ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪ್ರಸ್ತಾಪಿಸಿ ಲೋಕಸಭೆಯಲ್ಲಿ ಮಾತನಾಡಿದ ಸೆಂಥಿಲ್ ಕುಮಾರ್, ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ ಅಂತ ಸೆಂಥಿಲ್ ಕುಮಾರ್ ಹೇಳಿದ್ದಾರೆ.
ಈ ಬಿಜೆಪಿಯ ಶಕ್ತಿಯು ಮುಖ್ಯವಾಗಿ ಹಾಗೂ ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳು ಎಂದು ಕರೆಯುವ ಹಿಂದಿಯ ಹೃದಯಭಾಗದ ರಾಜ್ಯಗಳಲ್ಲಿ ಮಾತ್ರ. ಅಲ್ಲಿಯ ಚುನಾವಣೆಗಳಲ್ಲಿ ಮಾತ್ರ ಗೆಲ್ಲುವುದು ಎಂದು ಈ ದೇಶದ ಜನರು ಭಾವಿಸಬೇಕು ಎಂದು ಟೀಕಿಸಿದ್ದಾರೆ.
ದಕ್ಷಿಣ ರಾಜ್ಯಗಳ ಮೇಲೆ ಪರೋಕ್ಷ ಆಡಳಿತ ಹೊಂದಲು ಬಿಜೆಪಿಯು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವನ್ನು ಕೇಂದ್ರಾಡಳಿತ ಪ್ರದೇಶ ಅಂತ ಘೋಷಿಸಬಹುದು ಅಂತ ಅವರು ಆರೋಪಿಸಿದ್ದಾರೆ.
![](https://pratidhvani.com/wp-content/uploads/2023/12/105755298.png)
ಈ ಹಿಂದೆ NEP ವಿರೋಧಿಸುವ ವೇಳೆ ಮಾತನಾಡಿದ್ದ ಸೆಂಥಿಲ್ ಕುಮಾರ್, ದೇಶದ ಅಭಿವೃದ್ಧಿಗೆ ದ್ರಾವಿಡ ಮಾದರಿಯನ್ನು ಜಾರಿಗೆ ತರಬೇಕು. ಕೇಂದ್ರದ ನೀತಿಯನ್ನು ನಮ್ಮ ಮೇಲೆ ಏಕೆ ಹೇರಲಾಗುತ್ತಿದೆ? ಈ NEPಯನ್ನು ಬೇಕಿದ್ದರೆ ತಮ್ಮ ಗೋಮೂತ್ರ ರಾಜ್ಯಗಳಲ್ಲಿ ಅನುಷ್ಠಾನ ಮಾಡಿಕೊಳ್ಳಲಿ ಎಂದಿದ್ದರು.