ಲೋಕಸಭಾ(Loka Saba) ಚುನಾವಣೆಯಲ್ಲಿ ಸಿಎಂ(CM), ಡಿಸಿಎಂ(DCM) ಕೂಡ ಸ್ಪರ್ಧೆ ಮಾಡಲಿ ಎಂಬ ಸಚಿವ ಡಾ.ಎಚ್.ಸಿ. ಮಹದೇವಪ್ಪ(HC Mahadevappa) ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ(Siddaramaiaha) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
![](https://pratidhvani.com/wp-content/uploads/2024/02/kannadaprabha_import_2024_2_7_original_cmsiddaramaiah1-1-jpg.webp)
ಮಂಡ್ಯ(Mandya) ಜಿಲ್ಲೆಯ ಮಳವಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ಯಾರಿಗೆ ಒಲವು ಇರುತ್ತೆ ಅವರು ಅಭ್ಯರ್ಥಿ(Candidate) ಆಗ್ತಾರೆ, ಸ್ಥಳೀಯರು ಯಾರು ಹೆಸರು ಹೇಳ್ತಾರೆ ಅವರಿಗೆ ಕೊಡ್ತೀವಿ. ಮಹದೇವಪ್ಪ ಅವರ ಹೆಸರು ಹೇಳಿದ್ರೆ ಮಹದೇವಪ್ಪ ಕೊಡ್ತೇವೆ, ಇಲ್ಲ ಬೇರೆಯವರ ಹೆಸರು ಹೇಳಿದ್ರೆ ಬೇರೆಯವರಿಗೆ ಕೊಡ್ತೀವಿ ಎಂದು ಸಿಎಂ, ಡಿಸಿಎಂ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು.
![](https://pratidhvani.com/wp-content/uploads/2024/02/3-6-1024x606.png)
ಲೋಕಸಭಾ(Loka Saba) ಚುನಾವಣೆಗೆ ತಯಾರಿ ಮಾಡುತ್ತಿದ್ದೇವೆ, ಈ ಬಾರಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಬಿಜೆಪಿ(BJP) ಅವರು ಬರಿ ಬುರುಡೆ ಹೊಡೆಯುತ್ತಾ ಇದ್ದಾರೆ, ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮೈಸೂರಿನಿಂದ ಕಾಂಗ್ರೆಸ್(Congress)ನಿಂದ ಡಾಲಿ ಧನಂಜಯ್(Daali Dhananjaya) ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ನಮ್ಮ ಪಕ್ಷದಲ್ಲಿ ಅದರ ಬಗ್ಗೆ ಚರ್ಚೆ ಆಗಿಲ್ಲ ಎಂದು ತಿಳಿಸಿದರು.
#Siddaramaiah #Congress #CMofKarnataka #Lokasaba #DaaliDhananjaya #Mandya