• Home
  • About Us
  • ಕರ್ನಾಟಕ
Wednesday, July 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ದಶಕಗಳಿಂದ ಭೂಮಿಗಾಗಿ ಹೋರಾಡುತ್ತಿರುವ ಗುಜರಾತಿನ ಭೂ ರಹಿತ ದಲಿತ ಮಹಿಳೆಯರ ಮೇಲೆ ಮೇಲ್ಜಾತಿ ಜಮೀನ್ದಾರರ ಆಕ್ರಮಣ (ಭಾಗ-2)

ಫಾತಿಮಾ by ಫಾತಿಮಾ
December 11, 2021
in ಅಭಿಮತ
0
ದಶಕಗಳಿಂದ ಭೂಮಿಗಾಗಿ ಹೋರಾಡುತ್ತಿರುವ ಗುಜರಾತಿನ ಭೂ ರಹಿತ ದಲಿತರ ಮಹಿಳೆಯರು ಮತ್ತು ಮೇಲ್ಜಾತಿ ಜಮೀನ್ದಾರರ ಆಕ್ರಮಣ (ಭಾಗ-1)
Share on WhatsAppShare on FacebookShare on Telegram

ಪ್ರಭುತ್ವ, ಶೋಷಕರು ಯಾವ ಪ್ರತಿಭಟನೆ, ಮುಷ್ಕರಗಳಿಗೂ ಜಗ್ಗದೇ ಇದ್ದಾಗ ಈ ದೇಶದ ಮಹಿಳೆಯರು ಪ್ರಭುತ್ವದ ವಿರುದ್ಧ ಗಟ್ಟಿಯಾಗಿ, ದೃಢವಾಗಿ ನಿಂತಿದ್ದಾರೆ. ರಾಣಿ ಚೆನ್ನಮ್ಮ, ಲಕ್ಷ್ಮೀಬಾಯಿಯಂಥವರ ಉದಾಹರಣೆ ಇತಿಹಾಸದಲ್ಲಿದ್ದರೆ ಮೊನ್ನೆ ಮೊನ್ನೆ ಆಳುವ ಸರ್ಕಾರದ ಮುಂದೆ ಮಂಡಿಯೂರದೆ ನಿಂತ ಶಾಹಿನ್ ಭಾಗ್ನ ಮಹಿಳೆಯರೂ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ. ವೌಥಾದಲ್ಲಿ ನಡೆದದ್ದೂ ಇದೇ.

ADVERTISEMENT

ವರ್ಷಗಳ ಕಾಲ ನದಿ ತೀರದ ಭೂಮಿಯನ್ನು ಭೂರಹಿತ ಮೇಲ್ಜಾತಿ ರೈತರು ನಿಯಂತ್ರಿಸುತ್ತಿದ್ದರು ಮತ್ತು ಸಾಗುವಳಿ ಮಾಡುತ್ತಿದ್ದರು. ಅವರು ಭೂರಹಿತ ದಲಿತ ರೈತರಿಗೆ ಒಂದು ತುಂಡು ಭೂಮಿಯಲ್ಲಿ ಸಾಗುವಳಿ ಮಾಡಲೂ ಅವಕಾಶ ನೀಡಲಿಲ್ಲ. ದಲಿತ ಪುರುಷರು ಭೂಮಿಯ ಮೇಲೆ ಹಕ್ಕು ಸ್ಥಾಪಿಸಲು ವಿಫಲವಾದಾಗ ಮೇಲ್ಜಾತಿ ಗುಂಪುಗಳಿಂದ ಭೂಮಿಯನ್ನು ಯಶಸ್ವಿಯಾಗಿ ವಶಪಡಿಸಿಕೊಂಡವರು ಬಾಲುಬೆನ್ ಮತ್ತು ಇತರ ದಲಿತ ಮಹಿಳೆಯರು.

