• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಭವಿಷ್ಯದ ಸಿಎಂ ವಿಜಯೇಂದ್ರ! ವೀರಶೈವ ಮಹಾಸಭಾದಲ್ಲಿ ಪ್ರತಿಧ್ವನಿಸಿತು ವಾರಸುದಾರಿಕೆ!

Shivakumar by Shivakumar
November 1, 2021
in ಕರ್ನಾಟಕ, ರಾಜಕೀಯ
0
ಭವಿಷ್ಯದ ಸಿಎಂ ವಿಜಯೇಂದ್ರ! ವೀರಶೈವ ಮಹಾಸಭಾದಲ್ಲಿ ಪ್ರತಿಧ್ವನಿಸಿತು ವಾರಸುದಾರಿಕೆ!
Share on WhatsAppShare on FacebookShare on Telegram

ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನು ರಾಜಕೀಯವಾಗಿ ಕಟ್ಟಿಹಾಕುವ ಯತ್ನಗಳು ಅವರ ಸ್ವಪಕ್ಷೀಯರಿಂದಲೇ ನಡೆಯುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಲಿಂಗಾಯತ ಸಮುದಾಯದೊಳಗಿನ ತಮ್ಮ ಪ್ರಭಾವವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಮೂಲಕ ಪಕ್ಷದ ವರಿಷ್ಠರ ತಂತ್ರಗಾರಿಕೆಗೆ ತಿರುಗೇಟು ಕೊಡುವ ಯತ್ನ ಬಿಎಸ್ ವೈ ಮತ್ತು ವಿಜಯೇಂದ್ರ ಕಡೆಯಿಂದ ಬಿರುಸುಗೊಂಡಿದೆ.

ADVERTISEMENT

ತಮ್ಮ ತಂದೆಯನ್ನು ಮುಖ್ಯಮಂತ್ರಿ ಗಾದಿಯಿಂದ ಹೀನಾಯವಾಗಿ ಪದಚ್ಯುತಗೊಳಿಸಿದ ಬಿಜೆಪಿಯ ಹೈಕಮಾಂಡ್ ವಿರುದ್ಧ ಬಹಿರಂಗ ಬಂಡಾಯ ಸಾರದೇ ಹೋದರೂ, ವಿಜಯೇಂದ್ರ ತನ್ನ ಮತ್ತು ತಮ್ಮ ಕುಟುಂಬದ ರಾಜಕೀಯ ಹಿಡಿತ ಮತ್ತು ಪ್ರಭಾವ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಳೆದ ಎರಡು ತಿಂಗಳುಗಳಿಂದ ಎಡಬಿಡದೆ ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೆ ಓಡಾಡಿ ಸಮುದಾಯದ ಮಠಾಧೀಶರು, ಪ್ರಮುಖ ನಾಯಕರನ್ನು ಸಂಪರ್ಕಿಸುತ್ತಾ ಸಮುದಾಯದ ನಡುವೆ ತಮ್ಮ ನಾಯಕತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನಗಳನ್ನು ನಡೆಸಿದ್ದಾರೆ.

ತತಕ್ಷಣಕ್ಕೆ ಬಿಜೆಪಿಯ ಹೈಕಮಾಂಡ್ ವಿರುದ್ಧ ಯಾವುದೇ ರೀತಿಯ ಬಂಡಾಯ ಸಾರದೆ, ಪಕ್ಷದ ವಿರುದ್ಧ ಬಂಡೇಳದೆ, ಮುಂದಿನ ಒಂದು ದಶಕದ ಯೋಜನೆಗಳನ್ನು, ಭವಿಷ್ಯದ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಆ ದೂರಗಾಮಿ ಯೋಜನೆಗೆ ತಕ್ಕಂತೆ ತಳಮಟ್ಟದಿಂದ ಗಟ್ಟಿಯಾಗುವ ತಂತ್ರಗಾರಿಕೆಯನ್ನು ವಿಜಯೇಂದ್ರ ಚಾಲನೆಯಲ್ಲಿಟ್ಟಿದ್ದಾರೆ. ಹಾಗೆ ನೋಡಿದರೆ, ಅವರು ರಾಜಕೀಯವಾಗಿ ಹೀಗೆ ದೂರಗಾಮಿ ಯೋಜನೆ ಮುಂದಿಟ್ಟುಕೊಂಡು ಕೆಲಸ ಮಾಡತೊಡಗಿ ಈಗಾಗಲೇ ಎರಡು ವರ್ಷ ಕಳೆದಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ನ ಹಿಂದುತ್ವ ಸಿದ್ಧಾಂತವನ್ನು ಮೀರಿ ತಮ್ಮದೇ ಆದ ಪರ್ಯಾಯ ರಾಜಕೀಯ ವೇದಿಕೆಗೆ ಅವರು ಆಗಿನಿಂದಲೇ ಅಡಿಪಾಯ ಹಾಕಿದ್ದರು. ಅದರ ಭಾಗವಾಗಿ ನಾಡಿನ ಉದ್ದಗಲಕ್ಕೆ ಬಿಜೆಪಿ ಮತ್ತು ಸಂಘಪರಿವಾರರೇತನ ನಾಯಕರು, ಹೋರಾಟಗಾರರು, ಸಾಹಿತಿ-ಚಿಂತಕರು, ಹಿರಿಯ ಪತ್ರಕರ್ತರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಿದ್ದರು(ಪ್ರತಿಧ್ವನಿ ವರ್ಷದ ಹಿಂದೆಯೇ ಈ ಬಗ್ಗೆ ವರದಿ ಮಾಡಿತ್ತು).

ಇದೀಗ ಯಡಿಯೂರಪ್ಪ ಅವರ ಪದಚ್ಯುತಿಯ ಬಳಿಕ ಆ ಯೋಜನೆ ಇನ್ನಷ್ಟು ಬಿರುಸುಗೊಂಡಿದ್ದು, ರಾಜ್ಯದ ಉದ್ದಗಲಕ್ಕೆ ಸುತ್ತಾಡಿ ತಮ್ಮ ಮುಂದಿನ ಯೋಜನೆಗಳನ್ನು ಚರ್ಚಿಸಿ ಕಾರ್ಯಗತಗೊಳಿಸುವ ಮಾರ್ಗೋಪಾಯಗಳನ್ನು ಮತ್ತು ಅದಕ್ಕಾಗಿ ಸಮುದಾಯ ಮತ್ತು ಸಮುದಾಯದ ಆಚೆಯ ಪ್ರಮುಖರ ಸಲಹೆ- ಮಾರ್ಗದರ್ಶನ ಮತ್ತು ಬೆಂಬಲವನ್ನು ಯಾಚಿಸುತ್ತಿದ್ದಾರೆ.

ಇಂತಹ ತೆರೆಮರೆಯ ಬಿರುಸಿನ ತಯಾರಿಗಳ ಸುಳಿವರಿತೇ ಯಡಿಯೂರಪ್ಪ ಅವರೊಂದಿಗೆ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ್ದ (ವಾಸ್ತವವಾಗಿ ಆ ಕಾರಣದಿಂದಾಗಿಯೇ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂದ) ಆರ್ ಎಸ್ ಎಸ್ ಹಿನ್ನೆಲೆಯ ಬಿಜೆಪಿ ರಾಷ್ಟ್ರೀಯ ಪ್ರಮುಖ ಬಿ ಎಲ್ ಸಂತೋಷ್ ವಿಜಯದಶಮಿಯ ದಿನ ಖುದ್ದು ಯಡಿಯೂರಪ್ಪ ಮನೆಗೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ತಮ್ಮ ಆಪ್ತರ ಮೇಲಿನ ಐಟಿ ದಾಳಿಯಿಂದ ಕ್ರೋಧಗೊಂಡು ಉಪಚುನಾವಣೆಯಿಂದ ಸಂಪೂರ್ಣ ದೂರವುಳಿಯುವ ಸೂಚನೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ಲಿಂಗಾಯತ ನಾಯಕ ಬಿಎಸ್ ವೈ ಅವರನ್ನು ಸಮಧಾನಪಡಿಸಿ ವಿಶ್ವಾಸಕ್ಕೆ ಪಡೆಯುವುದು ಮತ್ತು ಪರ್ಯಾಯ ರಾಜಕಾರಣದ ಪ್ರಯತ್ನಗಳಿಗೆ ಬ್ರೇಕ್ ಹಾಕುವುದೇ ಆ ಭೇಟಿಯ ತಂತ್ರವಾಗಿತ್ತು ಎಂಬುದು ಕೂಡ ಗುಟ್ಟೇನಲ್ಲ.

ಆದರೆ, ಬಿ ವೈ ವಿಜಯೇಂದ್ರ ಅಂತಹ ಪ್ರಯತ್ನಗಳಿಗೆ, ತಂತ್ರಗಾರಿಕೆಗೆ ಸೊಪ್ಪು ಹಾಕಿಲ್ಲ ಎಂಬುದಕ್ಕೆ ಕಳೆದ ವಾರ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯಲ್ಲಿ ಸೂಚನೆಗಳು ಹೊರಬಿದ್ದಿವೆ. 117 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ನಡೆದ ಆ ಮಹತ್ವದ ಕಾರ್ಯಕಾರಿಣಿಯಲ್ಲಿ “ಭವಿಷ್ಯದ ಸಿಎಂ ಬಿ ವೈ ವಿಜಯೇಂದ್ರ. ಅದಕ್ಕಾಗಿ ಈಗಿನಿಂದಲೇ ದೃಢ ನಿರ್ಧಾರ ಕೈಗೊಂಡು, ತತಕ್ಷಣದಿಂದಲೇ ಸಿದ್ಧತೆ ಆರಂಭಿಸಿ” ಎಂಬ ಸಂದೇಶ ಸಮುದಾಯಕ್ಕೆ ರವಾನೆಯಾಗಿದೆ.

ಕಾರ್ಯಕಾರಿಣಿಯಲ್ಲಿ ಮಾತನಾಡಿದ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ “ಮುಂದಿನ ಸಿಎಂ ಅಭ್ಯರ್ಥಿಯನ್ನಾಗಿ ಬಿ ವೈ ವಿಜಯೇಂದ್ರ ಅವರ ಹೆಸರನ್ನು ಶಿಫಾರಸು ಮಾಡಬೇಕು. ಈಗಿನಿಂದಲೇ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಲದೆ ವಿಜಯೇಂದ್ರ ಅವರಿಗೆ ಸಿಎಂ ಆಗಲು ಎಲ್ಲಾ ರೀತಿಯ ಅರ್ಹತೆಯಿದೆ” ಎಂದು ಹೇಳುವ ಮೂಲಕ ಪ್ರಭಾವಿ ಲಿಂಗಾಯತ ಸಮುದಾಯದ ನಾಯಕತ್ವದ ವಿಷಯದಲ್ಲಿ ಯಡಿಯೂರಪ್ಪ ಬಳಿಕ ಅವರ ಪುತ್ರ ವಿಜಯೇಂದ್ರ ಅವರೇ ವಾರಸುದಾರರು ಮತ್ತು ಆ ಕಾರಣಕ್ಕಾಗಿ ಭವಿಷ್ಯದ ಮುಖ್ಯಮಂತ್ರಿಯಾಗಿ ಅವರನ್ನು ಮಾಡಲು ಸಮುದಾಯ ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಅಂದರೆ, ಕಳೆದ ಎರಡೂವರೆ ಮೂರು ವರ್ಷಗಳಿಂದ ವಿಜಯೇಂದ್ರ ಅವರು ದೂರಗಾಮಿ ಯೋಜನೆಯನ್ನು ರೂಪಿಸಿಕೊಂಡು ಹೆಣೆದಿದ್ದ ಕಾರ್ಯತಂತ್ರ ಇದೀಗ ಅವರ ಸಮುದಾಯದ ಮಟ್ಟದಲ್ಲಿ ಗಟ್ಟಿ ದನಿಯೊಂದನ್ನು ಸೃಷ್ಟಿಸಿದೆ. ಸಮುದಾಯದ ಪ್ರಭಾವಿ ವೇದಿಕೆಯ ಮೂಲಕವೇ ‘ಭವಿಷ್ಯದ ಸಿಎಂ ವಿಜಯೇಂದ್ರ’ ಎಂಬ ಹೇಳಿಕೆ ಹೊರಬಿದ್ದಿದೆ. ಅಂದರೆ, ಭಾರತೀಯ ಜನತಾ ಪಕ್ಷದ ಮಟ್ಟದಲ್ಲಿ ತಮ್ಮನ್ನು ಬದಿಗೆ ಸರಿಸುವ ಯತ್ನಗಳಿಗೆ ಪ್ರತಿಯಾಗಿ ವಿಜಯೇಂದ್ರ ಅವರು ಹೂಡಿದ ತಂತ್ರಗಾರಿಕೆಗೆ ಮೊದಲ ಯಶಸ್ಸು ದಕ್ಕಿದೆ ಮತ್ತು ಬಿಜೆಪಿಯ ಮತಬ್ಯಾಂಕ್ ಆದ ಸಮುದಾಯದ ನಡುವಿಂದಲೇ ಆ ಯಶಸ್ಸಿನ ಮೆಟ್ಟಿಲು ಆರಂಭವಾಗಿದೆ ಎಂಬುದು ಗಮನಾರ್ಹ!

ಆ ಹಿನ್ನೆಲೆಯಲ್ಲಿ ಬಳ್ಳಾರಿಯ ವೀರಶೈವ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯಲ್ಲಿ ಹೊರಹೊಮ್ಮಿದ ಈ ಅಭಿಪ್ರಾಯ ಬಿಜೆಪಿ ಮತ್ತು ಸಂಘಪರಿವಾರದ ಪಾಳೆಯದಲ್ಲಿ ಹುಟ್ಟಿಸಿರುವ ಕಂಪನಗಳ ತೀವ್ರತೆ ಎಷ್ಟು ಮತ್ತು ಪರಿಣಾಮವೇನು ಎಂಬುದನ್ನು ಕಾದುನೋಡಬೇಕಿದೆ!

Tags: BJPCovid 19ಆರ್ ಎಸ್ ಎಸ್ಪರಮಶಿವಯ್ಯಪ್ರತಿಧ್ವನಿಬಳ್ಳಾರಿಬಿ ಎಸ್ ಯಡಿಯೂರಪ್ಪಬಿ ವೈ ವಿಜಯೇಂದ್ರಬಿಜೆಪಿವೀರಶೈವ ಮಹಾಸಭಾಸಂಘಪರಿವಾರಸಿಎಂ ವಿಜಯೇಂದ್ರ
Previous Post

ನಾನು ಅಪ್ಪುಗಿಂತ 13 ವರ್ಷ ದೊಡ್ಡವನು , ಆದರೆ ಈಗ ನನ್ನ ಮಗುವನ್ನೇ ಕಳೆದುಕೊಂಡಷ್ಷು ನೋವಾಗಿದೆ : ಡಾ. ಶಿವರಾಜ್ ಕುಮಾರ್‌ ಭಾವುಕ

Next Post

66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಿತ್ತಿಚಿತ್ರಗಳ ಕನ್ನಡ ವರ್ಣಮಾಲೆ ಉದ್ಘಾಟಿಸಿದ ಶಾಸಕ ಎಸ್. ಆರ್. ವಿಶ್ವನಾಥ್

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್

ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
Next Post
66ನೇ ಕನ್ನಡ ರಾಜ್ಯೋತ್ಸವ  ಪ್ರಯುಕ್ತ ಭಿತ್ತಿಚಿತ್ರಗಳ ಕನ್ನಡ ವರ್ಣಮಾಲೆ ಉದ್ಘಾಟಿಸಿದ ಶಾಸಕ  ಎಸ್. ಆರ್. ವಿಶ್ವನಾಥ್

66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಿತ್ತಿಚಿತ್ರಗಳ ಕನ್ನಡ ವರ್ಣಮಾಲೆ ಉದ್ಘಾಟಿಸಿದ ಶಾಸಕ ಎಸ್. ಆರ್. ವಿಶ್ವನಾಥ್

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada