ರಾಜ್ಯದ ಗದಗ (Gadag) ಜಿಲ್ಲೆಯ ನರೇಗಲ್ನ ಅನ್ನದಾನೇಶ್ವರ ಮಠದ (Annadaneshwara matt) ಆಸ್ತಿಯಲ್ಲೂ ವಕ್ಫ್ ಬೋರ್ಡ್ (Waqf board) ಹೆಸರು ನಮೂದಿಸಲಾಗಿದೆ. ಪಹಣಿ ತೆಗೆಸಿ ನೋಡಿದ ಮಠದ ಶ್ರೀಗಳು ಮತ್ತು ಭಕ್ತರು ಕಂಗಾಲಾಗಿದ್ದಾರೆ.

2019-20 ಬಿಜೆಪಿ ಸರ್ಕಾರದ (BJP government) ಅವಧಿಯಲ್ಲೇ ಮಠದ ಆಸ್ತಿಯಲ್ಲಿ ವಕ್ಸ್ ಹೆಸರು ಸೇರ್ಪಡೆ ಆಗಿದೆ. ಪಹಣಿ ಬದಲಾವಣೆ ಮಾಡಿದ ಜಿಲ್ಲಾಡಳಿತ ವಿರುದ್ಧ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಮಾರು 500 ವರ್ಷಗಳ ಇತಿಹಾಸ ಇರುವ ಮಠದ ಆಸ್ತಿ ವಕ್ಸ್ ಬೋರ್ಡ್ ಪಾಲಾಗಿದೆ. ನರೇಗಲ್ ಪಟ್ಟಣದ ಪ್ರಸಾದ ನಿಲಯದ 11.19 ಗುಂಟೆ ಎಕರೆ ಆಸ್ತಿ ವಕ್ಫ್ ಹೆಸರಿಗೆ ನಮೂದಾಗಿದೆ ಎಂದು ಹೇಳಿದ್ದಾರೆ. ಸರ್ವೆ ನಂಬರ್ 410/2ಬಿ 15 ಎಕರೆ 6 ಗುಂಟೆ ಜಮೀನು ದಾನವಾಗಿ ಮಠಕ್ಕೆ ಬಂದಿತ್ತು. 15 ಎಕರೆ ಆಸ್ತಿ ಪೈಕಿ 11 ಎಕರೆ 19ಗುಂಟೆ ಆಸ್ತಿಯಲ್ಲಿ ವಕ್ಫ್ ಅಂತ ನಮೂದಿಸಲಾಗಿದೆ.
ಹೀಗಾಗಿ ಸರ್ಕಾರ ಈ ಕೂಡಲೇ ಮಠದ ಆಸ್ತಿಯನ್ನು ಮಠಕ್ಕೆ ಉಳಿಯುವಂತೆ ದಾಖಲೆ ಬದಲಾಯಿಸಬೇಕು. ಒಂದೇವೇಳೆ ಸರ್ಕಾರ ಇದಕ್ಕೆ ಸ್ಪಂದಿಸದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಭಕ್ತರು ಎಚ್ಚರಿಕೆ ನೀಡಿದ್ದಾರೆ.