿಯನ್‌ ಈ ಪಟ್ಟಿಯಲ್ಲಿರುವ ಇತರ ಘಟಾನುಘಟಿಗಳಾಗಿದ್ದಾರೆ. ಇವರೆಲ್ಲಾ ಮುನ್ನಡೆಸುತಿರುವ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು $2.7 ಲಕ್ಷ ಕೋಟಿಗಳಷ್ಟಿದೆ.

2001ರ ವೇಳಗೆ $107 ಶತಕೋಟಿಯಷ್ಟು ಮಾರುಕಟ್ಟೆ ಮೌಲ್ಯವಿದ್ದ IBM, ಕಳೆದ ಎಂಟು ವರ್ಷಗಳಲ್ಲಿ ಇಳಿಮುಖದ ಹಾದಿಯಲ್ಲಿ ಸಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊಂಚ ಚೇತರಿಕೆ ಕಂಡಿರುವ ಸಂಸ್ಥೆಗೆ, ಅರವಿಂದ್ ಹೊಸ ಚೇತರಿಕೆ ನೀಡುವರು ಎನ್ನುವ ಭರವಸೆ ಇಡಲಾಗಿದೆ. ಕಳೆದೊಂದು ದಶಕದಿಂದ ಕಳೆಗುಂದಿದ್ದ ಮೈಕ್ರೋಸಾಫ್ಟ್‌ಗೆ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಒಂದಾನೊಂದು ಕಾಲದಲ್ಲಿ ಕಾಂಪಿಟೇಟರ್‌ಗಳಾಗಿದ್ದ ಸಂಸ್ಥೆಗಳೊಂದಿಗೆ ಚತುರ ಹೆಜ್ಜೆಗಳನ್ನು ಇಟ್ಟು ಪಾಲುದಾರಿಕೆಗಳನ್ನು ಬೆಳೆಸುವ ಮೂಲಕ ಹೊಸ ಚೈತನ್ಯ ತುಂಬಿದ ಸತ್ಯ ನಡೆಲ್ಲಾ ಹಾದಿಯಲ್ಲೇ ಕೃಷ್ಣ ಸಹ IBMಗೆ ಹೊಸ ದಿಕ್ಕು ತೋರಬಹುದು ಎಂಬ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಈ ಮಹಾನ್ ಪ್ರತಿಭಾವಂತರು ಹಾಗೂ high qualified ಸಂಪನ್ಮೂಲ ವ್ಯಕ್ತಿಗಳನ್ನು ನಮ್ಮಲ್ಲೇ ಉಳಿಸಿಕೊಂಡು ಹೋಗಲು ಬೇಕಾದ ವಾತಾವರಣವನ್ನು ಸೃಷ್ಟಿಸಲು ವಿಫಲವಾದ ಕಾರಣ ನಾವಿಲ್ಲಿ ಕುಳಿತು ಕೈ ಕೈ ಹೊಸಕಿಕೊಳ್ಳುವಂತಾಗಿದೆ. ದೇಶದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರಕ್ಕೆ ಹೊಸ ಹುರುಪು ನೀಡಲೆಂದು 1950ರ ದಶಕದಲ್ಲಿ ಪ್ರಾರಂಭಿಸಲಾದ highly esteemed ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ IITಗಳು ಮಹಾನ್ ಮೇಧಾವಿಗಳನ್ನೇನೋ ತಯಾರು ಮಾಡುತ್ತಿವೆ ಸರಿ. ಆದರೆ ಇಂಥ ಅಪ್ರತಿಮ ತಲೆಗಳನ್ನು ಬಳಕೆ ಮಾಡಿಕೊಳ್ಳಲು, ಅವುಗಳ potentialಅನ್ನು ಹೀರಿಕೊಳ್ಳಲು ಅತ್ಯಗತ್ಯವಾದ ವೈಜ್ಞಾನಿಕ & ತಾಂತ್ರಿಕ ವಾತಾವರಣವೇ ಇಲ್ಲದ ಕಾರಣ, ಪ್ರತಿಭಾ ಪಲಾಯನವೆಂಬ ದೊಡ್ಡ ಶಾಪಕ್ಕೆ ಭಾರತ ತುತ್ತಾಗುತ್ತಲೇ ಬಂದಿದೆ.

ಇತರ ದೇಶಗಳ ಅನಿವಾಸಿಗಳಿಂದಲೇ ತುಂಬಿಕೊಂಡಿರುವ ಅಮೆರಿಕದ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿ ಇಸ್ರೇಲಿಗಳು, ಚೀನೀಯರನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರಭಾವ ಹೊಂದಿರುವವರೇ ಭಾರತೀಯರು. ಅಲ್ಲಿ ಬೇಕಾದಷ್ಟು ದುಡ್ಡಿದೆ, ಸಾಗರದಷ್ಟು ಅವಕಾಶಗಳಿವೆ, ಮುಕ್ತ ಮಾರುಕಟ್ಟೆಯೆಂಬ ಕಾಂಪಿಟೇಟಿವ್‌ ವಾತಾವರಣವೂ ಇದೆ. ತಾಕತ್ತು, ಯೋಗ್ಯತೆ, ಅರ್ಹತೆಗಳಿದ್ದವು ಎಷ್ಟು ದೂರ ಬೇಕಾದರೂ ಕ್ರಮಿಸಬಹುದು, ಎಷ್ಟು ಎತ್ತರವನ್ನಾದರೂ ಏರಬಹುದು.

ಬಡತನ, ನಿರುದ್ಯೋಗ, ಜನಸಂಖ್ಯಾ ಸ್ಫೋಟಗಳಂಥ ಸಾಮಾಜಿಕ ಸಮಸ್ಯೆಗಳೆಂಬ ಟೈಂ ಬಾಂಬ್‌ಅನ್ನು ತನ್ನ ಒಡಲಲ್ಲಿ ಕಟ್ಟಿಕೊಂಡೇ ಭವಿಷ್ಯದತ್ತ ದಿಕ್ಸೂಚಿಯೇ ಇಲ್ಲದೇ ಸಾಗಿ ಬರುತ್ತಿರುವ ಭಾರತದಂಥ ಅಭಿವೃದ್ಧಿಶೀಲ ದೇಶವೊಂದಕ್ಕೆ, ಕಾಯಕಲ್ಪ ನೀಡುವುದು ಬಹಳ ದುಸ್ತರದ ಕೆಲಸವೇ ಸರಿ. ಭಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರಶಾಹಿ ಮೂಗುತೂರಿಸುವಿಕೆ, ಎಲ್ಲ ವ್ಯವಹಾರಗಳಲ್ಲೂ ಸರ್ಕಾರದ ಅಡ್ಡಗಾಲುಗಳು…. ಇಂಥ ಕ್ಯಾನ್ಸರ್‌ ಗಡ್ಡೆಗಳ ಪರಿಣಾಮ, “A drained brain is better than a wasted brain,” ಎಂಬ ನಿಟ್ಟುಸಿರು ಬಿಡುವ ಪರಿಸ್ಥಿತಿಯಲ್ಲಿ ಇದನ್ನು ಬರೆಯುತ್ತಿರುವ ನಾನು ಹಾಗೂ ಓದುತ್ತಿರುವ ನೀವೂ ಇರಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ.

ನಮ್ಮೆಲ್ಲಾ ಚೈತನ್ಯವನ್ನೂ ಇಂಥ ಸಾಮಾಜಿಕ ಸಮಸ್ಯೆಗಳನ್ನು ಸರಿಪಡಿಸಲೆಂದೇ ವಿನಿಯೋಗ ಮಾಡುತ್ತಿರುವ ವಾಸ್ತವದ ನಡವೆ, ಅಭಿವೃದ್ಧಿ ಹೊಂದಿದೆ ಸೂಪರ್‌ ರಿಚ್‌ ದೇಶಗಳ ಪ್ರಭಾವವನ್ನು ಜಗತ್ತಿನಾದ್ಯಂತ ಪಸರಿಸಲು ಬೆನ್ನೆಲುಬಾಗಿ ಇರುವ R&D ecosystem (ಸಂಶೋಧನೆ & ಅಭಿವೃದ್ಧಿ ವಾತಾವರಣ) ನಮ್ಮಲ್ಲಿ ರೂಪುಗೊಳ್ಳಲು ದಶಕಗಳೇ ಬೇಕಾಗಬಹುದು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 3 | #PRATIDHVANI
ಕರ್ನಾಟಕ

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 3 | #PRATIDHVANI

by ಪ್ರತಿಧ್ವನಿ
March 25, 2023
ಅದೃಷ್ಟದ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಫಿಕ್ಸ್‌ ..!
Top Story

ಅದೃಷ್ಟದ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಫಿಕ್ಸ್‌ ..!

by ಪ್ರತಿಧ್ವನಿ
March 25, 2023
ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ
Top Story

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

by ಮಂಜುನಾಥ ಬಿ
March 24, 2023
ಹಿಂದೂ-ಮುಸ್ಲಿಂ ಏಕತೆಗಾಗಿ ಹಾಗು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದ ಭಾರತದ ಸ್ವತಂತ್ರ ಚಿಂತಕರು ಹಾಗು ದಾರ್ಶನಿಕರು : Hindu-Muslim Unity And Against Brahminism
Top Story

ಹಿಂದೂ-ಮುಸ್ಲಿಂ ಏಕತೆಗಾಗಿ ಹಾಗು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದ ಭಾರತದ ಸ್ವತಂತ್ರ ಚಿಂತಕರು ಹಾಗು ದಾರ್ಶನಿಕರು : Hindu-Muslim Unity And Against Brahminism

by ಡಾ | ಜೆ.ಎಸ್ ಪಾಟೀಲ
March 21, 2023
ʼಕೆ ಜಿ ಎಫ್ʼ ,  ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ”..  KABZAA ‘Box Office’ Collection..!
ಸಿನಿಮಾ

ಬಾಕ್ಸ್‌ ಆಫೀಸ್‌ನಲ್ಲಿ ಕಬ್ಜ ಹವಾ.. ಚಿತ್ರತಂಡದಿಂದ ಸೆಲೆಬ್ರೇಷನ್‌..!

by ಪ್ರತಿಧ್ವನಿ
March 20, 2023
Next Post
JMI ನಲ್ಲಿ ವಿದ್ಯಾರ್ಥಿಗಳ ಹಕ್ಕು ಕಿತ್ತುಕೊಂಡ ವಿವಿ

JMI ನಲ್ಲಿ ವಿದ್ಯಾರ್ಥಿಗಳ ಹಕ್ಕು ಕಿತ್ತುಕೊಂಡ ವಿವಿ

ಸುಳ್ಳು ಕೇಸು ಹಾಕಿ ಬೇಸ್ತು ಬೀಳುತ್ತಿರುವ ಯುಪಿ ಪೊಲೀಸರು!

ಸುಳ್ಳು ಕೇಸು ಹಾಕಿ ಬೇಸ್ತು ಬೀಳುತ್ತಿರುವ ಯುಪಿ ಪೊಲೀಸರು!

17ನೇ ಗ್ರಾನ್ ಸ್ಲಾಂ ಮುಡಿಗೇರಿಸಿಕೊಂಡ ಜೋಕೋವಿಚ್‌‌

17ನೇ ಗ್ರಾನ್ ಸ್ಲಾಂ ಮುಡಿಗೇರಿಸಿಕೊಂಡ ಜೋಕೋವಿಚ್‌‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist