ಲೋಕಸಭಾ(LokaSaba) ಚುನಾವಣೆ ಹಾಗೂ ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ(Political) ಬೆಳವಣಿಗೆಗಳ ಕುರಿತು ಚರ್ಚಿಸುವ ಸಲುವಾಗಿ ಹಾಸನ(Hassan) ಜಿಲ್ಲೆಯ ಕಾಂಗ್ರೆಸ್ ನಾಯಕರು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ(KPCC) ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್(DKShivakumar) ಅವರನ್ನು ಭೇಟಿಯಾಗಿದ್ದಾರೆ.
![](https://pratidhvani.com/wp-content/uploads/2024/02/20240213_103712-1024x688.webp)
ಬೆಂಗಳೂರಿನಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಶಾಸಕ ಶಿವಲಿಂಗೇಗೌಡ(Shivalingegowda) ಅವರ ನೇತೃತ್ವದಲ್ಲಿ ಭೇಟಿಯ ನೀಡಿದ ಕಾಂಗ್ರೆಸ್(Congress) ನಾಯಕರು ಹಾಸನ ಜಿಲ್ಲೆಯ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳ ಕುರಿತಂತೆ ಚರ್ಚೆ ಇಲ್ಲದೆ ಮುಂಬರುವ ಲೋಕಸಭಾ(LokaSaba) ಚುನಾವಣೆಯ ಕಾರ್ಯತಂತ್ರಗಳ ಕುರಿತಂತೆ ಈ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
![](https://pratidhvani.com/wp-content/uploads/2024/02/20240213_103716-1024x716.webp)
ಪ್ರಮುಖವಾಗಿ ಹಾಸನ(Hassan) ಜಿಲ್ಲಾ ಕಾಂಗ್ರೆಸ್ನಲ್ಲಿ ಸ್ಥಳೀಯ ನಾಯಕರ ನಡುವೆ ಆಂತರಿಕ ಅಸಮಾಧಾನ ಉಂಟಾಗಿದ್ದು ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಈ ಕುರಿತಂತೆಯೂ ಡಿಕೆಶಿ(DKS) ಅವರೊಂದಿಗೆ ಹಾಸನದ ಜಿಲ್ಲಾ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ.
#Siddaramaiah #DKS #DKshivakumar #HassanCongress #KPCC