ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ದಿನಕ್ಕೊಂದು ಸುಳಿವು ದೊರೆಯುತ್ತಿದೆ. ಇತ್ತ ಕಾಂಗ್ರೆಸ್, ಬಿಜೆಪಿಗೂ ಈ ಅಕ್ರಮಕ್ಕೂ ನೇತ ಸಂಬಂದ ಇದೆ ಎಂದು ಆರೋಪಿಸಿದರೆ ಅತ್ತ ಬಿಜೆಪಿ ನಾಯಕರು ನಿಮ್ಮ ಭಷ್ಟಾಚಾರದ ಬಗ್ಗೆ ಗೊತ್ತಿದೆ ಎಂದು ಕೆಸರೆರೆಚಾಟ ನಡೆಸುತ್ತಿದ್ದಾರೆ.
ಇವತ್ತು ಗುರುವಾರ ಪಿಎಸ್ಐ ಅಕ್ರಮದ ತನಿಖೆ ಬಗ್ಗೆ ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ್, ಪಿಎಸ್ಐ ವಿಚಾರವನ್ನು ಸರ್ಕಾರ ಕೂಲಂಕುಷವಾಗಿ ತನಿಖೆ ನಡೆಸುತ್ತಿದೆ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಭಾಗಿಯಾಗಿರುವ ವ್ಯಕ್ತಿಗಳನ್ನು ಬಯಲಿಗೆಳೆಯುತ್ತೇವೆ, 10 ವರ್ಷಗಳ ಹಿಂದೆಯೂ ನಡೆದಿರುವ ಪ್ರಕರಣಗಳ ತನಿಖೆ ನಡೆಸುವಂತೆ ನಮ್ಮ ಸಿಎಂಗೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.