• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಏರುತ್ತಿರುವ ಜಾಗತಿಕ ತಾಪಮಾನ ಡೆಂಗ್ಯೂ ಜ್ವರದ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ: ಅಧ್ಯಯನ

ಫಾತಿಮಾ by ಫಾತಿಮಾ
July 27, 2021
in ದೇಶ
0
ಏರುತ್ತಿರುವ ಜಾಗತಿಕ ತಾಪಮಾನ ಡೆಂಗ್ಯೂ ಜ್ವರದ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ: ಅಧ್ಯಯನ
Share on WhatsAppShare on FacebookShare on Telegram

ದಿನೇದಿನ ಏರುತ್ತಿರುವ ಜಾಗತಿಕ ತಾಪಮಾನ ಮತ್ತು ಅದು ಭೂಮಿಯ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು, ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿರುವ ನಡುವೆಯೇ ಕುತೂಹಲಕಾರಿ ಸಂಶೋಧನೆಯೊಂದು ಏರುತ್ತಿರುವ ಜಾಗತಿಕ ತಾಪಮಾನವು ಡೆಂಗ್ಯೂ ಜ್ವರದ ಹರಡುವಿಕೆಯನ್ನು ಕಡಿಮೆಗೊಳಿಸಬಹುದು ಎಂದು ಪ್ರತಿಪಾದಿಸಿದೆ. ಆದರೆ ಇದರ ಜೊತೆಗೆ ವೈರಲ್ ಸೋಂಕನ್ನು ನಿಯಂತ್ರಿಸಲು ಸೊಳ್ಳೆಗಳಲ್ಲಿ ಬಳಸುವ ಬ್ಯಾಕ್ಟೀರಿಯಾದ ಪರಿಣಾಮಕಾರಿತ್ವವನ್ನು  ಸಹ ಗ್ಲೋಬಲ್ ವಾರ್ಮಿಂಗ್ ಕಡಿಮೆ ಮಾಡಬಹುದು ಎಂದು ಅದೇ ಅಧ್ಯಯನ ಅಭಿಪ್ರಾಯ ಪಟ್ಟಿದೆ.

ADVERTISEMENT

‘PLOS Neglected Tropical Diseases’ ಜರ್ನಲ್‌ನಲ್ಲಿ ಗುರುವಾರ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ, ಡೆಂಗ್ಯೂ ವೈರಸ್ ಸೋಂಕನ್ನು ಹೊಂದಿರುವ ಸೊಳ್ಳೆಗಳು ಬೆಚ್ಚಗಿನ ತಾಪಮಾನದಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತದೆ ಎಂದು ಹೇಳಲಾಗಿದೆ.

ಡೆಂಗ್ಯೂ ವಿರುದ್ಧ ಇತ್ತೀಚಿನ ದಿನಗಳಲ್ಲಿ ಜೈವಿಕ ನಿಯಂತ್ರಣ ಏಜೆಂಟ್ ಆಗಿ ಬಳಸಲಾಗುತ್ತಿರುವ ‘ವೋಲ್ಬಾಚಿಯಾ’ ಎಂಬ ಬ್ಯಾಕ್ಟೀರಿಯ ಸಹ ಸೋಂಕಿರುವ ಕೀಟಗಳ ಉಷ್ಣ ಸಂವೇದನೆ ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಡೆಂಗ್ಯೂ ಜ್ವರ ಯಾವುದೇ ಚಿಕಿತ್ಸೆ ಇಲ್ಲದ ಮಾರಕ ಕಾಯಿಲೆಯಾಗಿದೆ. ಈ ಸೊಳ್ಳೆಯು ಡೆಂಗ್ಯೂ ಮಾತ್ರವಲ್ಲದೆ ಇತರ ಹಲವು ಖಾಯಿಲೆಹಳನ್ನು ಸಹ ಅತ್ಯಂತ ವೇಗವಾಗಿ ಹರಡುತ್ತದೆ. “ಈ ಸೊಳ್ಳೆಯು ಜಿಕಾ, ಚಿಕೂನ್‌ಗುನ್ಯಾ ಮತ್ತು ಹಳದಿ ಜ್ವರ ಸೇರಿದಂತೆ ಹಲವಾರು ರೋಗ-ಉಂಟುಮಾಡುವ ವೈರಸ್‌ಗಳನ್ನು ಹರಡಲು ಕಾರಣವಾಗಿದೆ” ಎಂದು ಯುಎಸ್‌ನ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಎಲಿಜಬೆತ್ ಮೆಕ್‌ಗ್ರಾ ಹೇಳುತ್ತಾರೆ.

