ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಜೈಲು ಪಾಲಾಗಿರುವ ನಟ ದರ್ಶನ್ (Darshan), ಪರಪ್ಪನ ಅಗ್ರಹಾರ ಜೈಲುಪಾಲಾಗಿ ಬರೋಬ್ಬರಿ 2 ತಿಂಗಳೇ ಕಳೆದು ಹೋಗಿದೆ. ದರ್ಶನ್ ರ ಮುಮದಿನ ಸಿನಿಮಾ ಶೂಟಿಂಗ್ ಕೂಡ ಅರ್ಧಕ್ಕೆ ನಿಂತಿದೆ. ಸಾಕಷ್ಟು ಕಲಾವಿದರು ದರ್ಶನ್ ರನ್ನ ಜೈಲಿಗೆ ಹೋಗಿ ಬೇಟಿ ಮಾಡಿ ಬಂದಿದ್ದಾರೆ. ಆ ಪೈಕಿ ರಕ್ಷಿತ ಮತ್ತು ಪ್ರೇಮ್ ಕೂಡ ದರ್ಶನ್ ರನ್ನ ಭೇಟಿ ಮಾಡಿ ಬಂದಿದ್ದರು.
ಇದೀಗ ದರ್ಶನ್ ಕಾನೂನಿನ ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ (Jogi prem) ಸುಧೀರ್ಘವಾದ ಪೋಸ್ಟ್ ವೊಂದನ್ನ ಹಾಕಿದ್ದಾರೆ. ಈ ಪೋಸ್ಟ್ ಮೂಲಕ ತಮ್ಮ ಮತ್ತು ನಟ ದರ್ಶನ್ ಕಾಂಬಿನೇಶನ್ ನ ಸೂಪರ್ ಹಿಟ್ ಚಿತ್ರ ಕರಿಯಾ (kariya) ಸಿನಿಮಾವನ್ನ ರೀ-ರಿಲೀಸ್ ಮಾಡುವ ಸುದ್ದಿಯನ್ನ ತಿಳಿಸಿದ್ದಾರೆ.
ಈ ಬಗೆ ಬರೆದುಕೊಂಡಿರುವ ಪ್ರೇಮ್, ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಒಂದು ಮೈಲಿಗಲ್ಲು. ಈ ಸಿನಿಮಾವನ್ನ ಇದೇ ಆಗಸ್ಟ್ 30 ರಂದು ಚಿತ್ರಮಂದಿರಗಳಲ್ಲಿ ಮತ್ತೆ ತೆರೆಗೆ ತರಲಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಪ್ರೀತಿಯಿಂದ ಬಂದು ಸಿನಿಮಾ ನೋಡಿ, ಇತರರಿಗೆ ನೋವುಂಟಾಗುವ ಹಾಗೆ ಯಾವುದೇ ಪೋಸ್ಟ್ ಹಾಗೂ ಕಮೆಂಟ್ಗಳನ್ನ ಹಾಕೋದು ಬೇಡ, ಬದಲಿಗೆ ದರ್ಶನ್ರ ಬಿಡುಗಡೆಗೆ ದೇವರಲ್ಲಿ ಪ್ರಾರ್ಥಿಸೋಣ ಎಂದಿದ್ದಾರೆ.