ಇಂಥದ್ದೊಂದು ಸಾಮಾಜಿಕ ಬದಲಾವಣೆಯ ಕಥೆಯು ಸುಮಾರು 30 ವರ್ಷಗಳ ಹಿಂದೆ ಪ್ರಾರಂಭವಾಗುತ್ತದೆ, ಬಾಲುಬೆನ್ ಅವರ ಪತಿ ಮತ್ತು ವೌಥಾದ ಇತರ 50 ದಲಿತ ಪುರುಷರು ಸೇರಿ ಚಳಿಗಾಲದಲ್ಲಿ ಒಟ್ಟು 100 ಎಕರೆ ಬಂಜರು ಭೂಮಿಯಲ್ಲಿ ಸ್ವಲ್ಪ ಭಾಗದಲ್ಲಿ ಬೆಳೆಯನ್ನು ಬೆಳೆಸಲು ನಿರ್ಧರಿಸಿದರು. ಅದರ ಮೇಲೆ ಔಪಚಾರಿಕ ಮಾಲೀಕತ್ವವನ್ನು ಸರ್ಕಾರ ಬಳಿ ಕೇಳುವುದು ಅವರ ಉದ್ದೇಶವಾಗಿತ್ತು, ಆದರೆ ಸ್ಥಳೀಯ ಮಟ್ಟದಲ್ಲಿ ತೀವ್ರ ದ್ವೇಷ ಎದುರಿಸಬೇಕಾಯಿತು. ಪಕ್ಕದ ಹಳ್ಳಿಗಳ ಹಲವಾರು ಮೇಲ್ಜಾತಿ ರಜಪೂತ ರೈತರು ತಮ್ಮ ಸ್ವಂತ ಕೃಷಿಗಾಗಿ ಬಹುತೇಕ ಎಲ್ಲಾ ಬಂಜರು ಭೂಮಿಯನ್ನು ಸ್ವಾಧೀನಪಡಿಸಿಕೊಂಡರು ಮತ್ತು ಜಮೀನು ತಮಗೆ ಸೇರಿದ್ದು ಎಂದು ದಬ್ಬಾಳಿಕೆ ನಡೆಸತೊಡಗಿದರು. ಸ್ಥಳೀಯವಾಗಿ ಈ ರಜಪೂತರನ್ನು ದರ್ಬಾರ್ ಎನ್ನುತ್ತಾರೆ.

“ದರ್ಬಾರ್ ರೈತರು ನಮ್ಮ ಪುರುಷರಿಗೆ ತೊಂದರೆ ನೀಡುತ್ತಿದ್ದರು, ಈ ಭೂಮಿಯಲ್ಲಿ ವ್ಯವಸಾಯ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಹಿಂಸಾಚಾರದ ಬೆದರಿಕೆ ಹಾಕುತ್ತಿದ್ದರು” ಎಂದು ಬಾಲುಬೆನ್ ಹೇಳುತ್ತಾರೆ. “ಆದರೆ ದರ್ಬಾರ್ಗಳು ಈಗಾಗಲೇ ಕೃಷಿ ಮಾಡಲು ತಮ್ಮದೇ ಆದ ಸಾಕಷ್ಟು ಭೂಮಿಯನ್ನು ಹೊಂದಿದ್ದಾರೆ ಮತ್ತು ನಾವು ಭೂರಹಿತರಾಗಿದ್ದೇವೆ. ಹಾಗಾದರೆ ನಮಗೂ ಸ್ವಲ್ಪ ಭೂಮಿ ಏಕೆ ಸಿಗಬಾರದು?” ಎನ್ನುವುದು ಅವರ ನ್ಯಾಯಯುತ ಪ್ರಶ್ನೆ.