“ಹೆಚ್ಚುತ್ತಿರುವ ನಗರೀಕರಣ ಮತ್ತು ಹವಾಮಾನ ಬದಲಾವಣೆಯ ನೆರವಿನಿಂದ, ಈ ಸೊಳ್ಳೆಯ ವ್ಯಾಪ್ತಿಯು 2050 ರ ವೇಳೆಗೆ ವಿಶ್ವದ ಜನಸಂಖ್ಯೆಯ ಶೇಕಡಾ 50ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮತ್ತು ಆ ವೇಳೆಗೆ ಈ ವೈರಸ್‌ಗಳಿಗೆ ಒಡ್ಡಿಕೊಳ್ಳುವ ಜನರ ಸಂಖ್ಯೆಯೂ ನಾಟಕೀಯವಾಗಿ ಹೆಚ್ಚುತ್ತದೆ” ಎಂದು ಮೆಕ್‌ಗ್ರಾ ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ವೊಲ್ಬಾಚಿಯಾ ಪಿಪೆಂಟಿಸ್ ಎಂಬ ಬ್ಯಾಕ್ಟೀರಿಯಾವನ್ನು ಈಡಿಸ್ ಈಜಿಪ್ಟಿಗೆ ತಗುಲಿಸಿ ನಂತರ ಸೊಳ್ಳೆಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುವ ಮೂಲಕ ವಿಶ್ವದಾದ್ಯಂತದ ಸಂಶೋಧನಾ ಗುಂಪುಗಳು ಈ ವೈರಸ್‌ಗಳನ್ನು ನಿಯಂತ್ರಿಸಲು ಪ್ರಯತ್ನಿಸಿವೆ ಎಂದು ಮೆಕ್‌ಗ್ರಾ ತಮ್ಮ‌ ಲೇಖನದಲ್ಲಿ ವಿವರಿಸಿದ್ದಾರೆ.

ಡೆಂಗ್ಯೂ ಸೇರಿದಂತೆ ವೈರಸ್‌ಗಳು ಸೊಳ್ಳೆಗಳೊಳಗೆ ಸೇರದಂತೆ ವೊಲ್ಬಾಚಿಯಾವನ್ನು ಬಳಸಲಾಗುತ್ತದೆ. “ಮುಖ್ಯವಾಗಿ, ವೊಲ್ಬಾಚಿಯಾವನ್ನು ಸೋಂಕು ರೋಗ ಹರಡದಿರಲೆಂದು ಸೊಳ್ಳೆಗಳ ಸಂತತಿಗೆ ರವಾನಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ರೋಗ ನಿಯಂತ್ರಣ ಮಾಡುವ ವಿಧಾನದಲ್ಲಿ ಇದು ಅತ್ಯಂಕ  ಕಡಿಮೆ ವೆಚ್ಚದ ವಿಧಾನವಾಗಿದೆ” ಎಂದು ಮೆಕ್ಗ್ರಾ ಹೇಳಿದ್ದಾರೆ.

ಡೆಂಗ್ಯೂ ವೈರಸ್ ಮತ್ತು ವೊಲ್ಬಾಚಿಯಾ ಎರಡೂ ಸೊಳ್ಳೆಯ ದೇಹದಾದ್ಯಂತ ವಿವಿಧ ಅಂಗಾಂಗಗಳಿಗೆ ಸೋಂಕು ತಗುಲಿಸುತ್ತವೆ.  ವೊಲ್ಬಾಚಿಯಾ ವಿಷಕಾರಿಯಲ್ಲದಿದ್ದರೂ ಅವು ರೋಗನಿರೋಧಕ  ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ ಎಂದು ಅವರು ಹೇಳುತ್ತಾರೆ.

“ಡೆಂಗ್ಯೂ ವೈರಸ್ ಮತ್ತು  ವೊಲ್ಬಾಚಿಯಾದಿಂದ ಸೋಂಕಿಗೆ ಒಳಗಾದ ಸೊಳ್ಳೆಗಳು  ಒತ್ತಡದ ಪ್ರತಿಕ್ರಿಯೆಯಿಂದ ಬಳಲುವುದರಿಂದ ಶಾಖದಂತಹ ಹೆಚ್ಚುವರಿ ಒತ್ತಡವನ್ನು ಎದುರಿಸಲು ಅಶಕ್ತವಾಗಿರುತ್ತವೆ ಎಂದು ನಾವು ಭಾವಿಸಿದ್ದೇವೆ” ಎಂದು ಮೆಕ್ಗ್ರಾ ಹೇಳಿದ್ದಾರೆ.

