ತಮಿಳು ನಾಡಿಗೆ (Tamil nadu) ಕಾವೇರಿ ನೀರು (Cauvery river) ಹರಿಸುವ ವಿಚಾರದ ಕುರಿತ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಕೇಂದ್ರ ಸಚಿವ ಕುಮಾರಸ್ವಾಮಿ (Kumaraswamy) ಹಾಜರಾಗದೇ ಮಂಡ್ಯದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ಬೆನ್ನಲ್ಲೇ ಸಭೆಗೆ ಬರದೆ ಇದ್ದಿದ್ದಕ್ಕೆ ಕಾಂಗ್ರೆಸ್ (Congress) ನಾಯಕರು ನಿನ್ನೆ ಟೀಕೆ ವ್ಯಕ್ತಪಡಿಸಿದ್ರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹೆಚ್ಡಿಕೆ (HDK) ದ್ರಾಕ್ಷಿ-ಗೋಡಂಬಿ ತಿನ್ನೋಕೆ ಸಭೆಗೆ ಹೋಗಬೇಕಿತ್ತಾ ಅಂತ ಲೇವಡಿ ಮಾಡಿದ್ರು. ಸದ್ಯ ಹೆಚ್ಡಿಕೆಯ ದ್ರಾಕ್ಷಿ ಗೋಡಂಬಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ (Dcm DK Shivakumar) ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಫಿಲ್ಡ್ ಸ್ಟೈಲ್ನಲ್ಲೇ ಮಾತಾಡ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಗೋಡಂಬಿ ದ್ರಾಕ್ಷಿ ತಿನ್ನೋಕೆ ನಾವು ಸರ್ವಪಕ್ಷ ಸಭೆ ಕರೀತಾ ಇದ್ವಾ? ಕುಮಾರಸ್ವಾಮಿ ಎಲ್ಲದರಲ್ಲೂ ರಾಜಕಾರಣ ಮಾಡ್ತಾರೆ. ರಾಜಕಾರಣ ಬಿಟ್ರೆ, ರಾಜ್ಯದ ಹಿತ ಹಾಗೂ ಕಾವೇರಿಯ ಹಿತಕಾಯುವ ಬಗ್ಗೆ ಕುಮಾರಸ್ವಾಮಿ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ ಅಂತ ವಾಗ್ದಾಳಿ ನಡೆಸಿದ್ರು.