ಜಿ-7 ಶೃಂಗಸಭೆಯಲ್ಲಿ ಪಾಲ್ಗೋಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಫ್ಯೂಮಿಯೋ ಕಿಶಿಡಾ ಅವರ ಅಹ್ವಾನದ ಮೇರೆಗೆ ಜಪಾನ್ಗೆ ತೆರಳಿದ್ದರು, ಈ ವೇಳೆ ಪ್ರಧಾನಿ ಮೋದಿ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನ ಅನಾವರಣಗೊಳಿಸಿ, ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ರು.
![](https://pratidhvani.com/wp-content/uploads/2023/05/Fwidrb8aYAAkCpv.png)
ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನ ಅನಾವರಣಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ “ಇಂದಿಗೂ ಕೂಡ ಹಿರೋಶಿಮಾ ಪದವನ್ನ ಕೇಳಿದರೆ ಜಗತ್ತು ಬೆಚ್ಚಿ ಬೀಳುತ್ತೆ. ಒಮ್ಮೆ ನಡುಗಿ ಹೋಗುತ್ತೆ ಅಂತ ಹೇಳಿದ್ರು. ಜಿ 7 ಶೃಂಗಸಭೆ ಗಾಗಿ ಜಪಾನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ನನಗೆ ಒದಗಿ ಬಂದಿದೆ. ಮಹಾತ್ಮ ಗಾಂಧಿಯವರ ಪ್ರತಿಮೆಯು ಅಹಿಂಸೆಯ ಕಲ್ಪನೆಯನ್ನ ಮುಂದಕ್ಕೆ ಕೊಂಡೊಯ್ಯುತ್ತೆ ಎನ್ನುವ ನಂಬಿಕೆ ನನಗಿದೆ ಎನ್ನುವ ಮಾತುಗಳನ್ನು ಹೇಳಿದರು
![](https://pratidhvani.com/wp-content/uploads/2023/05/Fwi1TZbaUAQU0Ot-edited.jpg)
“ಜಪಾನಿನ ಪ್ರಧಾನಿಗೆ ನಾನು ಉಡುಗೊರೆಯಾಗಿ ನೀಡಿದ ಬೋಧಿ ವೃಕ್ಷವನ್ನು ಇಲ್ಲಿ ಹಿರೋಷಿಮಾದಲ್ಲಿ ನಡಲಾಗಿದೆ ಅಂತ ತಿಳಿದುಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಇದೊಂದು ಉತ್ತಮ ಕ್ಷಣ ಇದರಿಂದ ಜನರು ಇಲ್ಲಿಗೆ ಬಂದಾಗ ಶಾಂತಿಯ ಮಹತ್ವವನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಬಹುದು ನಾನು ಮಹಾತ್ಮ ಗಾಂಧಿಯವರಿಗೆ ನನ್ನ ಗೌರವವನ್ನು ಸಲ್ಲಿಸಲಿದ್ದೇನೆ. ಜಗತ್ತು ಜಾಗತಿಕ ತಾಪಮಾನ ಹಾಗೂ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗಿದೆ ಅಂತಲೂ ಹೇಳಿದ್ದಾರೆ.
![](https://pratidhvani.com/wp-content/uploads/2023/05/dddg.png)
![](https://pratidhvani.com/wp-content/uploads/2023/05/FwivybqagAAW8iz-edited.jpg)
ಇನ್ನು, ಮೇ 19ರಿಂದ 21 ರವರೆಗೆ ಹಿರೋಷಿಮದಲ್ಲಿ ನಡೆಯಲಿರುವ ಜಿ-7 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಜಿ-7 ನಾಯಕರು ಪ್ರಸ್ತುತ ಜಪಾನ್ನಲ್ಲಿದ್ದಾರೆ. ಜಪಾನ್ 2023ರಲ್ಲಿ ಜಿ7 ಅಧ್ಯಕ್ಷತೆಯನ್ನ ವಹಿಸಿಕೊಂಡಿದೆ