ಹಾಸನ : ಹಾಸನ ಜಿಲ್ಲೆಯ ಚುನಾವಣೆ ಕಾವು ರಂಗೇರಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರಿಂದ ಮತದಾರರಿಗೆ ಭರ್ಜರಿ ಬಾಡೂಟದ ಜೊತೆಗೆ ಉಡುಗೊರೆ ನೀಡಲಾಗಿದೆ.
ಬಿಜೆಪಿಯ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೆಶ್ರಿಂದ ಬೇಲೂರು ತಾಲ್ಲೂಕಿನ, ಅಗಸರಹಳ್ಳಿ ಬಾರೆಯಲ್ಲಿ ನೂರಾರು ಜನರಿಗೆ ಗುಂಡು ತುಂಡು ಪಾರ್ಟಿ ಆಯೋಜನೆ ಮಾಡಿದ್ದಾರೆ.

ಭರ್ಜರಿ ಬಾಡೂಟ ಮಾಡಿ, ಕಂಠಪೂರ್ತಿ ಕುಡಿದ ಮತದಾರರು ಎಲ್ಲೆಂದರಲ್ಲಿ ಮಲಗಿರುವುದು ಕಂಡುಬಂತು.
ಹೆಚ್.ಕೆ.ಸುರೇಶ್ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪ್ರತಿದಿನ ಒಂದೊಂದು ಪಂಚಾಯ್ತಿ ವ್ಯಾಪ್ತಿಯಲ್ಲಿ ಬಾಡೂಟ ಆಯೋಜನೆ ಮಾಡುತ್ತಿದ್ದಾರೆ.