ಸಂಶೋಧಕರು ಸೋಂಕಿತ ಸೊಳ್ಳೆಗಳನ್ನು ಮುಚ್ಚಿದ ಬಾಟಲಿಗಳಲ್ಲಿ ಇರಿಸಿ ನಂತರ ಬಾಟಲುಗಳನ್ನು 42 ಡಿಗ್ರಿ ಸೆಲ್ಸಿಯಸ್‌ಗೆ ಬಿಸಿಮಾಡಿದ ನೀರಿನಲ್ಲಿ ಮುಳುಗಿಸಿ, ನಂತರ ಅವರು ಸೊಳ್ಳೆಗಳು ನಿಶ್ಚಲವಾಗಲು ಎಷ್ಟು ಸಮಯ ತೆಗೆದುಕೊಂಡಿತು ಎಂದು ಗಮನಿಸಿ ಆ ಸಮಯವನ್ನು  ಸೋಂಕುರಹಿತ ಸೊಳ್ಳೆಗಳು ತೆಗೆದುಕೊಂಡ ಸಮಯಕ್ಕೆ ಹೋಲಿಸಿದರು. ಈ ಮೂಲಕ ಡೆಂಗ್ಯೂ ವೈರಸ್ ಸೋಂಕಿತ ಸೊಳ್ಳೆಗಳು ಶಾಖಕ್ಕೆ ಹೆಚ್ಚು ಸೂಕ್ಷ್ಮವಾಗಿರುತ್ತವೆ ಎಂದು ಕಂಡುಹಿಡಿಯಲಾಯಿತು.

ಬಿಸಿನೀರಿನ ಕೊಳದಲ್ಲಿ ಇರಿಸಿದಾಗ ಸೋಂಕುರಹಿತ ಸೊಳ್ಳೆಗಳಿಗಿಂತ ಅವು ಮೂರು ಪಟ್ಟು ವೇಗವಾಗಿ ನಿಶ್ಚಲಗೊಂಡವು.  ಅಂತೆಯೇ, ವೊಲ್ಬಾಚಿಯಾ ಸೋಂಕಿತ ಸೊಳ್ಳೆಗಳು ಸೋಂಕುರಹಿತ ಸೊಳ್ಳೆಗಳಿಗಿಂತ ನಾಲ್ಕು ಪಟ್ಟು ವೇಗವಾಗಿ ನಿಶ್ಚಲಗೊಂಡವು ಎಂದು ವಿಜ್ಞಾನಿಗಳ ತಂಡ ಹೇಳಿಕೊಂಡಿದೆ.

ಭವಿಷ್ಯದ ಹವಾಮಾನ ಮಾದರಿಗಳು ವಿಪರೀತ ತಾಪಮಾನದ ಏರಿಳಿಕೆಗಳನ್ನು ಸೂಚಿಸಲಿವೆ ಎಂದು ಹವಾಮಾನ ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ.ಹೆಚ್ಚಿನ ತಾಪಮಾನವು ಡೆಂಗ್ಯೂ ಮತ್ತು ವೊಲ್ಬಾಚಿಯಾ ಸೋಂಕಿತ ಸೊಳ್ಳೆಗಳ ಉಳಿವಿಗೆ ಅಪಾಯವನ್ನುಂಟುಮಾಡುತ್ತದೆ.

“ಹೆಚ್ಚಿನ ತಾಪಮಾನದಲ್ಲಿ, ವೈರಸ್ ವೇಗವಾಗಿ ಸಂತಾನೋತ್ಪತ್ತಿ ಮಾಡಬಹುದಾದರೂ, ಏರುತ್ತಿರುವ ತಾಪಮಾನವು ಸೊಳ್ಳೆಯ ಬದುಕುಳಿಯುವಿಕೆಯ ಮೇಲೆ ಪ್ರಭಾವ ಬೀರುತ್ತದೆ. ಅದು ಸಹಜವಾಗಿಯೇ ರೋಗ ಹರಡುವಿಕೆಯನ್ನು ಕಡಿಮೆ ಮಾಡಲಿದೆ ” ಎಂದು‌ ಸಂಶೋಧನಾ ತಂಡದಲ್ಲಿದ್ದ ಮತ್ತೊಬ್ಬ ವಿಜ್ಞಾನಿ ವೇರ್-ಗಿಲ್ಮೋರ್ ಹೇಳಿದ್ದಾರೆ.

Previous Post

ಪ್ರಭುತ್ವದ ಕಣ್ಗಾವಲು ಮತ್ತು ಪ್ರಜೆಗಳ ಜಾಗೃತಿ

Next Post

ರಾಜ್ಯದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ -ಸಿದ್ದರಾಮಯ್ಯ

Related Posts

Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
0

ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆಸರಕಾರದ ಖಾತೆಗೆ ಹಣ ಬಂದಾಗಲೇ ಖಾತರಿ “ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ....

Read moreDetails

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025

Gujarath: ಗುಜರಾತ್‌ನಲ್ಲಿ ಮತ್ತೊಮ್ಮೆ ನದಿಗೆ ಬಿದ್ದ ವಾಹನಗಳು..

July 9, 2025
Next Post
ರಾಜ್ಯದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ -ಸಿದ್ದರಾಮಯ್ಯ

ರಾಜ್ಯದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ -ಸಿದ್ದರಾಮಯ್ಯ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada