ಸಾಕಷ್ಟು ಹೈ ಡ್ರಾಮಾ (High drama) ನಂತರ ಕೋಲಾರ (Kolar) ಕಾಂಗ್ರೆಸ್ ಅಭ್ಯರ್ಥಿ (congress candidate) ಫೈನಲ್ ಆದ್ರೂ ಕೂಡ ಇನ್ನು ಕಾಂಗ್ರೆಸ್ ಗೆ ಕೋಲಾರ ಟೆನ್ಶನ್(Tension) ಕಡಿಮೆಯಾಗಿಲ್ಲ. ಕೋಲಾರದ ಉಸ್ತುವಾರಿ ಸಚಿವರಾಗಿರುವ ಬೈರತಿ ಸುರೇಶ್ಗೆ (bhairathi suresh) ಮುಗಿಯದ ಮಂಡೆಬಿಸಿ ಮುನಿಯಪ್ಪ ನಡೆಯಿಂದಾಗಿ ಬೈರತಿ ಸುರೇಶ್ ಕಂಗಾಲಾಗಿದ್ದಾರೆ. ಹೀಗಾಗಿ ಮೇಲಿಂದ ಮೇಲೆ ಸಚಿವ ಭೈರತಿ ಸುರೇಶ್ ಸಿಎಂ ಬೆನ್ನು ಬಿದ್ದಿದ್ದಾರೆ.
![](https://pratidhvani.com/wp-content/uploads/2024/04/IMG_6501.jpeg)
ಕೋಲಾರ(Kolar) ಕ್ಷೇತ್ರ ಗೆಲ್ಲಿಸಿಕೊಳ್ಳುವಲ್ಲಿ ಮುನಿಯಪ್ಪನವರ ಪಾತ್ರ ದೊಡ್ಡದಿದೆ. ಆದ್ರೆ ಮುನಿಯಪ್ಪ (muniyappa) ಇದೀಗ ನಯವಾಗೆ ಉಲ್ಟಾ ಹೊಡೆದಿದ್ದಾರೆ. ತಾವು ಕೇಳಿದಂತೆ ತಮ್ಮ ಅಳಿಯ ಚಿಕ್ಕ ಪೆದ್ದಣ್ಣಗೆ (chikka peddanna) ಟಿಕೆಟ್ ನೀಡಲಿಲ್ಲ ಎಂಬ ಅಸಮಾಧಾವನ್ನ ಬಹಿರಂಗವಾಗಿ ಹೇಳದ ಮುನಿಯಪ್ಪ, ಆ ಬದಲಿಗೆ , ನಾನು ಕೋಲಾರ ಉಸ್ತುವಾರಿ ಅಲ್ಲ , ಅದೇನಿದ್ದರೂ ನಿಮ್ಮ ಜವಾಬ್ದಾರಿ. ನನಗೆ ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರದ ಜವಾಬ್ದಾರಿ ನೀಡಿರೋದ್ರಿಂದ ನಾನು ಇಲ್ಲಿ ಗಮನ ಹರಿಸಬೇಕಿದೆ ಅಂತಾ ಜವಾಬ್ದಾರಿಯಿಂದ ದೂರ ಸರಿದಿದ್ದಾರೆ.
![](https://pratidhvani.com/wp-content/uploads/2024/04/IMG_6502.jpeg)
ತಾನು ಗ್ರಾಮಾಂತರ ಜಿಲ್ಲೆಯಲ್ಲೇ ಹೆಚ್ಚು ಸಮಯ ಕಳೆಯಬೇಕಾಗುತ್ತೆ ಅಂತ ಯೂಟರ್ನ್ಹೊಡೆದಿರುವ ಮುನಿಯಪ್ಪ,ಯಾರು ಟಿಕೆಟ್ ಕೊಟ್ಟಿದ್ದಾರೋ ಅವರನ್ನೇ ಕೇಳಿ ನನ್ನ ಬಳಿ ಬರಬೇಡಿ ಎಂದು ಸಿಎಂ, ಡಿಸಿಎಂ ಕಡೆ ಬೊಟ್ಟು ಮಾಡಿದ್ದಾರಂತೆ.ಹೀಗಾಗಿ ಉಸ್ತುವಾರಿಗಳೇ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರಬೇಕೆಂದು ‘ಹೈ’ ಸೂಚನೆ ಇರೋದ್ರಿಂದ ಭೈರತಿ ಸುರೇಶ್ ಗೆ ಟೆನ್ಶನ್ ಶುರುವಾಗಿದೆ .