ಇತ್ತೀಚಿನ ದಿನಗಳಲ್ಲಿ ನಾದಬ್ರಹ್ಮ ಹಂಸಲೇಖ ತಮ್ಮ ವೇದಿಕೆಯ ಭಾಷಣಗಳಿಂದ ಒಂದಲ್ಲಾ ಒಂದು ವಿವಾದಗಳಿಗೆ ಕಾರಣವಾಗುತ್ತಿದ್ದಾರೆ. ಇದೀಗ ಅವರ ಅಂಥದ್ದೇ ಮತ್ತೊಂದು ಹೇಳಿಕೆ ತೀವ್ರ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ಹಂಸಲೇಖರನ್ನು ಬ್ರಾಹ್ಮಣ ವಿರೋಧಿ ಎಂದು ಹಲವರು ಹರಿಹಾಯ್ದಿದ್ದಾರೆ.

ಹಂಸಲೇಖ ಆರ್ಎಸ್ಎಸ್ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ಸಂಘಟನೆಯ ಚಿಂತನ ಗಂಗಾ ಎಂಬ ಪುಸ್ತಕದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಪುಸ್ತಕ ಆರ್ಎಸ್ಎಸ್ ನವರ ಸಂವಿಧಾನವಿದ್ದಂತೆ. ಇದನ್ನ ಬ್ರಹ್ಮಣರು ದೇವರ ಮನೆಯಲ್ಲಿ ಭಗವದ್ಗೀತೆಯ ಪಕ್ಕದಲ್ಲಿ ಇಟ್ಕೊಂಡು ಪೂಜೆ ಮಾಡ್ತಾರೆ. ದೇಶದ ಪ್ರಜಾಪ್ರಭುತ್ವದಲ್ಲಿ ಆಗುತ್ತಿರುವ ಬೆಳವಣಿಗೆಹಳ್ಳನ್ನ ವಿರೋಧಿಸುವ ಬಗ್ಗೆ ವಿ ಪುಸ್ತಕದಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ, ಕನ್ನಡದ ಹೆಸರಲ್ಲಿ ಬ್ರಾಹ್ಮಣರ ವಿರುದ್ಧ ದ್ವೇಷ ಸಾರುವ ಪಕ್ಷ ನಿಮ್ಮದು,ಕನ್ನಡದ ಬಗ್ಗೆ ಮಾತಾಡ್ತಿವಿ ಅಂತ ಜನರನ್ನ ಮಂಗ ಮಾಡಿ, ದೇವರ ಪೂಜೆ ಮಾಡೋ ಪೂಜಾರಿಗಳ ಮೇಲೆ ವಿಷ ಬಿತ್ತುವ ಕೆಲಸ ಮಾಡ್ತಿದ್ದಾರೆ.
ಇವರಿಗೆ ಕನ್ನಡದ ಮೇಲೆ ಪ್ರೀತಿ ಅಲ್ಲ, ಬ್ರಾಹ್ಮಣರ ಮೇಲೆ ದ್ವೇಷ ಅಷ್ಟೆ! ಹುಚ್ಚಾಸ್ಪತ್ರೆಲಿ ಇರಬೇಕಾದ ಹಂಸಲೇಖ ಎಂದು ಅವರ ಈ ಹೇಳಿಕೆಯ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ.





