ರಾಜ್ಯದಲ್ಲಿ ಮುಂಗಾರು ( Manson Rain ) ಮಳೆ ತಡವಾಗಿ ಆರಂಭ ಆಗಿತ್ತು. ಅಂದರೆ ಮೇ ( May ) ಕೊನೆಯಲ್ಲಿ ಬರಬೇಕಿದ್ದ ಮಳೆರಾಯ ಜೂನ್ ( June ) ಅಂತ್ಯವಾದರೂ ಕರ್ನಾಟಕದ ( Karnataka ) ಬಹುತೇಕ ಭಾಗಗಳಿಗೆ ಕರುಣೆ ತೋರಿಸಲಿಲ್ಲ. ಹೀಗಾಗಿ ರಾಜ್ಯದ ( State ) ಬಹುತೇಕ ಡ್ಯಾಂಗಳಲ್ಲಿ ( Dam ) ನೀರಿನ (Water ) ಸಂಗ್ರಹ ಖಾಲಿ ಆಗಿತ್ತು. ಕುಡಿಯವ ನೀರು ಪೂರೈಸಲು ಸಾಧ್ಯವಾಗದ ಮಟ್ಟಕ್ಕೆ ಜಲಾಶಯಗಳು ತಲುಪಿದ್ವು. ಬೆಳಗಾವಿ ( belagavi ) ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗದೆ ಟ್ಯಾಂಕರ್ ( Tanker ) ಮೂಲಕ ನೀರು ಪೂರೈಕೆ ಮಾಡುವ ಕೆಲಸಕ್ಕೆ ಕೈ ಹಾಕಲಾಗಿತ್ತು. ಇದೀಗ ಕಳೆದ 20 ದಿನಗಳಿಂದ ಮಳೆ ಆಗುತ್ತಿದ್ದು, ಬಹುತೇಕ ಎಲ್ಲಾ ಜಲಾಶಯಗಳು ತುಂಬುವ ಹಂತಕ್ಕೆ ಬಂದು ತಲುಪಿವೆ. ಇದು ಆಶ್ಚರ್ಯದ ಜೊತೆಗೆ ಸರ್ಕಾರದ ಜಾಣ ಕುರುಡುತನ ಪ್ರಶ್ನಿಸುವಂತೆ ಮಾಡಿದೆ.

ರಾಜ್ಯದ ಡ್ಯಾಂಗಳ ಸದ್ಯದ ಪರಿಸ್ಥಿತಿ ಹೇಗಿದೆ..?
ಕೆಆರ್ಎಸ್ ಡ್ಯಾಂ ಗರಿಷ್ಟ ಸಂಗ್ರಹ ಸಾಮರ್ಥ್ಯ 49.45 TMC ಇದ್ದು ಸದ್ಯ 20 TMC ಆಗಿದೆ. ಲಿಂಗನಮಕ್ಕಿ ಗರಿಷ್ಟ ಸಂಗ್ರಹ ಸಾಮರ್ಥ್ಯ 151.75 TMC ಆಗಿದ್ದು, ಸದ್ಯ 47 TMC ಅಷ್ಟಿದೆ. ಸೂಪಾ ಗರಿಷ್ಟ ಸಂಗ್ರಹ ಸಾಮರ್ಥ್ಯ 145.33 TMC ಆಗಿದ್ದು, ಸದ್ಯದ ಸಾಮರ್ಥ್ಯ 57.15 TMC ಆಗಿದೆ. ಆಲಮಟ್ಟಿ ಗರಿಷ್ಟ ಸಂಗ್ರಹ ಸಾಮರ್ಥ್ಯ 123.08 TMC ಆಗಿದೆ. ಸದ್ಯದ ಮಟ್ಟ 63 TMC ಆಗಿದೆ. ತುಂಗಭದ್ರಾ ಗರಿಷ್ಟ ಸಂಗ್ರಹ ಸಾಮರ್ಥ್ಯ 105.79 TMC ಆಗಿದ್ದು, ಇಂದಿನ ನೀರಿನ ಸಂಗ್ರಹ 26 TMC ಅಷ್ಟಿದೆ. ಭದ್ರಾ ಗರಿಷ್ಟ ಸಂಗ್ರಹ ಸಾಮರ್ಥ್ಯ 71.54 TMC, ಸದ್ಯದ ಸ್ಥಿತಿ 33.83 TMC, ಹೇಮಾವತಿ ಗರಿಷ್ಟ 37.10 TMC ಆಗಿದ್ದು, 22 TMC ನೀರು ಸಂಗ್ರಹವಾಗಿದೆ. ನಾರಾಯಣಪುರ ಡ್ಯಾಂ 33.31 TMC ಸಂಗ್ರಹ ಸಾಮರ್ಥ್ಯವಿದ್ದು, 16 TMC ನೀರು ಸಂಗ್ರಹವಾಗಿದೆ. ಕಬಿನಿ ಗರಿಷ್ಟ ಸಂಗ್ರಹ ಸಾಮರ್ಥ್ಯ 19.52 TMC ಇದ್ದು, 17 TMC ನೀರು ಸಂಗ್ರಹವಾಗಿದೆ.
ಜಲಾಶಯಗಳ ನೀರಿನ ಮಟ್ಟ ಇಷ್ಟು ಬೇಗ ಭರ್ತಿ ಹೇಗೆ..?
ರಾಜ್ಯದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಜಲಾಶಯಗಳು ಇವೆ. ಹೆಸರಿಗೆ ಮಾತ್ರ ಹೇಳಿಕೊಳ್ಳುವುದಕ್ಕೆ ದೊಡ್ಡ ಜಲಾಶಯಗಳು. ಆದರೆ ಪ್ರತಿಯೊಂದು ಜಲಾಶಯಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆ ಆಗಿದೆ ಎನ್ನುತ್ತಾರೆ ನೀರಾವರಿ ತಜ್ಞರು. ಉದಾಹರಣೆಗೆ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಅಣೆಕಟ್ಟು ನೀರು ಸಂಗ್ರಹದ ಸಾಮರ್ಥ್ಯ 49.45 ಟಿಎಂಸಿ ನೀರು. 121 ಎತ್ತರದ ಈ ಅಣೆಕಟ್ಟೆಯಲ್ಲಿ ಇನ್ನೂ ಏಳೆಂಟು ಟಿಎಂಸಿ ನೀರು ಇದ್ದಾಗಲೇ ಬಳಕೆಗೆ ಯೋಗ್ಯವಲ್ಲ ಅನ್ನೋ ಚರ್ಚೆಗಳು ಶುರುವಾಗುತ್ತದೆ. ಆರೇಳು ಅಡಿಯಷ್ಟು ಹೂಳು ತುಂಬಿಕೊಂಡಿದ್ದು, ನೀರು ತಿಳಿಯಾಗುವುದಿಲ್ಲ ಅನ್ನೋ ಮಾತಿದೆ.

ಈ ಸುದ್ದಿಯನ್ನೂ ಓದಿದ್ದೀರಾ ? Viral Video ; ರಸ್ತೆ ದಾಟಿದ ಜಿಂಕೆಗಳ ಹಿಂಡು, ಅಚ್ಚರಿಗೊಂಡ ನೆಟ್ಟಿಗರು
ಬೇಗನೆ ಭರ್ತಿಯಾಗುವ ಡ್ಯಾಂಗಳು, ಸಂಗ್ರಹ ಸಾಮರ್ಥ್ಯ ಕುಸಿತ..!
ನೀರು ಸಂಗ್ರಹದ ಸಾಮರ್ಥ್ಯ ಹೆಚ್ಚಾಗಿದ್ದರೂ ಬಹುತೇಕ ಎಲ್ಲಾ ಡ್ಯಾಂಗಳಲ್ಲೂ ಹೂಳು ತುಂಬಿಕೊಂಡಿರುವ ಪರಿಣಾಮ, ನೀರಿನ ಸಂಗ್ರಹ ಸಾಮರ್ಥ್ಯ ಕುಸಿದೆ. ಹೇಳಿಕೊಳ್ಳುವುದಕ್ಕೆ ನೂರಾರು ಟಿಎಂಸಿ ಸಾಮರ್ಥ್ಯ ಇದ್ದರೂ ರೈತರು ಹಾಗು ನಗರ ಪ್ರದೇಶಗಳ ಕುಡಿಯುವ ನೀರಿಗೆ ಬಳಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಸರ್ಕಾರಕ್ಕೆ ಹೂಳು ತೆಗೆಯುವುದರಿಂದ ಯಾವುದೇ ಲಾಭ ಆಗಲ್ಲ ಅನ್ನೋ ಕಾರಣಕ್ಕೆ ರೈತರ ಬಗ್ಗೆ ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರ ಆದರೂ ಈ ಬಗ್ಗೆ ಗಮನ ವಹಿಸಿದ್ರೆ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಪ್ಪಿಸಬಹುದು. ಆದರೆ ಸರ್ಕಾರ ಈಗಾಗಲೇ ಉಚಿತ ಯೋಜನೆಗಳಿಂದ ಅಭಿವೃದ್ಧಿಗೆ ಕಾಸಿಲ್ಲ ಎಂದಿರುವುದು ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಸೃಷ್ಟಿಸಿದೆ.