ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರತಿ ವರ್ಷ ನೀಡುವ ನಾಡೋಜ ಗೌರವ ಪದವಿಗೆ ಈ ವರ್ಷ ಜಾನಪದ ಸಾಹಿತಿ ಗೊ.ರು.ಚನ್ನಬಸಪ್ಪ, ಭಾಷಾ ಜ್ಞಾನಿ ಡಾ.ಭಾಷ್ಯಂ ಸ್ವಾಮಿ, ಹಾಗೂ ಸಂಸ್ಕೃತ ಲೋಕದ ಜ್ಞಾನಿ ಪ್ರೋ ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.
ವಿವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿವಿಯ ಕುಲಪತಿ ಡಾ.ಸ.ಚಿ.ರಮೇಶ, ಈ ತಿಂಗಳ 12 ರಂದು ನಡೆಯುವ ವಿವಿಯ 30 ನೇ ಘಟಿಕೋತ್ಸವ ನುಡಿಹಬ್ಬದಲ್ಲಿ ಈ ಗೌರವ ಪದವಿ ಪ್ರದಾನ ಮಾಡಲಿದೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ಗೆ ಹ್ಲೋಟ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಸಿ.ಎಸ್.ಅಶ್ವಥನಾರಾಯಣ ಆಂದ್ರಪ್ರದೇಶ ಕೇಂದ್ರೀಯ ಬುಡುಗಟು ವಿಶ್ವವಿದ್ಯಾಲಯ ದ ಡಾ. ತೇಜಸ್ವಿ ಕಟ್ಟೀಮನಿ ನುಡಿ ಹಬ್ಬದ ಭಾಷಣ ಮಾಡಲಿದ್ದಾರೆ. ಮುರುಘಾ ಶರಣರು, ಕಲ್ಲಕುಡಿ ವಿಠ್ಠಲ ಹೆಗಡೆ, ಬಿ.ಎಸ್.ಪುಟ್ಟಸ್ವಾಮಿ ಸೇರಿದಂತೆ 427 ವಿದ್ಯಾರ್ಥಿಗಳು ವಿವಿದ ಪದವಿಯನ್ನು ಪಡೆಯಲಿದ್ದಾರೆ.