ರೇಣುಕಾಸ್ವಾಮಿ ಕೊಲೆ ಕೇಸಲ್ಲಿ (Renukaswamy murder case) ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಇಂದು ಪವಿತ್ರಗೌಡ (Pavitra gowda) ಆಪ್ತೆ ಸಮತಾ (Samatha)ವಿಚಾರಣೆ ನಡೆಯಲಿದೆ.ಈಗಾಗಲೇ ಒಂದು ಬಾರಿ ವಿಚಾರಣೆಗೆ ಹಾಜರಾಗಿದ್ದ ಸಮತ ಸತತ ೩ ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು.

ರೇಣುಕಾಸ್ವಾಮಿ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧನರಾಜ್ (Dhanaraj)ಗೆ ಈ ಸಮತಾ 3 ಸಾವಿರ ಹಣ ಕಳುಹಿಸಿದ್ದು ಸಾಬೀತಾಗಿದ್ದು, ಇದೇ ಹಣದಲ್ಲಿ ಧನರಾಜ್ ಎಲೆಕ್ಟ್ರಿಕ್ ಶಾಕ್ ಡಿವೈಸ್ (Electric shock device)ಖರೀದಿ ಮಾಡಿರುವ ಶಂಕೆ ವ್ಯಕ್ತವಾಗಿದೆ.ಹೀಗಾಗಿ ಸಮತಾಳನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು.

ಇಂದು ಇದೇ ವಿಚಾರವಾಗಿ ಮತ್ತೆ ವಿಚಾರಣೆಗೆ ಹಾಜರಾಗಲು ಪೊಲೀಸ್ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ತನಿಖಾಧಿಕಾರಿ ಎಸಿಪಿ ಚಂದನ್ (ACP Chandan)ಮುಂದೆ ಹಾಜರಾಗಲಿರೋ ಸಮತಾ ಮತ್ತೆ ವಿಚಾರಣೆ ಎದುರಿಸಬೇಕಿದೆ.