ನವದೆಹಲಿ: ಮಾ.25: ಸಂಸದ ಸ್ಥಾನ ಅನರ್ಹಗೊಂಡ ಬಳಿಕ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸುವಿಕೆಯಿಂದ ನಾನು ವಿಚಲಿತನಾಗಿಲ್ಲ ಎಂದು ಹೇಳಿದ ಗಾಂಧಿ, ‘ಪ್ರಧಾನಿ ಮೋದಿ ನನ್ನ ಮುಂದಿನ ಭಾಷಣಕ್ಕೆ ಹೆದರಿದ್ದರಿಂದ ನನ್ನನ್ನು ಅನರ್ಹಗೊಳಿಸಲಾಗಿದೆ. ನಾನು ಅವರ ಕಣ್ಣುಗಳಲ್ಲಿ ಭಯವನ್ನು ನೋಡಿದ್ದೇನೆ. ಹಾಗಾಗಿಯೇ ನಾನು ಸಂಸತ್ತಿನಲ್ಲಿ ಮಾತನಾಡುವುದನ್ನು ಅವರು ಬಯಸುವುದಿಲ್ಲ” ಹೇಳಿದರು.
![](https://pratidhvani.com/wp-content/uploads/2023/03/vfn34e4g_rahul-gandhi_625x300_23_March_23-1-edited.jpg)
‘ಸತ್ಯಕ್ಕಾಗಿ ಹೋರಾಡುವುದು ಮತ್ತು ಈ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ರಕ್ಷಿಸುವುದು ನನ್ನ ಒಂದೇ ಗುರಿಯಾಗಿದೆ. ನನ್ನನ್ನು ಜೀವನಪರ್ಯಂತ ಅನರ್ಹಗೊಳಿಸಿ, ಜೀವಾವಧಿಯವರೆಗೆ ಜೈಲಿನಲ್ಲಿರಿಸಿದರೂ, ನಾನು ಆ ಹಾದಿಯಲ್ಲೇ ಮುಂದುವರಿಯುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದರು. ನಾನು ಚಿಂತೆಯಲ್ಲಿರುವಂತೆ ಕಾಣುತ್ತಿದ್ದೇನೆಯೇ? ಇಲ್ಲ, ನಾನು ಬಹಳ ಉತ್ಸುಕನಾಗಿದ್ದೇನೆ,” ಎಂದು ರಾಹುಲ್ ಹೇಳಿದರು.