ನಿರಂತರ ಐದು ವರ್ಷಗಳ ಕಾಲ ರಬಿ ಋತುವಿನ ಆರಂಭದಲ್ಲಿ ಹೊಲಗಳಿಂದ ಹೊರದಬ್ಬಲ್ಪಟ್ಟ ಪುರುಷರು ಆ ಭೂಮಿಯ ಮೇಲಿನ ಆಸೆಯನ್ನೇ ಕೈಬಿಟ್ಟರು. ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಭೂಮಿಯಿಂದ ದೂರ ಉಳಿದರು ಮತ್ತು ದರ್ಬಾರ್ ರೈತರು ಬಹುತೇಕ ಎಲ್ಲವನ್ನೂ ಸ್ವಾಧೀನಪಡಿಸಿಕೊಂಡರು. ಆ ಹತ್ತು ವರ್ಷಗಳಲ್ಲಿ ದಲಿತರು ಮತ್ತು ವೌಥಾದ ಇತರ ಭೂರಹಿತ ಗ್ರಾಮಸ್ಥರನ್ನು ದಿನಕ್ಕೆ ಕೇವಲ 50 ರೂಗಳಿಗೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವಂತೆ ಒತ್ತಾಯಿಸಲಾಯಿತು. ಆದರೆ ಭೂಮಿಯೆಡೆಗಿನ ಅವರ ಪ್ರೀತಿ ಕರಗಿರಲಿಲ್ಲ, ತಮ್ಮಿಂದ ಸಾಧ್ಯವಾಗದ್ದನ್ನು ಮಹಿಳೆಯರು ಸಾಧಿಸಿ ತೋರಿಸುತ್ತಾರೆ ಎನ್ನುವ ನಂಬಿಕೆಯಿಂದ ಭೂಮಿಯ ಒಡೆತನಕ್ಕಾಗಿ ಹಕ್ಕು ಸ್ಥಾಪಿಸಲು ಮಹಿಳೆಯರನ್ನು ಕೇಳಿಕೊಂಡರು.

ಈ ಬಗ್ಗೆ ಮಾತಾನಾಡಿದ ಬಾಲುಬೆನ್ ” ಪುರುಷರ ಬದಲಿಗೆ ನಾವು ಭೂಮಿಯಲ್ಲಿ ಕೃಷಿ ಮಾಡಬೇಕೆಂದು ಪುರುಷರು ಸಲಹೆ ನೀಡಿದರು” ಎಂದು ಹೇಳುತ್ತಾರೆ. ದರ್ಬಾರ್ ರೈತರು ಮಹಿಳೆಯರಿಗೆ ಸಮಸ್ಯೆ ಒಡ್ಡಲಾರರು ಮತ್ತು ಸರ್ಕಾರಿ ಅಧಿಕಾರಿಗಳು ಸಹ ಮಹಿಳೆಯರಿಗೆ ಸಂಥಾನಿ ಭೂಮಿಯನ್ನು ನೀಡುವ ಸಾಧ್ಯತೆ ಹೆಚ್ಚು ಎಂದು ದಲಿತರು ನಂಬಿದ್ದರು.

ಆದರೆ ಅವರ ನಂಬಿಕೆ ಸುಳ್ಳು ಎಂದು ಸಾಬೀತಾಗಲು ಹೆಚ್ಚಿನ ಸಮಯ ತಗುಲಲಿಲ್ಲ. 2009 ರ ಚಳಿಗಾಲದಲ್ಲಿ, ಮಹಿಳೆಯರು ಮೊದಲು ಕೆಲವು ಎಕರೆ ಬಂಜರು ಭೂಮಿಯಲ್ಲಿ ಬೆಳೆಯಲು ಪ್ರಯತ್ನಿಸಿದಾಗ ದರ್ಬಾರ್ ರೈತರು ಅವರನ್ನು ಪುರುಷರನ್ನು ನಡೆಸಿಕೊಂಡಷ್ಟೇ ಆಕ್ರಮಣಕಾರಿಯಾಗಿ ನಡೆಸಿಕೊಂಡರು.

“ಅವರು ನಮ್ಮನ್ನು ಹೊಡೆಯಲು ಕೋಲುಗಳೊಂದಿಗೆ ಬಂದರು” ಎಂದು ಮಹಿಳಾ ಮಂಡಳಿಯ ಸದಸ್ಯರಾದ 70 ವರ್ಷದ ಮಣಿಬೆನ್ ಸೋಲಂಕಿ ಹೇಳುತ್ತಾರೆ. “ಆದರೆ ನಾವು ಹೆದರಲಿಲ್ಲ. ನಾವು ಸಹಾಯ ಮತ್ತು ರಕ್ಷಣೆ ಪಡೆಯಲು ನಿರ್ಧರಿಸಿದೆವು” ಎಂದಿದ್ದಾರೆ.

ಆನಂತರ ಗುಜರಾತ್ನಾದ್ಯಂತ ಸದಸ್ಯರನ್ನು ಹೊಂದಿರುವ ಪ್ರಸಿದ್ಧ ದಲಿತ ಹಕ್ಕುಗಳ ಸಂಘಟನೆಯಾದ ‘ನವಸರ್ಜನ್’ನಿಂದ ಸಹಾಯ ಕೋರಿದರು. ವೌಥಾ ಮಹಿಳೆಯರು ಅವರನ್ನು ಸಂಪರ್ಕಿಸಿದ ಸುಮಾರು ಒಂದು ವರ್ಷದ ನಂತರ, ನವಸರ್ಜನ್ ಕಾರ್ಯಕರ್ತರು ಜಿಲ್ಲೆಯಾದ್ಯಂತ 50 ಕ್ಕೂ ಹೆಚ್ಚು ಸ್ವಯಂಸೇವಕರನ್ನು ಸಜ್ಜುಗೊಳಿಸಿದರು, ಮಹಿಳೆಯರು ಬಂಜರು ಭೂಮಿಯಲ್ಲಿ ಕೃಷಿ ಮಾಡುವಾಗ ಅವರ ಸುತ್ತಲೂ ಕಾವಲು ಕಾಯುತ್ತಿದ್ದರು. “ಅಂತಿಮವಾಗಿ ದರ್ಬಾರ್ ರೈತರು ಶಾಂತಿಯಿಂದ ಕೃಷಿ ಮಾಡಲು ನಮ್ಮನ್ನು ಬಿಟ್ಟರು” ಎಂದು ಮಣಿಬೆನ್ ಹೇಳುತ್ತಾರೆ.

ಈಗ ಅವರ ಹಿಡಿತದಲ್ಲಿ 36 ಎಕರೆ ಇದ್ದು, ವೌಥಾದ ದಲಿತ ಮಹಿಳೆಯರು ತಮ್ಮ ಕುಟುಂಬದ ಪ್ರಾಥಮಿಕ ಅನ್ನದಾತರಾಗಿದ್ದಾರೆ. ಕ್ಯಾಸ್ಟರ್, ಹತ್ತಿ, ಗೋಧಿ ಮತ್ತು ಇತರ ಬೆಳೆಗಳನ್ನು ಬೆಳೆಯುವ ಮೂಲಕ ಪ್ರತಿ ಬೆಳೆ ಋತುವಿನಲ್ಲಿ ಒಟ್ಟಾರೆಯಾಗಿ ರೂ 3 ಲಕ್ಷದವರೆಗೆ ಗಳಿಸುತ್ತಾರೆ. “ನಾವು ಪ್ರತಿಯೊಬ್ಬರೂ ನಮ್ಮ ಕೆಲಸಕ್ಕೆ ದಿನಕ್ಕೆ 200 ರೂಪಾಯಿಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಪ್ರತಿ ಸದಸ್ಯರು ಪ್ರತಿ ವರ್ಷ 80 ರಿಂದ 100 ಕೆಜಿ ಧಾನ್ಯವನ್ನು ಪಡೆಯುತ್ತಾರೆ” ಎಂದು ಹೇಳುವ ಬಾಲುಬೆನ್ “ಉಳಿದ ಧಾನ್ಯವನ್ನು ನಾವು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ” ಎನ್ನುತ್ತಾರೆ.

ಇಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳಾಗಲೀ, ದರ್ಬಾರ್ ರೈತರಾಗಲೀ ಬಂಜರು ಭೂಮಿಯಲ್ಲಿ ಸಾಗುವಳಿ ಮಾಡುವುದನ್ನು ವಿರೋಧಿಸಿಲ್ಲ. ಆದರೆ ತಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮತ್ತು ಕೃಷಿ ಸಾಲ ಮತ್ತು ಇತರ ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವಂತೆ, ಮಹಿಳೆಯರು ಸಂಥಾನಿ ಯೋಜನೆಯಡಿ ಭೂ ಮಾಲೀಕತ್ವವನ್ನು ಬಯಸುತ್ತಾರೆ.

“ಆದರೆ ನಮ್ಮ ಅರ್ಜಿಯು ವರ್ಷಗಳಿಂದ ಮೂಲೆಗೆ ಬಿದ್ದಿದೆ. ಅದು ಎಲ್ಲಿದೆ ಎಂದೂ ನಮಗೆ ತಿಳಿದಿಲ್ಲ” ಎಂದು ಬಾಲುಬೆನ್ ಹೇಳುತ್ತಾರೆ.

ಈ ಬಗ್ಗೆ ಭೂ ಮಾಲೀಕತ್ವದ ಅರ್ಜಿಗಳನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿರುವ ಅಹಮದಾಬಾದ್ ಕಲೆಕ್ಟರೇಟ್ನಲ್ಲಿ ಅಧಿಕಾರಿಗಳ ಕೇಳುವಾಗ ಯಾವುದೇ ವಿವರಗಳನ್ನು ಹೊಂದಿಲ್ಲ ಎನ್ನುತ್ತಾರೆ. ಗಾಂಧಿನಗರದಲ್ಲಿನ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಅಧಿಕಾರಿಗಳು ಸಹ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. “ಈ ಮಹಿಳೆಯರ ಅರ್ಜಿಗಳು ಕಲೆಕ್ಟರೇಟ್ ಮಟ್ಟದಲ್ಲಿ ಚಲಾವಣೆಯಲ್ಲಿರಬೇಕು. ಇದು ಇಲ್ಲಿಗೆ ತಲುಪಿಲ್ಲ ಎಂದು ನಾನು ಭಾವಿಸುತ್ತೇನೆ”ಎಂದು ಕಂದಾಯ ಇಲಾಖೆಯ ಭೂ ವಿಭಾಗದ ವಿಭಾಗ ಅಧಿಕಾರಿ ಪ್ರಿಯಾಂಕ್ ಗೋಸ್ವಾಮಿ ಹೇಳಿರುವುದಾಗಿ ‘ಸ್ಕ್ರೋಲ್.ಇನ್ ವರದಿ ಮಾಡಿದೆ. ಸಂಥಾನಿ ಯೋಜನೆಯಡಿಯಲ್ಲಿ, ರಾಜ್ಯ ಸರ್ಕಾರವು ಭೂ ಹಂಚಿಕೆಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡುತ್ತದೆ, ಆದರೆ ನಿರ್ದಿಷ್ಟವಾಗಿ ಮಹಿಳೆಯರಿಗೆ ಆದ್ಯತೆ ನೀಡುವುದಿಲ್ಲ ಎಂದು ಗೋಸ್ವಾಮಿ ಪ್ರತಿಪಾದಿಸಿದರು.

ಇತ್ತೀಚಿನ ವರ್ಷಗಳಲ್ಲಿ ವಿತರಿಸಲು ಲಭ್ಯವಿರುವ ಸರ್ಕಾರಿ ಪಾಳುಭೂಮಿಯ ಸಾಮಾನ್ಯ ಕೊರತೆಯನ್ನು ರಾಜ್ಯ ಕಂಡಿದೆ ಎಂದು ಅವರು ಹೇಳುತ್ತಾರೆ. “ಭೂಮಿಯ ಕೊರತೆಯಿಂದಾಗಿ, ಕಳೆದ 10 ಅಥವಾ 15 ವರ್ಷಗಳಲ್ಲಿ ಸರ್ಕಾರವು ಯಾವುದೇ ಹೊಸ ಸಂಥಾನಿ ಹಂಚಿಕೆಗಳನ್ನು ಮಾಡಿಲ್ಲ” ಎಂದು ಗೋಸ್ವಾಮಿ ಹೇಳಿದ್ದಾರೆ. ಆದರೆ ಇದೇ ವೇಳೆ ನೂರಾರು ಎಕರೆ ಭೂಮಿಗಳನ್ನು ರಾಜ್ಯದ ಶ್ರೀಮಂತರಿಗೆ ನೀಡಲಾಗಿದೆ ಎಂಂಬ ದೂರೂ ಕೇಳಿಬರುತ್ತಿದೆ.

ರಾಜ್ಯ ಸರ್ಕಾರವು 2020 ರಲ್ಲಿ ಜಾರಿಗೆ ತಂದ ಭೂಕಬಳಿಕೆ (ನಿಷೇಧ) ಕಾಯಿದೆ ಜಾರಿಗೆ ತಂದಿದ್ದು ಇದರ ಪ್ರಕಾರ ಇತರರಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸುವವರು 10ರಿಂದ 14 ವರ್ಷ ಜೈಲುಶಿಕ್ಷೆಗೆ ಗುರಿಯಾಗಲಿದ್ದಾರೆ. ಈ ನಿಯಮ ಜಾರಿಗೆ ಬಂದ ನಂತರವೂ ಬಾಲುಬೆನ್ ಮತ್ತು ಅವರ ಗುಂಪು ಸುತ್ತಮುತ್ತಲಿನ ಮೇಲ್ಜಾತಿ ಪುರುಷರಿಂದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಆದರೆ ಈ ಬೆದರಿಕೆಗೆ ಜಗ್ಗದ ಬಾಲುಬೆನ್ “ನಮಗೆ ಬೇಕಾಗಿರುವುದು ನಮ್ಮ ಹೆಸರಿನಲ್ಲಿ ಸ್ವಲ್ಪ ಭೂಮಿಯನ್ನು ಹೊಂದುವುದು ಮಾತ್ರ” ಎನ್ನುತ್ತಾರೆ.

ಮೂಲ: ಸ್ಕ್ರೋಲ್.ಇನ್

Tags: BJPGujarati landless Daliths who have been fighting for land for decades and invasion of uppercast landowners (part 2)ನರೇಂದ್ರ ಮೋದಿಬಿಜೆಪಿ
Previous Post

ಹಿಂದೂತ್ವದ ಕೋಮುವಾದಕ್ಕೆ ದೇಶದ ಪೊಲೀಸರು ಬಲಿಯಾಗುತ್ತಿದ್ದಾರೆಯೇ?

Next Post

ತಮಿಳರ ಭಾಷಾ ಪ್ರೇಮ ಹಾಗೂ ಕನ್ನಡಿಗರ `ಏಕ್ಕಿ ಮಿನುಟ್’ ರಾಜಕಾರಣ!

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ತಮಿಳರ ಭಾಷಾ ಪ್ರೇಮ ಹಾಗೂ ಕನ್ನಡಿಗರ `ಏಕ್ಕಿ ಮಿನುಟ್’ ರಾಜಕಾರಣ!

ತಮಿಳರ ಭಾಷಾ ಪ್ರೇಮ ಹಾಗೂ ಕನ್ನಡಿಗರ `ಏಕ್ಕಿ ಮಿನುಟ್' ರಾಜಕಾರಣ!

Please login to join discussion

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ
Top Story

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

by ಪ್ರತಿಧ್ವನಿ
July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 
Top Story

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

by Chetan
July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ
Top Story

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

by Shivakumar A
July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 
Top Story

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

by Chetan
July 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada