• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, September 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹೆಚ್.ಡಿ.ಕುಮಾರಸ್ವಾಮಿ & ನಿಖಿಲ್ ವಿರುದ್ಧ FIR ! ಐಪಿಎಸ್ ಅಧಿಕಾರಿ ಚಂದ್ರಶೇಖರ್ ರಿಂದ ದೂರು ದಾಖಲು !

Chetan by Chetan
November 5, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಹೆಚ್.ಡಿ.ಕುಮಾರಸ್ವಾಮಿ & ನಿಖಿಲ್ ವಿರುದ್ಧ FIR ! ಐಪಿಎಸ್ ಅಧಿಕಾರಿ ಚಂದ್ರಶೇಖರ್ ರಿಂದ ದೂರು ದಾಖಲು !
Share on WhatsAppShare on FacebookShare on Telegram

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಮತ್ತು, ಸುರೇಶ್ ಬಾಬು (Suresh babu) ಮೂವರ ವಿರುದ್ಧ ಬೆಂಗಳೂರಿನ ಸಂಜಯ ನಗರ ಪೊಲೀಸ್ ಸ್ಟೇಷನ್ ದೂರು ದಾಕಲಾಗಿದ್ದು, FIR ಮಾಡಲಾಗಿದೆ.

ADVERTISEMENT

ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಐಪಿಎಸ್ ಅಧಿಕಾರಿ, ಎಸ್.ಐ.ಟಿ ಐಜಿ ಚಂದ್ರಶೇಖರ್ (IPS officer chandrashekar) ನಡುವಿನ ಹಗ್ಗಜಗ್ಗಾಟ ಈಗ ಕಾನೂನಾತ್ಮಕ ಸ್ವರೂಪ ಪಡೆದಿದೆ. ಕುಮಾರಸ್ವಾಮಿ ಹಾಗೂ ಉಳಿದವರ ವಿರುದ್ಧ ಐಪಿಎಸ್ ಅಧಿಕಾರಿ ಚಂದ್ರಶೇಕರ್ ಸಂಜಯ ನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಕಲಿಸಿದ್ದಾರೆ.

ಈ ಹಿಂದೆ IPS ಅಧಿಕಾರಿಯನ್ನ ಕೆಣಕಿ HDK ಅಂದು ಸುದ್ದಿಗೋಷ್ಠಿಯಲ್ಲಿ ಆಡಿದ ಮಾತುಗಳು ಅವರಿಗೆ ದೊಡ್ಡ ಸಂಕಷ್ಟ ತಂದಿಟ್ಟಿರುವಂತಿದೆ. ಈ ವೇಳೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರ ಮಾಡಿದ್ದ ಕುಮಾರಸ್ವಾಮಿ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದರು. ಈ ಆರೋಪಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಚಂದ್ರಶೇಖರ್ ಬಹಳ ಕಠಿಣ ಪದಗಳನ್ನು ಬಳಸಿ ಕೇಂದ್ರ ಸಚಿವರ ವಿರುದ್ಧ ಸಮರ ಸಾರಿದ್ದರು. ಈಗ ಆ ಸಮರ ಮುಂದುವರೆಯುವಂತೆ ಕಾಣ್ತಿದೆ. ಇದೇ ವಿಚಾರವಾಗಿ ಅಧಿಕಾರಿ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ.

ಹೌದು, 2006 ರಿಂದ 2008 ರ ಅವಧಿಗೆ ಹೆಚ್‌ಡಿಕೆ ಸಿಎಂ ಆಗಿದ್ದ ಸಂದರ್ಭದಲ್ಲಿ ಶ್ರೀ ಸಾಯಿ ವೆಂಕಟರೇಶ್ವರ ಮಿನರಲ್ಸ್ ಮೈನಿಂಗ್ ಕಂಪೆನಿಗೆ ಬಳ್ಳಾರಿಯಲ್ಲಿ (Bellary) ಅಕ್ರಮವಾಗಿ 550 ಎಕರೆ ಭೂಮಿ ಮಂಜೂರು ಮಾಡಿದ್ದ ಆರೋಪದಲ್ಲಿ ಕುಮಾರಸ್ವಾಮಿ ಮೇಲೆ ಕೇಸ್ ದಾಕಲಾಗಿದ್ದು, ಸದ್ಯ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದಾರೆ.

ಹೀಗಾಗಿ ಈಗಾಗಲೇ ಈ ಅಕ್ರಮ ಭೂಮಿ ಮಂಜೂರಾತಿ ಪ್ರಕರಣದಲ್ಲಿ ತನಿಖೆ ನಡೆದು, ವಿಚಾರಣೆಗಳು ಜರುಗಿ ಸದ್ಯ ಕುಮಾರಸ್ವಾಮಿ ಜಾಮೀನು ಪಡೆದು ಸೇಫ್ ಝೋನ್ ‌ನಲ್ಲಿದ್ರು ಮತ್ತೊಂದೆಡೆ ತನಿಖೆ ಮಾತ್ರ ಮುಂದುವರೆದಿತ್ತು. ಆದ್ರೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಉನ್ನತ ಅಧಿಕಾರಿಗಳಿಗೆ ಕುಮಾರಸ್ವಾಮಿ ಪರೋಕ್ಷವಾಗಿ ಬೆದರಿಸುವ ಕೆಲಸ ಮಾಡಿದ್ದಾರೆ. ಆ ಮೂಲಕ ತನಿಖಾ ತಂಡದ ಸಿಬ್ಬಂದಿಯ ಸ್ಥೈರ್ಯವನ್ನು ಕುಗ್ಗಿಸುವ ಹುನ್ನಾರ ಮಾಡಿದ್ದಾರೆ. ಹೀಗಾಗಿ ತನಿಖಾ ಸಂಸ್ಥೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಚಂದ್ರಶೇಖರ್ ದೂರು ದಾಕಲಿಸಿದ್ದಾರೆ. 

ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ , ಮತ್ತು ಸುರೇಶ್ ಬಾಬು ಮಾತುಗಳು ತನಿಖೆಗೆ, ತನಿಖಾದಿಖಾರಿಗಳಿಗೆ ಬೆದರಿಕೆಯೊಡ್ಡಿದಂತೆ ಇದ್ದು, ಇದ್ರಿಂದ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಯತ್ನ ಮಾಡಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಐಪಿಎಸ್ ಅಧಿಕಾರಿ ಚಂದ್ರಶೇಕರ್ ಈ ದೂರು ದಾಖಲಿಸಿದ್ದಾರೆ.

Tags: ಐಪಿಎಸ್ ಅಧಿಕಾರಿ ಚಂದ್ರಶೇಖರ್ಕುಮಾರಸ್ವಾಮಿ ವಿರುದ್ಧ ಎಫ್ ಐ ಆರ್ನಿಖಿಲ್ ಕುಮಾರಸ್ವಾಮಿಸುರೇಶ್ ಬಾಬುಹೆಚ್.ಡಿ.ಕುಮಾರಸ್ವಾಮಿ
Previous Post

8 ಜನ ಐಎಎಸ್ ಅಧಿಕಾರಿಗಳ ಮೇಲೆ ದಾಖಲೆಗಳ ಸಮೇತ ಲೋಕಯುಕ್ತ ದೂರು ನೀಡಿದ ಎನ್ ಆರ್ ರಮೇಶ್..

Next Post

ಗದಗದ ಅನ್ನದಾನೇಶ್ವರ ಮಠದ ಭೂಮಿಯೂ ವಕ್ಫ್ ಆಸ್ತಿನ ?! ಸರ್ಕಾರದ ವಿರುದ್ಧ ಭಕ್ತರ ಆಕ್ರೋಶ ?! 

