
ತುಮಕೂರು: ತುಮಕೂರಿನಲ್ಲಿ ಹಾಲಿ-ಮಾಜಿ ಶಾಸಕರ ಟಾಕ್ ಫೈಟ್ ತಾರಕಕ್ಕೇರಿದೆ. ಗ್ರಾಮಾಂತರ ಶಾಸಕ ಸುರೇಶ್ ಗೌಡ ವಿರುದ್ದ ಮಾಜಿ ಶಾಸಕ ಗೌರಿಶಂಕರ್ ವಾಗ್ದಾಳಿ ಮಾಡಿದ್ದಾರೆ. ತುಮಕೂರಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ಶಾಸಕ ಸುರೇಶ್ ಗೌಡ, ಎಚ್ಚರಿಕೆ ಕೊಟ್ಟ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಶಾಸಕ ಸುರೇಶ್ ಗೌಡಗೆ ಎಚ್ಚರಿಕೆ ಕೊಟ್ಟ ಗೌರಿಶಂಕರ್, ಸಚಿವ ಕೆ.ಎನ್ ರಾಜಣ್ಣರ ಬಗ್ಗೆ ಮಾತನಾಡುವ ಮೂಲಕ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಬಿಂಬಿಸಲು ಹೊರಟಿದ್ದಾರೆ.. ಪರಮೇಶ್ವರ್ ಪರವಾಗಿ ನಾನು ಮಾತನಾಡುತ್ತಿದ್ದೇನೆ ಎಂದಿದ್ದಾರೆ.. ರಾಜಣ್ಣ ಅವರ ಆಶೀರ್ವಾದ ಇಲ್ಲದಿದ್ದರೆ, ಚುನಾವಣೆಯಲ್ಲಿ ಗೆದ್ದು ನೀನು ಶಾಸಕನಾಗಲು ಆಗುತ್ತಿರಲಿಲ್ಲ ಎಂದಿದ್ದಾರೆ.
ಶಾಸಕ ಸುರೇಶ್ ಗೌಡರಿಗೆ ಯಾಕೆ ಇಷ್ಟು ಬಂಡತನ..? ಎಂದಿರುವ ಗೌರಿಶಂಕರ್, ನನ್ನ ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಗುಂಡಿ ಬಿದ್ದಿಲ್ಲ ಎಂದಿದ್ದಾರೆ.. ಹಿರೇಹಳ್ಳಿಯಿಂದ ಹರಳೂರು ರಸ್ತೆ ಸಂಪೂರ್ಣ ಹದಗೆಟ್ಟಿದೆ.. ಎಷ್ಟು ಕಮಿಷನ್ ಪಡೆದಿದ್ದೆ..? ಎಂದು ಪ್ರಶ್ನಿಸಿದ್ದಾರೆ. ಫಿಕ್ಸಿಂಗ್ ಪಾಲಿಟಿಕ್ಸ್ನಲ್ಲಿ ನಂ 1 ಸುರೇಶ್ ಗೌಡ ಎಂದಿರುವ ಗೌರಿಶಂಕರ್, ಅಧಿಕಾರ ಸಿಗುತ್ತೆ ಅಂದ್ರೆ ಯಾರ ಮನೆಗೆ ಬೇಕಾದ್ರು ಹೋಗ್ತಾನೆ ಎಂದಿದ್ದಾರೆ.
ನಾನು ನನ್ನದು ಎಂದವರು ಮಣ್ಣಾಗಿ ಹೋಗಿದ್ದಾರೆ.. ನಾನು ಚುನಾವಣೆ ಎದುರಿಸಿದ್ದೇನೆ, ಶಾಸಕನಾಗಿದ್ದೇನೆ.. ನಾನು ಹುಟ್ಟಿದಾಗಲೇ ನಮ್ಮಪ್ಪ ನನ್ನ ಹಿಂದೂ ಎಂದು ಬರೆಸಿದ್ದಾರೆ. ನಿನಗೆ ಮುಸ್ಲಿಂ, ಕ್ರಿಶ್ಚಿಯನ್ ಹೆಸರು ಹೇಳದಿದ್ದರೆ ನಿದ್ದೆ ಬರಲ್ಲ. ಟೀಕೆ ಟಿಪ್ಪಣಿಗಳು ಸಾಯ್ತವೆ, ನಾವು ಮಾಡಿದ ಕೆಲಸಗಳು ಅಜರಾಮರವಾಗಿ ಉಳಿಸುತ್ತವೆ ಎಂದು ನಮ್ಮ ಕೆಪಿಸಿಸಿ ಅಧ್ಯಕ್ಷ ರು ಹೇಳ್ತಾ ಇರ್ತಾರೆ.. ನಮ್ಮ ಪರಮೇಶ್ವರ್ ಸಾಹೇಬ್ರು ಸಜ್ಜನ ರಾಜಕಾರಣಿ, ಅವರ ಆದರ್ಶಗಳನ್ನ ನೀನು ಕಳಿತುಕೊ ಎಂದಿದ್ದಾರೆ.

ಇತ್ತೀಚೆಗೆ ಗುಬ್ಬಿ ಶಾಸಕರ ಮೇಲೆ ಲವ್ ಆಗಿದೆ ಎಂದಿರುವ ಗೌರಿಶಂಕರ್, ಸೀನಣ್ಣ ಅವರ ಪರವಾಗಿ ಮಾತನಾಡಲು ಗುತ್ತಿಗೆ ನೀಡಿದ್ದಾರಾ..? ಅವರು ತುಮಕೂರು ಜಿಲ್ಲೆಯ ಟೈಗರ್, ಅವರಿಗೆ ನೀನು ಹೇಳಿಕೊಡಬೇಕಾದ ಅಗತ್ಯವಿಲ್ಲ.. ಜ್ಞಾನದ ಅರ್ಥವೇ ಗೊತ್ತಿಲ್ಲದ ಅಜ್ಞಾನಿ ನೀನು.. ಬಾಬಾ ಸಾಹೇಬರ ಸಂವಿಧಾನವನ್ನ ನಾನು ಅರಿತಿದ್ದಿದ್ದೇನೆ ಎಂದಿದ್ದಾರೆ.
ಸುರೇಶ್ ಗೌಡನ ಮಾನನಷ್ಟ ಮೊಕದ್ದಮೆಗೆ ನಾನು ಪಂಥಾಹ್ವಾನ ನೀಡುತ್ತೇನೆ ಎಂದಿರುವ ಗೌರಿಶಂಕರ್, ಗೃಹ ಖಾತೆಯಲ್ಲಿ ಸದ್ಯಕ್ಕೆ ಯಾರೂ ಡ್ರೈವ್ ಮಾಡುವ ಅಗತ್ಯವಿಲ್ಲ.. ನಿಮ್ಮ ಕೇಂದ್ರ ಸಚಿವರೇ ಅವರ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿದ್ದಾರೆ.. ರಾತ್ರೋ ರಾತ್ರಿ ಪರಮೇಶ್ವರ್ ಸಾಹೇಬ್ರು ಮನೆಗೆ ಹೋಗಿ ಕಾಲಿಗೆ ಬಿದ್ದಿದ್ದೀರಿ.. ನನಗೆ ನಿಮ್ಮ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ನೀವು ನಮ್ಮ ಕ್ಷೇತ್ರದ ಜನರಿಗೆ ನೀಡಿರುವ ಆಶ್ವಾಸನೆ ಕೊಟ್ಟಿರುವುದನ್ನ ಈಡೇರಿಸಿ ಎಂದು ಕೇಳುತ್ತಿದ್ದೇನೆ ಎಂದಿದ್ದಾರೆ.

ನನ್ನ ಮೇಲೆ ಕೇಸ್ ಹಾಕಿದ್ದೇನೆ ಎಂದು ಹೇಳಿದ್ದಾನೆ, ಕೋರ್ಟ್ನಲ್ಲಿದ್ದಾಗ ಮಾತನಾಡಬಾರದು ಎಂಬ ಅರಿವಿಲ್ಲದ ಅಜ್ಞಾನಿ ಎಂದಿದ್ದಾರೆ. ಸ್ನೇಹಿತ ಎಂದು ಹೇಳಿದವನು, ಡೆಲ್ಲಿಗೆ ಹೋಗಿ ಬಂದ್ಮೇಲೆ ಇಂಜೆಕ್ಷನ್ ಕೊಟ್ಟವರು ಯಾರು..? ಪಟ್ಟಿ ಮಾಡಿಕೊಂಡು ಬಂದು ಹೇಳಿಕೆ ಕೊಟ್ಟಿದ್ದಿಯಲ್ಲ ಯಾರು ನಿನಗೆ ಹೇಳಿಕೊಟ್ಟಿದ್ದರು..? ಸುರೇಶ್ ಗೌಡರೇ ನಿಮ್ಮ ತಲೆಯಲ್ಲಿ ಬಿಳಿಕೂದಲು ಇವೆ.. ನೀವು ಅವಮಾನ ಮಾಡಿದ್ದು ಹಾಲಪ್ಪನಿಗೆ ಅಲ್ಲಾ ಕುಂಚಿಟಿಗ ಸಮಾಜದವರಿಗೆ ನಿಂದಿಸುತ್ತಿದ್ದಿಯಾ..? ಡಾ ಜಿ ಪರಮೇಶ್ವರ್ಗೆ ನಿಂದಿಸಿದರೆ ಅದು ದಲಿತ ಸಮಾಜಕ್ಕೆ ನಿಂದಿಸಿದಂತೆ.. ರಾಜಣ್ಣ ಬಗ್ಗೆ ಮಾತನಾಡಿ ನಾಯಕ ಸಮಾಜಕ್ಕೆ ಅಗೌರವ ತೋರಿದ್ದಿಯಾ..
ನಮ್ಮಪ್ಪ ಕಾನಸ್ಟೇಬಲ್ ಆಗಿದ್ದವರು ಮಿನಿಸ್ಟರ್ ಆದ್ರು. ನೀಮ್ಮಪ್ಪ ಏನಾಗಿದ್ದಾರೆ..? ಆದ್ರೂ ನಿಮ್ಮಪ್ಪನ ಬಗ್ಗೆ ಗೌರವ ಇದೆ.. ಆ ಬಗ್ಗೆ ಮಾತನಾಡಲ್ಲ.. ನನ್ನ ತಂದೆ ಬಗ್ಗೆ ಮಾತನಾಡಿದ, ನಿನ್ನ ಮೇಲೂ ನಾನು ಮಾನನಷ್ಟ ಮೊಕದ್ದಮೆ ಹೂಡಬಹುದು.. ನನ್ನ ಮರ್ಡರ್ ಮಾಡಿಸ್ತಿಯಾ ಸುರೇಶ್ ಗೌಡ..? ನಾನು ಗೃಹ ಸಚಿವರಿಗೆ ಭೇಟಿ ಮಾಡಿ ರಕ್ಷಣೆ ಕೋರುತ್ತೇನೆ.. ನನಗೆ ಏನಾದ್ರು ಆದ್ರೆ ಅದಕ್ಕೆ ಸುರೇಶ್ ಗೌಡರೇ ಕಾರಣ..