Related Posts

CBSE 3 ಭಾಷಾ ನೀತಿ: 6ನೇ ತರಗತಿ ವಿದ್ಯಾರ್ಥಿಗಳಿಗೆ ಬಿಗ್ ಅಪ್‌ಡೇಟ್, ಸುಪ್ರೀಂ ಕೋರ್ಟ್ ಮಹತ್ವದ ಸಲಹೆ
Top Story

CBSE 3 ಭಾಷಾ ನೀತಿ: 6ನೇ ತರಗತಿ ವಿದ್ಯಾರ್ಥಿಗಳಿಗೆ ಬಿಗ್ ಅಪ್‌ಡೇಟ್, ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

by ಪ್ರತಿಧ್ವನಿ
September 18, 2026
0

ನವದೆಹಲಿ: ಸಿಬಿಎಸ್‌ಇ (CBSE)ಯ ಮೂರು ಭಾಷಾ ನೀತಿಯನ್ನು 6ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಜಾರಿಗೊಳಿಸುವ ಬದಲು, 2027-28ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರುವ ಬಗ್ಗೆ...

Read moreDetails
ಮೋದಿ ಬರ್ತ್‌ಡೇಗೆ ಶುಭಾಶಯಗಳ ಮಹಾಪೂರ; ರಾಹುಲ್, ಖರ್ಗೆ, ಮುರ್ಮು ಹೇಳಿದ್ದೇನು 

ಮೋದಿ ಬರ್ತ್‌ಡೇಗೆ ಶುಭಾಶಯಗಳ ಮಹಾಪೂರ; ರಾಹುಲ್, ಖರ್ಗೆ, ಮುರ್ಮು ಹೇಳಿದ್ದೇನು 

September 17, 2026
ರಾತ್ರೋರಾತ್ರಿ ಸಿದ್ದರಾಮಯ್ಯ 9 ಅಡಿ ಪ್ರತಿಮೆ ಸ್ಥಾಪನೆ; ಬೆಳಗಿನ ಜಾವವೇ ಪಾಲಿಕೆ-ಪೊಲೀಸರ ಕಾರ್ಯಾಚರಣೆ!

ರಾತ್ರೋರಾತ್ರಿ ಸಿದ್ದರಾಮಯ್ಯ 9 ಅಡಿ ಪ್ರತಿಮೆ ಸ್ಥಾಪನೆ; ಬೆಳಗಿನ ಜಾವವೇ ಪಾಲಿಕೆ-ಪೊಲೀಸರ ಕಾರ್ಯಾಚರಣೆ!

September 17, 2026
ದಾಖಲೆಗಳಿದ್ದರೂ ಕ್ರಮವಿಲ್ಲವೇ? ಕೆಐಎಡಿಬಿ ಪ್ರಕರಣದಲ್ಲಿ ಸಚಿವರ ಮೌನಕ್ಕೆ ಕಾರಣವೇನು?

ದಾಖಲೆಗಳಿದ್ದರೂ ಕ್ರಮವಿಲ್ಲವೇ? ಕೆಐಎಡಿಬಿ ಪ್ರಕರಣದಲ್ಲಿ ಸಚಿವರ ಮೌನಕ್ಕೆ ಕಾರಣವೇನು?

September 17, 2026
ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

September 17, 2026
Next Post
ಗದಗದ ಅನ್ನದಾನೇಶ್ವರ ಮಠದ ಭೂಮಿಯೂ ವಕ್ಫ್ ಆಸ್ತಿನ ?! ಸರ್ಕಾರದ ವಿರುದ್ಧ ಭಕ್ತರ ಆಕ್ರೋಶ ?! 

ಗದಗದ ಅನ್ನದಾನೇಶ್ವರ ಮಠದ ಭೂಮಿಯೂ ವಕ್ಫ್ ಆಸ್ತಿನ ?! ಸರ್ಕಾರದ ವಿರುದ್ಧ ಭಕ್ತರ ಆಕ್ರೋಶ ?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada